ಹೆಚ್. ಎಸ್.ಪ್ರತಿಮಾ ಹಾಸನ್ : ಕರುನಾಡ ಚೇತನ ಪ್ರಶಸ್ತಿಗೆ ಆಯ್ಕೆ.

ಬೆಂಗಳೂರು ಜುಲೈ.18

ಬಹುಮುಖ ಪ್ರತಿಭೆಯಾದ ಶ್ರೀಮತಿ ಹೆಚ್, ಎಸ್, ಪ್ರತಿಮಾ ಹಾಸನ್ ರವರಿಗೆ “ಕರುನಾಡ ಚೇತನ ಪ್ರಶಸ್ತಿಗೆ” ಆಯ್ಕೆ ಮಾಡಿರುವುದಾಗಿ ಚೇತನ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಚಂದ್ರಶೇಖರ್ ಮಾಡಲಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಖಿಲ ಕರ್ನಾಟಕ ಐದನೇ ಸಾಹಿತ್ಯ ಸಮ್ಮೇಳನ ಗಾಂಧಿ ಭವನ ಶಿವಾನಂದ ಸರ್ಕಲ್ ಬೆಂಗಳೂರು ಇಲ್ಲಿ 23:7:2023 ರಂದು ನಡೆಯಲಿದ್ದು. ಇವರನ್ನು ಕಾರ್ಯಕ್ರಮದಲ್ಲಿ ಕರುನಾಡ ಚೇತನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು ಇವರ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ಇವರ ಕ್ರಿಯಾಶೀಲತೆಯನ್ನು ಗಮನಿಸಿ ಮತ್ತು ಶಿಕ್ಷಕಿಯಾಗಿದ್ದು, ಪತ್ರಕರ್ತೆಯಾಗಿ , ಅಂಕಣಗಾರ್ತಿಯಾಗಿ, ಸಾಮಾಜಿಕ ಚಿಂತಕಿಯಾಗಿ, ತನ್ನದೇ ಆದಂತಹ ಸೇವೆಯನ್ನು ಸಲ್ಲಿಸುತ್ತಿರುವುದನ್ನು ಗಮನಿಸಿ. ಈ ಪ್ರಶಸ್ತಿಗೆ ಆಯ್ಕೆ ಮಾಡಿಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರು ಹಲವಾರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯಾತಿ ಗಣ್ಯರು, ಸಾಹಿತಿಗಳು, ಸಮಾಜ ಸೇವಕರು, ಎಲ್ಲಾ ಕ್ಷೇತ್ರದ ಗಣ್ಯರು ಭಾಗವಹಿಸುವುದಾಗಿ ತಿಳಿಸಿದರು. ಪ್ರಶಸ್ತಿ ಪಡೆಯುತ್ತಿರುವ ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಹಾಸನದ ಜಿಲ್ಲಾಧ್ಯಕ್ಷರು, ಕರ್ನಾಟಕ ಮುಕ್ತಕ ಕವಿಪರಿಷತ್ತಿನ ಹಾಸನ ಜಿಲ್ಲಾಧ್ಯಕ್ಷರರು , ರಾಜ್ಯ ಒಕ್ಕಲಿಗರ ಕೆಂಪೇಗೌಡರ ಯುವ ಸೇನೆಯ ಮಹಿಳಾ ಸಂಘಟನಾ ಕಾರ್ಯದರ್ಶಿ, ವಾತ್ಸಲ್ಯ ಫೌಂಡೇಶನ್ ವೃದ್ಧ ಆಶ್ರಮದ ಕಾರ್ಯಕರ್ತೆಯಾದ,ಇನ್ನೂ ಹಲವು ಸಂಸ್ಥೆ ಗಳ ಸದಸ್ಯರು ಆದ ಶ್ರೀಮತಿ ಹೆಚ್. ಎಸ್ ಪ್ರತಿಮಾ ಹಾಸನ್ ರವರಿಗೆ ತಾಯಿ ಶ್ರೀಮತಿ ನೀಲಮ್ಮ ಸುರೇಶ್ ಮತ್ತು ಸೋದರ ಹೆಚ್. ಎಸ್. ಮಂಜುನಾಥ್ ( ಆರೋಗ್ಯ ನಿರೀಕ್ಷಣಾಧಿಕಾರಿ ), ಸೋದರ ಸಾಗರ್ , ಸೋದರಿ ಶ್ರೀಮತಿ ಹೆಚ್ ಎಸ್ ರಾಧಾ (ಶಿಕ್ಷಕಿ ) ಎಲ್ಲಾ ಕುಟುಂಬದ ವರ್ಗದವರು, ಪತ್ರಕರ್ತರು,ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ಸಂಘಟನೆಕಾರರು,ಅಭಿನಂದನೆಗಳನ್ನು ತಿಳಿಸಿದ್ದಾರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button