ಭಕ್ತರಿಂದ ರಜತ ಪಾದುಕೆ ಅರ್ಪಣೆ – ತುಲಾಭಾರ ಸೇವೆ.

ನಾಲವಾರ ಅ.03

ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾ ಸಂಸ್ಥಾನ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೋತ್ಸವ ಹಾಗೂ ಹಿಂದಿನ ಪೀಠಾಧಿಪತಿಗಳಾದ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಾರಾಧನಾ ಮಹೋತ್ಸವವು ಆಯುಧ ಪೂಜೆಯ ದಿನ ದಂದು ಸಹಸ್ರಾರು ಭಕ್ತರ ಮಧ್ಯೆ ಭಕ್ತಿ ಭಾವದೊಂದಿಗೆ ನೆರವೇರಿತು.

ಭೀಮಾ ನದಿಯ ಪ್ರವಾಹ, ಅತಿವೃಷ್ಠಿಯ ಕಾರಣದಿಂದ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿರುವುದರಿಂದ, ಜನ್ಮ ದಿನದ ಅದ್ಧೂರಿ ಆಚರಣೆಗೆ ಪೂಜ್ಯರು ತಡೆ ಒಡ್ಡಿದ್ದರು ಸಹ, ಬುಧವಾರ ಪ್ರಾತಃ ಕಾಲದಿಂದಲೇ ತಂಡೋಪ ತಂಡಗಳಾಗಿ ಸಹಸ್ರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ, ಪೂಜ್ಯರಿಗೆ ಗುರು ವಂದನೆ ಸಲ್ಲಿಸಿದರು.

ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ, ಲೀಲಾಮೂರ್ತಿ, ಪವಾಡಪುರುಷ, ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ರಾತ್ರಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಪೂಜ್ಯರಿಂದ ಮಹಾ ಮಂಗಳಾರತಿ ನೆರವೇರಿತು.

ಶ್ರೀ ಸಿದ್ಧತೋಟೇಂದ್ರ ಸುವರ್ಣ ಭವನದಲ್ಲಿ ನಡೆದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ, ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸರಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಠದ ಸದ್ಭಕ್ತರಾದ ಸಂಗಣ್ಣ ಸಾಹು ತಿಪ್ಪ ಮತ್ತಿನ್ಮಡು ಅವರಿಂದ ನಾಣ್ಯಗಳಿಂದ ಪೂಜ್ಯರ ತುಲಾಭಾರ ಸೇವೆ ನೆರವೇರಿಸಿ ಭಕ್ತಿ ಸಮರ್ಪಣೆ ಮಾಡಿದರು ಶ್ರೀ ಮಠದ ಇನ್ನೋವ ಭಕ್ತಾರಾದ ಶ್ರೀ ಶಿವಲಿಂಗ ಭೀಮನಹಳ್ಳಿ ಬೆಂಗಳೂರು ಅವರಿಂದ ರಜತ ಪಾದುಕೆಗಳನ್ನು ಸಮರ್ಪಿಸಿ ಕೃತಾರ್ಥರಾದರು.

ಪೂಜ್ಯರ 61 ನೆಯ ಜನ್ಮದಿನೋತ್ಸವ ಪ್ರಯುಕ್ತ ಯುವ ಭಕ್ತರು ತಂದಿದ್ದ 61 ಕೆಜಿ ತೂಕದ ಅನೇಕ ಬೃಹತ್ ಕೇಕ್ ಗಳನ್ನು ಕತ್ತರಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.

9 ದಿನಗಳ ಪರ್ಯಂತ ಪುಣ್ಯಾರಾಧನಾ ಹಾಗೂ ಜನ್ಮದಿನೋತ್ಸವ ನಿಮಿತ್ತ ನಡೆದ ಸಂಗೀತ ನಾದಾರ್ಚನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಗೀತ ಸೇವೆ ಸಲ್ಲಿಸಿದ ವಿವಿಧ ಕಲಾವಿದರು, ಮತ್ತು ವೈದಿಕ ಸೇವೆ ಸಲ್ಲಿಸಿದ ಶಿವಯ್ಯ ಶಾಸ್ತ್ರಿ ಶಹಪುರ್ ಅನೇಕ ಭಕ್ತರಿಗೆ ಪೂಜ್ಯರು ಗುರು ರಕ್ಷೆ ನೀಡಿ ಆಶೀರ್ವದಿಸಿದರು.

ಜನ್ಮದಿನ ಸಮಾರಂಭದಲ್ಲಿ ಯಾದಗಿರಿ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಚಿತ್ತಾಪುರ ತಾಲೂಕ ದಂಡಾಧಿಕಾರಿಗಳಾದ ನಾಗಯ್ಯ ಹಿರೇಮಠ್ ಸಾಹಿತಿ ಸಿದ್ಧರಾಮ ಹೊನಕಲ್, ಮಹೇಶ್ ವೀರಯ್ಯಸ್ವಾಮಿ ಚಿಂಚೋಳಿ. ಡಾ.ಶರಣಭೂಪಾಲರೆಡ್ಡಿ ನಾಯ್ಕಲ್,ಆನಂದ ಮದರಿ , ಶಿವಯೋಗಪ್ಪ ಸಾಹು ಸನ್ನತಿ. ಸಿದ್ದು ಅಂಗಡಿ ಜೇವರ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕುಮಾರಿ ಪ್ರತೀಕ ಗಾರೆಂಪಲ್ಲಿ ಚಿತ್ತಾಪುರ ಮತ್ತು ಈಶಾ ಪಡಿಶೆಟ್ಟಿ ಯಾದ್ಗೀರ್ ಇವರಿಂದ ಭರತನಾಟ್ಯ ನೆರವೇರಿತು.

ಆಗಮಿಸಿದ್ದ ಭಕ್ತರಿಗಾಗಿ ಶ್ರೀಮಠದಲ್ಲಿ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಕೇವಲ ನಾಲವಾರ ಮಾತ್ರವಲ್ಲದೆ, ದೆಹಲಿ. ಬೆಂಗಳೂರು. ಹೈದರಾಬಾದ್. ಕಲಬುರಗಿ .ಯಾದಗಿರ್. ರಾಯಚೂರು, ಜೇವರ್ಗಿ. ಚಿತ್ತಾಪುರ. ಶಹಾಪುರ, ಸೇರಿದಂತೆ ನಾಡಿನ ವಿವಿಧ ಭಾಗಗಳಲ್ಲಿ ಪೂಜ್ಯರ ಜನ್ಮದಿನದ ಅಂಗವಾಗಿ,ಭಕ್ತರು ಅನ್ನದಾನ,ರಕ್ತದಾನ, ರೋಗಿಗಳಿಗೆ ಹಣ್ಣು ಹಂಪಲು ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ,ಉಚಿತ ಆರೋಗ್ಯ ತಪಾಸಣಾ ಮತ್ತು ನೇತೃ ತಪಾಸಣೆ ಶಸ್ತ್ರ ಚಿಕಿತ್ಸೆ ಶಿಬಿರಗಳನ್ನು ಆಯೋಜಿಸಿ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಪೂಜ್ಯರ ಜನ್ಮದಿನದ ಪ್ರಯುಕ್ತ ಕಲಬುರಗಿ ನಗರದಲ್ಲಿ ನಿರಾಶ್ರಿತರಿಗೆ ನಿರ್ಗತಿಕರು,ಅನಾಥರಿಗೆ ಉಚಿತ ಕ್ಷೌರ ಮಾಡಿ ಭಕ್ತಿ ಸಮರ್ಪಣೆ ಮಾಡಿ ಮಾದರಿಯಾದರು ಎಂದು ಶ್ರೀಮಠದ ಕಾರ್ಯದರ್ಶಿ ವಿರೂಪಾಕ್ಷಯ್ಯ ಸ್ವಾಮಿ ನಿರೂಪಿಸಿ ಸ್ವಾಗತಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button