ಅಭಿಮಾನಿಗಳಿಂದ ಬಿ. ಶ್ರೀ ರಾಮುಲು ರವರ ಹುಟ್ಟು ಹಬ್ಬ ಆಚರಣೆ.
ಮಸ್ಕಿ ಆ.09

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕರ್ನಾಟಕದ ಯುವಕರ ಕಣ್ಮಣಿ ಬಿ.ಶ್ರೀರಾಮುಲು ರವರ ಜನ್ಮದಿನದ ಅಂಗವಾಗಿ ಕಲ್ಯಾಣ ಕರ್ನಾಟಕ ಬಿ.ಶ್ರೀರಾಮುಲು ಅಭಿಮಾನಿಗಳ ಸಂಘ (ರಿ) ತಾಲೂಕ ಘಟಕದ ವತಿಯಿಂದ ಹಣ್ಣು ಹಾಗೂ ಬ್ರೆಡ್ ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.ಕರ್ನಾಟಕದ ಯುವಕರ ಕಣ್ಮಣಿ ಬಿ. ಶ್ರೀರಾಮುಲು ರವರ ಜನ್ಮ ದಿನದ ಅಂಗವಾಗಿ ಕಲ್ಯಾಣ ಕರ್ನಾಟಕ ಬಿ. ಶ್ರೀರಾಮುಲು ಅಭಿಮಾನಿಗಳ ಸಂಘ (ರಿ) ತಾಲೂಕ ಘಟಕದ ವತಿಯಿಂದ ಮಸ್ಕಿಯ ಆರಾಧ್ಯ ದೈವ ಶ್ರೀ ಭ್ರಮರಾಂಬ ದೇವಿಗೆ ಪೂಜೆ ಸಲ್ಲಿಸಿ ನಂತರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ರೋಗಿಗಳಿಗೆ ಹಾಲು, ಸೇಬು, ಖರ್ಜೂರ ಇನ್ನೂ ಇತರೇ ಹಣ್ಣುಗಳನ್ನು ವೈದ್ಯರಾದ ಮೌನೇಶ ರವರ ಸಮ್ಮುಖದಲ್ಲಿ ಎಲ್ಲಾ ಅಭಿಮಾನಿಗಳು ರೋಗಿಗಳಿಗೆ ವಿತರಣೆ ಮಾಡುವ ಮೂಲಕ ಸರಳತೆಯಿಂದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಬಿ. ಶ್ರೀರಾಮುಲು ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಆರ್.ಕೆ ನಾಯಕ ಮಸ್ಕಿ, ಸಿದ್ದಪ್ಪ ನಾಯಕ ಮೇಟಿ, ದೇವಣ್ಣ ಮಾಸ್ತರ, ನಾಗರಾಜ್, ಅಶೋಕ ಟೈಲರ್, ಶಿವಕುಮಾರ್ ಹಳ್ಳಿ, ಹನುಮಂತ ಉಪ್ಪಾರ, ಆಂಜನೇಯ ಮೋಚಿ, ವೀರೇಶ್ ಹಳ್ಳಿ, ಮೌನೇಶ ಹಸಮಕಲ, ನಾಗರಾಜ್ ಚಿಗರಿ, ಅಯ್ಯಪ್ಪ ನಾಯಕ, ಮೌನೇಶ್ ನಾಯಕ ಹಳ್ಳಿ, ಮಲ್ಲು ಬಟ್ಟೆ ಅಂಗಡಿ, ಕನಕನಗೌಡ ಸೇರಿದಂತೆ ಇನ್ನಿತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.