ಶಾಲೋಮ್ ಪ್ರಾರ್ಥನಾಲಯ ದಿಂದ 4.ನೇ ವರ್ಷದ ರಕ್ತದಾನ ಶಿಬಿರ.
ಕೂಡ್ಲಿಗಿ ಡಿಸೆಂಬರ್.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ 16ನೇ ವಾರ್ಡಿನಲ್ಲಿ ಎನ್ಎಚ್ 50 ಪಕ್ಕ ದಲ್ಲಿ ಬರುವ ಶಾಲೋಮ್ ಪ್ರಾರ್ಥನಾಲಯದಲ್ಲಿ ಸಭೆಯ ಸೇವಕರಾದಂತ ಪರಶುರಾಮ್ ಪಾಸ್ಟರ್ ಹಾಗೂ ಸಭೆಯ ಸದಸ್ಯರು ಹಾಗೂ ಸರ್ವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನ ಶಿಬಿರ ಯಶಸ್ವಿ ಗೊಳಿಸಲು ದಿನಾಂಕ 15- 12- 2023 ರ ಶುಕ್ರವಾರ ರಂದು ನಡೆಯುವ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವನ್ನು ಸತತವಾಗಿ 4ನೇ ವರ್ಷದ ಕ್ರಿಸ್ ಮಸ್ ಹಬ್ಬದ ಪ್ರಯುಕ್ತವಾಗಿ ” ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತೀ ಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡುವುದರಿಂದ ಪ್ರತಿ ದಿನಾಲೂ ನಡೆಯುವಂತಹ ನಾನಾ ಘಟನೆಗಳಿಂದ ಅನೇಕ ರೋಗಗಳಿಗೆ ರಕ್ತದ ಅವಶ್ಯಕತೆ ಇರುವಂತಹ ರೋಗಿಗಳಿಗೆ ಹಾಗೂ ಅಪಘಾತದಲ್ಲಿ ಉಂಟಾದಂತಹ ವ್ಯಕ್ತಿಗಳಿಗೆ, ಗರ್ಭಿಣಿ ಸ್ತ್ರೀಯರಿಗೂ,

ಆರೋಗ್ಯದಲ್ಲಿ ತೊಂದರೆ ಆದಂತಹ ಕೆಲವೊಂದು ಸಂದರ್ಭದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೂ ರಕ್ತದ ಅವಶ್ಯಕತೆ ಇರುವುದರಿಂದ ರಕ್ತ ದಾನಿಗಳಿಂದ ಮಾತ್ರ ಇನ್ನೊಬ್ಬ ವ್ಯಕ್ತಿಗಳನ್ನು ಜೀವ ರಕ್ಷಣೆ ಮಾಡಲು ಸಾಧ್ಯ ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಜೀವದ ರಕ್ಷಣೆ ಕಾಪಾಡಲು ಸಾಧ್ಯ ರಕ್ತದಾನ ಮಾಡುವುದರಿಂದ ಆಗುವಂತ ಪ್ರಯೋಜನ ಗಳೆಂದರೆ * ರಕ್ತದಾನ ಮಾಡುವುದರಿಂದ ದಾನಿಗಳ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ,* ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯ ತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ,* ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ.* ಹೃದಯಾ ಘಾತವನ್ನು ಶೇಕಡ 80ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ* ರಕ್ತದ ಒತ್ತಡ ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ*ಯಾರು ರಕ್ತದಾನ ಮಾಡಬಹುದು ಎಂದರೆ* ಹೆಣ್ಣು ಮಕ್ಕಳೆಂಬ ಭೇದವಿಲ್ಲದೆ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು* ಗಂಡಸರು 3 ತಿಂಗಳು ಒಮ್ಮೆ ಮತ್ತು ಹೆಂಗಸರು 4 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು *ರಕ್ತದಾನ ಮಾಡುವ ದಾನಿಯ ದೇಹದ ತೂಕ 45 ಕೆಜಿ ಗಿಂತ ಎಚ್ಚಿರಬೇಕು* ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು* ಸಿಸ್ಟರ್ಲಿಕ್ ರಕ್ತ ದೊತ್ತಡವು 100 ರಿಂದ 140 ಇದ್ದು ಡಯಲ್ ಸ್ಟೋಲೈಕ್ ಒತ್ತಡವು 70ರಿಂದ 100 ಇರುವವರು ರಕ್ತದಾನ ಮಾಡಬಹುದು ಎಂದು ತಿಳಿಸಿದ್ದಾರೆ, ಹರ್ಷದಿಂದ ಬನ್ನಿ ರಕ್ತದಾನ ಮಾಡಿರಿ ರಕ್ತದಾನ ಮಾಡಿ ಜೀವ ಉಳಿಸಿ ಸರ್ವ ಆಸಕ್ತ ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಸುಸ್ವಾಗತ ಶಾಲೋಮ್ ಪ್ರಾರ್ಥನಾಲಯ ಸೇವಕರು ಪರಶುರಾಮ್ ಪಾಸ್ಟರ್ ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ