ಕೇಂದ್ರದ ಬರ ಅಧ್ಯಯನ ತಂಡದ ಕಾರು ಬಂದಿದ್ದು ತಡವಿಲ್ಲ – ಮರಳಿ ಹೊರಟು ಹೋಗಿದ್ದು ತಡವಿಲ್ಲ.

ಹುನಗುಂದ ಅಕ್ಟೋಬರ್.8

ಕೇಂದ್ರದ ಬರ ಅಧ್ಯಯನದ ತಂಡದ ಕಾರು ಬಂದಿದ್ದು ತಡವಿಲ್ಲ.ಅಧಿಕಾರಿಗಳು ಕಾರಿನಿಂದ ಇಳಿದಿದ್ದು ತಡವಿಲ್ಲ.ಹೊಲದ ಕಡೆಗೆ ಒಂದಿಷ್ಟು ಕಣ್ಣು ಹಾಯಿಸಿದ್ದೇ ತಡ ಮತ್ತೇ ಕಾರು ಹತ್ತಿ ಹೊರಟು ಹೋಗಿದ್ದು ತಡವಿಲ್ಲ.ಕೇವಲ ನಾಮಕಾವಸ್ತೆ ಬರ ವೀಕ್ಷಿಸಿ ಮರಳಿದ ಕೇಂದ್ರ ಬರ ಅಧ್ಯಯನ ತಂಡ.ಇದು ರೈತರಿಗೆ ಎಷ್ಟರ ಮಟ್ಟಿಗೆ ವರವಾಗಲಿದೆ ಎನ್ನುವುದು ಡಜನ್ ಗಟ್ಟಲೇ ಪ್ರಶ್ನೆ ರೈತರ ವಲಯದಲ್ಲಿ ಸಧ್ಯ ಕಾಡುತ್ತಿದೆ.ಮಳೆಯಂತೂ ಮೊದಲೇ ಹೋಯಿತು,ಸಾಲಶೂಲ ಮಾಡಿ ಬಿತ್ತಿದ ಬೀಜಕ್ಕೆ ಬೆಳೆಯು ಇಲ್ಲ.ಸರ್ಕಾರ ಬರ ಪರಿಹಾರ ಘೋಷಿಸದಿದ್ದರೇ ರೈತರ ವಿಷ ಒಂದೇ ಮದ್ದು ಎನ್ನುವ ಪರಸ್ಥಿತಿಯಲ್ಲಿ ಶನಿವಾರ ಹುನಗುಂದ ತಾಲೂಕಿಗೆ ಆಗಮಿಸಿದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜೀತ್‌ಕುಮಾರ ಸಾಹು ನೇತೃತ್ವದ ನಾಲ್ಕು ಜನರ ಕೇಂದ್ರ ಬರ ವೀಕ್ಷಣೆ ತಂಡ ತಾಲೂಕಿನ ನಂದನೂರ,ಹುನಗುಂದ,ಬೆವಿನಮಟ್ಟಿ,ರಕ್ಕಸಗಿ,ಸೂಳೇಬಾವಿ ಸೇರಿದಂತೆ ನಾಲ್ಕು ಕಡೆಗಳಿಗೆ ಕೇವಲ ಒಂದೇ ಒಂದು ಗಂಟೆಯಲ್ಲಿ ಭೇಟಿ ನೀಡಿ ರೈತರ ಬರದ ಛಾಯೆಯ ಕುರಿತು ತಮ್ಮ ಸಂಕಷ್ಟ ತೋಡಿಕೊಂಡರೂ ಅವರ ಕಷ್ಟ ಮಾತು ಬಂದ ಅಧಿಕಾರಿಗಳ ತಂಡದ ಕಿವಿ ಕೇಳಿಸಿದರೂ ಕೂಡಾ ಅದು ಅವರಿಗೆ ಅರ್ಥವಾಯಿತೋ ಇಲ್ಲಯೋ ಗೊತ್ತಿಲ್ಲ ಕಷ್ಟವನ್ನು ಕೇಳದೇ ಅರ್ಜೆಂಟ್ ಅರ್ಜೆಂಟಾಗಿ ಮುಗಿಸಿ ದೆಹಲಿ ಕಡಗೆ ಪ್ರಯಾಣ ಬೆಳೆಸುವ ಉದ್ದೇಶವಿತ್ತೇನೋ ಗೊತ್ತಿಲ್ಲ.

ನಾವು ಬಂದೆವಾ…ನಾವು ಬಂದೆವಾ… ಹುನಗುಂದ ತಾಲೂಕ ಬರ ವೀಕ್ಷಣೆಗೆ.ಬಂದು ಮರಳಿ ಹೊಂಟೇವಾ…ನಾವು ಹೊಂಟೇವಾ… ಎನ್ನುವ ಗೀಗೀ ಪದ ಹಾಡಿ ಬಂದ ದಾರಿಗೆ ಸುಂಕವಿಲ್ಲ ಎನ್ನುವ ರೀತಿ ಕೇಂದ್ರದ ಬರ ಅಧ್ಯಯನ ತಂಡ ಬಂದು ಹೋಯಿತು ಇದರಿಂದ ರೈತರ ಸಂಕಷ್ಟ ಅವರಿಗೆ ತಿಳಿಯಿತೋ ಇಲ್ಲವೋ ಒಂದು ಗೊತ್ತಿಲ್ಲದ್ದಂತಾಗಿದೆ.ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ಬಿತ್ತಿದ ಗೋವಿನಜೋಳ,ಕಬ್ಬು,ತೋಗರಿ ಸೇರಿದಂತೆ ಅನೇಕ ಬೆಳೆಗಳು ಮಳೆಯಿಲ್ಲದೇ ನೆಲ ಕಚ್ಚಿ ಹೋಗಿದ್ದು.ರೈತರು ಸಾಲಶೂಲ ಮಾಡಿ ಹಾಕಿದ ಬೀಜ ಗೊಬ್ಬರಕ್ಕೆ ಮಾಡಿದ ಸಾಲ ತೀರಿಸಲು ಆಗದೇ ನಿತ್ಯ ನರಕಯಾತನೆಯನ್ನು ಅನುಭವಿಸುವಂತಾಗಿದೆ.ಸಧ್ಯ ಕೇಂದ್ರ ಬರ ಅಧ್ಯಯನ ತಂಡ ವೀಕ್ಷಿಸಿ ಕೇಂದ್ರಕ್ಕೆ ವರದಿ ಆಧಾರದ ಮೇಲೆ ರೈತರ ಭವಿಷ್ಯ ನಿಂತಿದೆ.ಸಧ್ಯ ಬರ ಅಧ್ಯಯನ ತಂಡ ನಾಮಕಾವಸ್ತೆ ಬಂದು ಹೋಗಿದ್ದು ನೋಡಿದರೇ ಎಷ್ಟರ ಮಟ್ಟಿಗೆ ರೈತರಿಗೆ ಅನುಕೂಲವಾಗುವುದೋ ಎನ್ನುವುದ್ದನ್ನು ಕಾಯ್ದು ನೋಡಬೇಕಿದೆ.ಈ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಜಿ.ಪಂ ಸಿಇಓ ಶಶಿಧರ ಕುರೇರ,ಎಸ್ಪಿ ಅಮರನಾಥ ರಡ್ಡಿ,ಉಪಾವಿಭಾಗಾಧಿಕಾರಿ ಶ್ವೇತಾ ಬೀಡಿಕರ,ತಹಶೀಲ್ದಾರ ನಿಂಗಪ್ಪ ಬಿರಾದಾರ ಸೇರಿದ್ದಂತೆ ಅನೇಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button