ನೂತನ “ಕರ್ನಾಟಕ ಒನ್” ಸೇವಾ ಕೇಂದ್ರದಲ್ಲಿ ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಿ – ತಹಶೀಲ್ದಾರ್ ಅಮರೇಶ್.ಜಿ.ಕೆ
ಕೊಟ್ಟೂರು ಡಿಸೆಂಬರ್.20

ಸರ್ಕಾರದ ಯೋಜನೆಗಳು, ಸೌಲಭ್ಯಗಳು ಜನರಿಗೆ ತ್ವರಿತ ರೀತಿಯಲ್ಲಿ ಸಿಗಬೇಕೆಂಬ ಉದ್ದೇಶದಿಂದ ತುರ್ತು ನಾಗರಿಕ ಸೇವೆಯಾದ “ಕರ್ನಾಟಕ ಒನ್ ” ಸೇವಾ ಸಿಂಧು ಕೇಂದ್ರ ,ಜವಳಿ ಸರ್ಕಲ್ ಹಳೆ ಪೋಸ್ಟ್ ಆಫೀಸ್ ಪಕ್ಕದಲ್ಲಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಉದ್ಘಾಟಿಸಿದರು.ಮಾತನಾಡಿ “ಕರ್ನಾಟಕ ಒನ್” ಕೊಟ್ಟೂರಿನ ನಾಗರಿಕರಿಗೆ ಸೇವೆ ಒದಗಿಸುತ್ತಿದ್ದು.

ಸೇವಾ ಕೇಂದ್ರದಲ್ಲಿ ಇ – ಆಡಳಿತ ವತಿಯಿಂದ ನಾಗರಿಕರು ಪಡಿತರ ಚೀಟಿ ಗೃಹಲಕ್ಷ್ಮಿ ಯೋಜನೆ ಸಾಮಾಜಿಕ ಯೋಜನೆಗಳು ಹಾಗೂ ಗುರುತಿನ ಚೀಟಿ ಹಾಗೂ ಇನ್ನಿತರ ಸೇವೆಗಳನ್ನು ಸೇವಾ ಸಿಂಧು ಕೇಂದ್ರದ ಮೂಲಕ ಪಡೆದು ಕೊಳ್ಳಬಹುದು.ಎಂದು ತಹಶೀಲ್ದಾರ್ ಅಮರೇಶ್ ಜಿ ಕೆ ಕೊಟ್ಟೂರು ಹೇಳಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಎ ನಸರುಲ್ಲಾ, ಅನುಷಾ, ಪರಶುರಾಮ್, ಅಶೋಕ್,ಕರ್ನಾಟಕ ಒನ್ ಮಾಲೀಕರಾದ ಬಸವರಾಜ್, ಹಾಗೂ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು