ಅಗ್ನಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು – ಶಾಂತಪ್ಪ.ಬಿ. ಸಿದರೆಡ್ಡಿ.
ತೊದಲಬಾಗಿ ಸ.03

ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರವೀಂದ್ರ ಹರಿಜನ ವಸ್ತಿ ಶಾಲೆಯಲ್ಲಿ ಅಗ್ನಿ ನಂದಕರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಸ್.ಬಿ ಸಿದರೆಡ್ಡಿ ರವರು ಮಾತನಾಡಿದರು ಬೆಂಕಿ ನಿಮ್ಮ ಶತ್ರುನು ಹೌದು ಮಿತ್ರನು ಹೌದು ಬೆಂಕಿ ನಂದಿಸುವ ಕಾರ್ಯ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅಗ್ನಿನಂದಕ ಅಳವಡಿಸಿ ಸ್ವಸ್ತ ಸಮಾಜ ನಿರ್ಮಾಣ ಮಾಡುವುದು ಅಗ್ನಿ ಅವಘಡಗಳಲ್ಲಿ ಸಂಭವಿಸ ಬಹುದಾದ ಮತ್ತು ಸಾವು ನೋವು ಆಸ್ತಿಪಾಸ್ತಿಗಳ ನಷ್ಟದ ಕುರಿತು ಮತ್ತು ಅಗ್ನಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು,ಅಗ್ನಿಶಾಮಕ ದವರು ಜೀವ ಮತ್ತು ಆಸ್ತಿ ಪಾಸ್ತಿಗಳನ್ನು ರಕ್ಷಿಸುವ ನಿಮ್ಮೆಲ್ಲರ ಜೊತೆಗಾರ ಎಂಬ ಸಂದೇಶವನ್ನು ಮಕ್ಕಳಲ್ಲಿ ಮೂಡಿಸಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಎಲ್.ಎಸ್. ನಾಗನೇಶ್ವರ, ಮಾಂತೇಶ್ ಬಸರಗಿ ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ