ಕೂಡ್ಲಿಗಿ:ಅಂಬೇಡ್ಕರ್ ಪರಿ ನಿರ್ವಾಣ ದಿನಾಚರಣೆ ಭಾವ ಚಿತ್ರಕ್ಕೆ ಗಣ್ಯರಿಂದ – ಪುಷ್ಪ ಸಮರ್ಪಣೆ.
ಕೂಡ್ಲಿಗಿ ಡಿಸೆಂಬರ್.7

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಡಿ.6-ರಂದು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ರವರ ವೃತ್ತದಲ್ಲಿ, ಅಂಬೇಡ್ಕರ್ ಸಂಘಟನೆ ಹಾಗೂ ದಲಿತ ಸಂಘಟನೆಗಳಿಂದ ಡಾ. ಬಿ.ಆರ್.ಅಂಬೇಡ್ಕರ್ ರವರ 67. ನೇ ಪರಿ ನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಬಿ.ಆರ್.ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಗಣ್ಯರಿಂದ ಪುಷ್ಪ ಸಮರ್ಪಣೆ ಮಾಡಲಾಯಿತು, ನಂತರ ದಲಿತ ಮಖಂಡ ಎಸ್.ದುರುಗೇಶ ರವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಇಡೀ ಪ್ರಪಂಚದಲ್ಲಿಯೇ ಅವರು ನಡೆದು ಬಂದ ದಾರಿಯೂ ವಿಶ್ವದಲ್ಲಿ ವಿಶ್ವ ಶ್ರೇಷ್ಠ ವಿಶ್ವಜ್ಞಾನಿ, ಭಾರತ ದೇಶಕ್ಕೆ ಸಂವಿಧಾನವನ್ನು ಕೊಟ್ಟು ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಹಕ್ಕುಗಳು ಸರ್ವರಿಗೂ ಸಮವಾಗಿ ಸಿಗುವಂತೆ ರಚಿಸಿರುವ ಅವರು ಈ ಯುಗಕ್ಕೆ ಹಾಗೂ ಎಲ್ಲಾ ಯುಗಕ್ಕೂ ಸೂರ್ಯ ಚoದ್ರ ಇರುವವರೆಗೂ ಅವರ ಆದರ್ಶಗಳು ಎಲ್ಲಾ ಸಮಾಜಕ್ಕೂ ವಿಶ್ವಜ್ಞಾನಿಯಾಗಿ ಸ್ವೀಕರಿಸಿದರಿಂದ ಅಂಬೇಡ್ಕರ್ ರವರು ಎಲ್ಲಾರೂ ಹೃದಯದಗಲ್ಲಿ ಅಜರಾಮರರಾಗಿದ್ದಾರೆ ಎಂದು ಎಸ್. ದುರುಗೇಶ್ ತಿಳಿಸಿದರು.

ಸೇರಿದಂತ ವಿವಿಧ ದಲಿತ ಮುಖಂಡರು ಮಾತನಾಡಿ ನುಡಿ ನಮನ ಸಲ್ಲಿಸಿದರು. ತಾಪಂ ಕಾರ್ಯ ನಿರ್ವಹಣಾಧಿಕಾರಿ ವೈ.ರವಿಕುಮಾರ್, ಸಿಪಿಐ ತಳವಾರ ಸುರೇಶ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪಿರೋಜ್ ಖಾನ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ಪತ್ರಕರ್ತ ಹಾಗೂ ದಲಿತ ಮುಖಂಡರಾದ ಸಾಲುಮನಿ ರಾಘವೇಂದ್ರ, ಚಲುವಾದಿ ಉಮೇಶ, ಶಾಸಕರ ಆಪ್ತ ಸಹಾಯಕ ಗೊಂಬೆ ಮರುಳಸಿದ್ದಪ್ಪ, ಕಲ್ಲಳ್ಳಿ ಬಸಪ್ಪ, ಮಾಜಿ ಸೈನಿಕ ರಮೇಶ, ಹೊಸಹಳ್ಳಿ ಗಂಗಣ್ಣ, ಗೆದ್ದಲಗಟ್ಟೆ ಹನುಮೇಶ, ಪೌರ ಸೇವಾ ಕಾರ್ಮಿಕರ ರಾಜ್ಯಧ್ಯಕ್ಷ ಪ್ರಭಾಕರ, ಡಿ.ಹೆಚ್.ಮರಿಸ್ವಾಮಿ, ಬಿ .ಮಹೇಶ, ಬಂಡೆ ರಾಘವೇಂದ್ರ, ಹೆಗ್ಡಾಳ್ ಮಹೇಶ, ಹಾಗೂ ಅಮ್ಮನಕೇರಿ ತಿಪ್ಪೇಸ್ವಾಮಿ, ಐಸಿಟಿಸಿ ಜಿಗೇನಹಳ್ಳಿ ಪ್ರಶಾಂತ ಕುಮಾರ, ನಾಗರಾಜ, ಗುಡೇಕೋಟೆ ವಿಶಾಲಾಕ್ಷಮ್ಮ ರಾಜಣ್ಣ, ತುಂಬರಗುದ್ದಿ ದುರುಗೇಶ, ಗ್ರಾಮಲೆಕ್ಕಿಗ ನವೀನಕುಮಾರ, ಬಿಸಿಎಮ್ ಅಧಿಕಾರಿ ಪಂಪಾಪತಿ, ಸಮಾಜ ಕಲ್ಯಾಣಾಧಿಕಾರಿ ಜಗದೀಶ, ಸಿಡ್ಲಪ್ಪ , ಚೌಡಪ್ಪ, ಮೂಗಣ್ಣ, ವಕೀಲ ಡಿ.ಹೆಚ್.ದುರುಗೇಶ,ಸೇರಿದಂತೆ. ಪಟ್ಣಣ ಸೇರಿದಂತೆ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು, ವಿವಿಧ ಇಲಾಖಾಧಿಕಾರಿಗಳು, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು. ವಿವಿಧ ಜನಪ್ರತಿನಿಧಿಗಳು, ಅನೇಕ ದಲಿತ ಸಮುದಾಯ ಹಾಗೂ ವಿವಿಧ ಸಮುದಾಯಗಳ ಮುಖಂಡರು. ಹಾಗೂ ರೈತರು, ದಲಿತ ಮಹಿಳೆಯರು, ಅಂಬೇಡ್ಕರ್ ಹಮಾಲಿ ಸಂಘಟನೆಯ ಪದಾಧಿಕಾರಿಗಳು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ