ಬಂಜಾರ ಯುವ ಜನತೆಯ ನಾಯಕತ್ವ ಮತ್ತು ಸಮಾಲೋಚನೆ ಕಾರ್ಯಕ್ರಮ.
ಹೊಸಪೇಟೆ ಡಿಸೆಂಬರ್.20

ನಗರದ ಬುದ್ಧ ಬಸವ ಭವನದಲ್ಲಿ,ಬಂಜಾರ ಯುವ ಜನತೆಯ ನಾಯಕತ್ವ ಮತ್ತು ಸಮಾಲೋಚನೆ ಹಾಗೂ ಸವಾಲುಗಳ ಕಾರ್ಯಕ್ರಮ ಜರುಗಿತು.ಶ್ರೀ. ಹೀರಾಲಾಲ್ ನಾಯ್ಕ್ IFS. ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಬಳ್ಳಾರಿ ವೃತ್ತ ಮತ್ತು ವೇದಿಕೆಯ ಗಣ್ಯರಾದ ಶ್ರಿ ಡಾ “ಗಿರೀಶ್ ಮೂಡ್ ಮತ್ತು ಡಾಕ್ಟರ್ ಶಂಕರ್ ನಾಯ್ಕ್ ಶ್ರಿ ಹರೀಶ್ ಲಮಾಣಿ ಮತ್ತು ಮುಖ್ಯ ಅತಿಥಿಯಾಗಿ ಕಾವ್ಯ ರಾಣಿ KAS ಮತ್ತು ಆನಂದ್ ಚವ್ಹಾಣ್ ರವರೆಲ್ಲರೂ ಸೇರಿ ಶ್ರಿ ಸೇವಾಲಾಲರ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಾಗೂ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ.ಡಾ.ಶಂಕರ್ ನಾಯ್ಕ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ವಿಜಯನಗರ ರವರು ತಮ್ಮ ಬಾಲ್ಯದ ಜೀವನವನ್ನ ಎಲ್ಲರ ಜೊತೆ ಮೆಲುಕು ಹಾಕಿದರು ಮತ್ತು ಬಂಜಾರಾ ಸಮುದಾಯಕ್ಕೆ ಸೇರಿದ ಎಲ್ಲಾ ಯುವಕರು ಮತ್ತು ಯುವತಿಯರು ಮೊದಲು ಕಡ್ಡಾಯವಾಗಿ ಶಿಕ್ಷಣವನ್ನು ಸರಿಯಾಗಿ ಪಡೆಯಬೇಕು. ಹೋರಾಟಗಾರರು ಇನ್ನೊಬ್ಬರ ಟೀಕೆ ಟಿಪ್ಪಣಿಗಳನ್ನು ಯೋಚಿಸದೆ ಸಮಾಜದ ಪರವಾಗಿ ಕೆಲಸ ಮಾಡಬೇಕು ಎಂದರು. ಡಾ.ಆನಂದ್ ಚವಾಣ್ ರವರು ಮಾತನಾಡಿ ಯುವಜನತೆ ತಮ್ಮ ನಿರ್ಧಿಷ್ಟ ಗುರಿಯನ್ನು ಮುಟ್ಟಬೇಕಾದರೆ ತಾವು ತೊಡಗಿಸಿ ಕೊಳ್ಳಬೇಕಾದ ಅಂಶಗಳು ಮತ್ತು ತಂದೆ ತಾಯಿಯರ ಗುರಿಯನ್ನು ಮಕ್ಕಳು ಸಾಧಿಸಬೇಕು, ಜೀವನದಲ್ಲಿ ಪ್ರಮುಖವಾಗಿ ನಡೆದು ಬಂದ ಹಾದಿಯನ್ನ ಎಂದಿಗೂ ಮರೆಯಬಾರದು,ಗುರಿ ಸಾಧಿಸಿ ಯಶಸ್ವಿಯಾದ ಮೇಲೆ ಇನ್ನೊಬ್ಬರಿಗೆ ದಾರಿ ದೀಪವಾಗಬೇಕು ಯುವಕರ ಜವಾಬ್ದಾರಿಗಳ ಬಗ್ಗೆ ಮತ್ತು ಸಮಗ್ರ ಶಿಕ್ಷಣದ ಕುರಿತಂತೆ ಮಾತನಾಡಿದರು.ಕಾವ್ಯ ರಾಣಿ ಸಹಾಯಕ ಆಯುಕ್ತರು ಕೊಪ್ಪಳ (KAS), ಪಬ್ಲಿಕ್ ಪ್ರಾಸಿಕ್ಯೂಟರ್ ಆದ ಶ್ರೀಯುತ ಹರೀಶ್ ಲಮಾಣಿ, ಡಾ.ಗಿರೀಶ್ ಮೂಡ್ ಸಮಾಜದ ಮತ್ತು ಶಿಕ್ಷಣದ ಏಳಿಗೆಯ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಗಿರೀಶ್ ಡಿ.ಆರ್, ಅರುಣ್ ರಾಥೋಡ್, ಕಲ್ಲೇಶ್ ನಾಯ್ಕ್, ಲಕ್ಷ್ಮಣ ರಾಮಾವತ್, ರಾಮಜಿ ನಾಯ್ಕ್ ಹೊಸಪೇಟೆ, ಚಂದ್ರಶೇಖರ, ಕೆ ಪಿ ನಾಯ್ಕ್, ಅಂಜನಿ ನಾಯ್ಕ್, ಅರ್ಜುನ್ ನಾಯ್ಕ್ . ಕೃಷ್ಣ ಜಾಧವ್, ರಾಜಾನಾಯ್ಕ್, ರವಿ ನಾಯ್ಕ್, ಮಂಜು ನಾಯ್ಕ್, ಈಶ್ವರ್ ನಾಯ್ಕ್, ಲೋಲೇಶ್ ನಾಯ್ಕ್,, ಗೋಪಿ ನಾಯ್ಕ್, ಪ್ರಕಾಶ್ ನಾಯ್ಕ್, ವಿನೋದ್ ಕುಮಾರ್ ನಾಯ್ಕ ,ನಾಗರಾಜ್ ನಾಯ್ಕ್ ಹಾಗೂ ಅನೇಕ ಸಂಘಟನೆಗಳ ಪದಾಧಿಕಾರಿಗಳು, ರೇಷ್ಮಾ ಬಾಯಿ,ಅಲೋಕ್ ನಾಯ್ಕ್,ಕುಮಾರ್ ನಾಯ್ಕ ಟಿ ಹನುಮಾನಾಯ್ಕ್ ,ಶಿವಕುಮಾರ್ ನಾಯ್ಕ್ ಇತರರಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ