ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಲು ಎರಡು ಎಕರೆ ಮಂಜೂರಿಸಲು ಉನ್ನತ ಅಧಿಕಾರಿಗಳು ಜೊತೆ ಮಾತನಾಡಿದ ಶಾಸಕರು.

ಮೊಳಕಾಲ್ಮುರು ಡಿಸೆಂಬರ್.14

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಈ ದಿನ ಮೊಳಕಾಲ್ಮೂರು ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ಜಿ ಯವರು ಮೊಳಕಾಲ್ಮೂರು ತಾಲೂಕಿಗೆ ಡಾ. ಬಿಆರ್ ಅಂಬೇಡ್ಕರ್ ಭವನವನ್ನು ನಿರ್ಮಿಸಲು ಮತ್ತು ಬಹುಸಂಖ್ಯಾತ ಎಸ್ಸಿ ಜನಾಂಗದ ಸಾಮಾಜಿಕ ಅಭಿವೃದ್ಧಿಗಾಗಿ ಎರಡು ಎಕರೆ ಜಮೀನನ್ನು ಮಂಜೂರು ಮಾಡುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಮತ್ತು ಬೆಂಗಳೂರು ರೆವೆನ್ಯೂ ಕಮಿಷನರ್ ಹಾಗೂ ಇತರೆ ಉನ್ನತಾಧಿಕಾರಿಗಳ ಜೊತೆ ಮಾತನಾಡಿದರು ನಾಯಕನಹಟ್ಟಿ ಒಳ ಮಠದ ಹತ್ತಿರ ಒಂದು ಕೋಟಿ 50 ಲಕ್ಷ ಸೇತುವೆ ನಿರ್ಮಾಣ ಮಾಡಿಸಿದರು ಮತ್ತು ರಾಂಪುರ ಗ್ರಾಮದಲ್ಲಿ 18 ಲಕ್ಷದ 50,000 ನಾಡ ಕಚೇರಿಯನ್ನು ಸಹ ಭೂಮಿ ಪೂಜೆ ಮಾಡಿದರು ಕೋನಸಾಗರ ಗ್ರಾಮದಲ್ಲಿ ಬರಿ ಎಸ್ ಸಿ ಎಸ್ ಟಿ ಜನಾಂಗದವರು ಹೆಚ್ಚು ಇದ್ದು ಆರು ಕೋಟೆ 50 ಲಕ್ಷ ವೆಚ್ಚದ ವಸತಿ ಶಾಲೆಯನ್ನು ಸಹ ಭೂಮಿ ಪೂಜೆ ಮಾಡಿಸಿದಂತ ಶಾಸಕರು ಯಾವುದೇ ಒಳ್ಳೆ ಯೋಜನೆಗಳು ಆಗಬೇಕಾದರೆ ನಿಜವಾದಂತ ಎನ್ ವೈ ಗೋಪಾಲಕೃಷ್ಣ ಶಾಸಕರಿಂದಲೇ ಮಾತ್ರ ಇಂಥಾ ಯೋಜನೆಗಳು ಅಭಿವೃದ್ಧಿಗಳು ಆಗುತ್ತವೆ ಸಂವಿಧಾನಾತ್ಮಕವಾಗಿ ಎಲ್ಲಾ ಸಮುದಾಯದ ದಲಿತರಿಗೆ ಆಗಬೇಕಾದ ಯೋಜನೆಗಳನ್ನು ರೂಪಿಸುತ್ತಾರೆ ಶಾಸಕರು ಮೊಳಕಾಲ್ಮೂರು ಕ್ಷೇತ್ರದ ದಲಿತ ಮುಖಂಡರು ಹಾಗೂ ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷ ಪ್ರಕಾಶ್ ಹಾಜರಿದ್ದು ಎನ್ ವೈ ಗೋಪಾಲಕೃಷ್ಣ ಜಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button