ಪ್ರಾಥಮಿಕ ಶಾಲಾ ಶಿಕ್ಷಕಿ ಶಶಿಕಲಾ ಕುಲಕರ್ಣಿ ಯವರಿಗೆ – ಸಾವಿತ್ರಿಬಾಯಿ ಪುಲೆ ಪ್ರಶಸ್ತಿ.
ಸುರಕೋಡ ಮಾ.06

ನರೇಗಲ್ಲ ಪಟ್ಟಣದ ನಿವಾಸಿ ಸುರಕೋಡ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ಶಶಿಕಲಾ ಕುಲಕರ್ಣಿ ಯವರಿಗೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ಇತ್ತೀಚಿಗೆ ಜರುಗಿದ ಸಮಾರಂಭದಲ್ಲಿ ಶಿಕ್ಷಕಿ ಶಶಿಕಲಾ ಈ ಪ್ರಶಸ್ತಿ ಸ್ವೀಕರಿಸಿದರು.ಕತೆ, ಕವನ, ಹನಿಗವನ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವ ಶಿಕ್ಷಕಿ ಶಶಿಕಲಾ ಒಬ್ಬ ಉತ್ತಮ ಭಾಷಣಗಾರ್ತಿಯೂ ಆಗಿದ್ದಾರೆ. ಈಗಾಗಲೆ ನಾಡಿನ ಹಲವಾರು ಕಡೆಗಳಲ್ಲಿ ನಡೆದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿ ಗೋಷ್ಠಿಗಳಲ್ಲಿ ಕವನ ವಾಚಿಸಿ ಸೈ ಎನ್ನಿಸಿ ಕೊಂಡಿರುವು ದಲ್ಲದೆ ಅನೇಕ ಪ್ರಶಸ್ತಿ, ಬಹುಮಾನಗಳಿಗೂ ಭಾಜನ ರಾಗಿದ್ದಾರೆ.ಇಂಥಹ ಪ್ರಶಸ್ತಿ ಇವರ ವ್ಯಕ್ತಿತ್ವಕ್ಕೆ ಬಂದಿರುವುದು ಉತ್ತಮ ಹಾಗೂ ಮಹತ್ವವಾದದ್ದು ಹೀಗೆ ಇವರ ವ್ಯಕ್ತಿತ್ವದ ಹಿರಿಮೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ.ರೋಣ.ಗದಗ