ಮೊಳಕಾಲ್ಮುರು ಪಟ್ಟಣದ ಸಂತೆ ಮಾರ್ಕೆಟ್ ಬೇರೊಂದು ಕಡೆಗೆ ವರ್ಗಾವಣೆ ಮಾಡಿ ಸಾರ್ವಜನಿಕರಿಗೆ ಅನುಕೂಲತೆ ಕಲ್ಪಿಸಿಕೊಟ್ಟ ಶಾಸಕರು.

ಮೊಳಕಾಲ್ಮುರು ಡಿಸೆಂಬರ್.21

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಎದ್ದಲ ಬೊಮ್ಮೈನಟ್ಟಿ ಯಿಂದ ತಾಲೂಕು ಆಡಳಿತ ಸೌಧದ ವರೆಗೂ ಎಚ್ ಆರ್ ರಸ್ತೆ ನಿರ್ಮಾಣ ವಾಗಿದ್ದು ಈ ರಸ್ತೆ ಅಗಲ ಹಿಂದೆ ಏನು ಕಾನೂನಾತ್ಮಕವಾಗಿ ಆ ಕಡೆ 80 ಈ ಕಡೆ 80 ಪ್ರಕಾರವಾಗಿ ಅಳತೆ ಮಾಡಿ ರಸ್ತೆ ಮಾಡಲೆಂದು ಪ್ಲಾನ್ ಮಾಡಿದ್ದು ನಿಜ ಅನಿಸುತ್ತದೆ ಆದರೆ ಈಗ 2020 ನೇ ಇಸ್ವಿಯಲ್ಲಿ ಎಚ್ ಆರ್ ರಸ್ತೆಗೆ ಅನುದಾನ ಬಿಡುಗಡೆ ಗೊಂಡ 30 ಕೋಟಿ ಕಾಮಗಾರಿಯನ್ನು ಮಧ್ಯದಲ್ಲಿ ದಿವೈಡರ್ ಮಾಡಿ ಆದರೆ ಅದು ಕಾನೂನಾತ್ಮಕವಾಗಿ ಲೆಫ್ಟ್ ರೈಟ್ ಅಗಲ ಕಮ್ಮಿ ಮಾಡಿ ಸಾರ್ವಜನಿಕರಿಗೆ ಮತ್ತು ವಾಹನಗಳು ಓಡಾಡುವುದಕ್ಕೆ ಇರಿಸು ಮುರಿಸು ಇರುವುದಾಗಿ ರಸ್ತೆ ಕಾಮಗಾರಿಯನ್ನು ಮಾಡಿರುತ್ತಾರೆ ಈಗ ಈ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಬಹಳ ತೊಂದರೆ ಯಾಗುತ್ತಿದ್ದು ಪಟ್ಟಣದ ತಾಲೂಕು ಪಂಚಾಯಿತಿ ಪಕ್ಕಕ್ಕೆ ಸಂತೆ ಮೈದಾನ ಇರುತ್ತದೆ ಈ ಸಂತೆ ಮೈದಾನ ಈ ಎಚ್ ಆರ್ ರಸ್ತೆ ಪಕ್ಕಕ್ಕೆ ನಡೆಯುತ್ತಿದ್ದು ಎಲ್ಲಾ ಸಾರ್ವಜನಿಕರಿಗೆ ಭಯದ ವಾತಾವರಣ ಕಂಡು ಬರುತ್ತಿತ್ತು ಏಕೆಂದರೆ ಈ ರಸ್ತೆ ಅಗಲ ಕಮ್ಮಿ ಮಾಡಿ ಓಡಾಡುವಂಥ ವಾಹನಗಳಿಗೆ ಹಿಕ್ಕಟ್ಟಿನಲ್ಲಿ ಸಿಲುಕಲು ಎಂಬುವಂತೆ ಕಾಣುತ್ತಿರುತ್ತದೆ ಆದರೆ ಈಗ ಈ ಸಂತೆ ಮೈದಾನವನ್ನು ಬೇರೊಂದು ಕಡೆಗೆ ವರ್ಗಾವಣೆ ಮಾಡಿ ಆ ಜಾಗ ಸೂಕ್ತವೆಂದು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಟ್ಟಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಈ ಈ ಸಂದರ್ಭದಲ್ಲಿ ತಹಶೀಲ್ದಾರ್ ರೂಪ ಮತ್ತು ಪೊಲೀಸ್ ಇಲಾಖೆ ಪಿಎಸ್ಐ ಪಾಂಡುರಂಗಪ್ಪ ಪಟ್ಟಣ ಪಂಚಾಯಿತಿ ಚೀಪ್ ಆಫೀಸರ್ ಮಂಜುನಾಥ್ ಇವರುಗಳು ಭಾಗವಹಿಸಿ ಈ ಜಾಗವನ್ನು ಅಂಗಡಿ ಮುಂಗಟ್ಟುಗಳಿಗೆ ಸ್ವಚ್ಛ ಮಾಡಿಸಿ ಕೊಟ್ಟರು ಜಾಗ ಕೃಷಿ ಇಲಾಖೆ ಮುಂಭಾಗ ಸರ್ವೇ ನಂಬರ್ ನಾಲ್ಕರಲ್ಲಿ ಬರುತ್ತದೆ ಇಲ್ಲಿ ಎಲ್ಲಾ ದಿನಸಿ ಮಾರುವಂತ ಅಂಗಡಿಗಳು ಮತ್ತು ದಿನಸಿ ಸಾಮಾನುಗಳು ಎಲ್ಲಾ ಒಂದೇ ಕಡೆ ಇಟ್ಟು ಖರೀದಿ ಮಾಡಲು ಅನುಕೂಲವಾಗುತ್ತದೆ.

ಎಂದು ಸಾರ್ವಜನಿಕರು ಹೇಳುವಂತಾ ಮಾತುಗಳು ಇವಾಗಿವೆ ಏಕೆಂದರೆ ಈ ಎಚ್ ಆರ್ ರಸ್ತೆ ಕಾಮಗಾರಿ ಮುಗಿಸಲು ಸುಮಾರು ಮೂರು ವರ್ಷ ಬೇಕಾಗಿತ್ತು ಆದರೆ 2023ರಲ್ಲಿ ಮಾನ್ಯ ಎನ್ ವೈ ಗೋಪಾಲಕೃಷ್ಣ ಚುನಾವಣೆಯಲ್ಲಿ ಗೆದ್ದು ಬಂದ ಶಾಸಕರು ಈ ರಸ್ತೆಯನ್ನು ಗಮನ ಹಾಕಿಕೊಂಡು ಆ ಗುತ್ತಿಗೆದಾರರನ್ನು ಕರೆಸಿ ಇಂಜಿನೀಯರ್ ಗಳನ್ನು ಕರೆಸಿ ಈ ರಸ್ತೆ ಮಾಡಲು ನಿಮಗೆ ಮೂರು ವರ್ಷ ಬೇಕಾಗಿದೆ ಎಂದು ಸ್ಪಷ್ಟವಾಗಿ ಅವರನ್ನು ಕೇಳಿದರು ಏಕೆ ನೆನಗುದಿಗೆ ಬಿಟ್ಟಿದ್ದೀರಿ ಎಂದು ಶಾಸಕರು ವಿಚಾರಿಸಿದರು ಈ ರಸ್ತೆಯನ್ನು ಈಗ ನನ್ನ ಟೈಮು ಎರಡು ತಿಂಗಳ ಒಳಗೆ ಈ ರಸ್ತೆಯನ್ನು ಪೂರ್ಣ ಗೊಳಿಸಿ ಕೊಡಬೇಕೆಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಖಡಕ್ ಸಂದೇಶ ಕೊಟ್ಟು ಈ ಎಚ್ ಆರ್ ರಸ್ತೆಯನ್ನು ರಸ್ತೆ ಮಧ್ಯದಲ್ಲಿ ಡಿವೈಡರ್ ಮಾಡಿ ವಿದ್ಯುತ್ ಕಂಬಗಳನ್ನು ಹಾಕಿಸಿ ವಿದ್ಯುತ್ ದ್ವೀಪಗಳನ್ನು ಹಾಕಿಸಿ ಎಡಗಡೆ ಮತ್ತು ಬಲಗಡೆ ಕಬ್ಬಿಣದ ಡಿವೈಡರ್ ಗಳು ಹಾಕಿಸಿ ಇದಕ್ಕೆ ಬಣ್ಣ ಅಲಂಕಾರದಿಂದ ಮಾಡಿಸಿ ಈ ರಸ್ತೆಯನ್ನು ಸುಂದರವಾಗಿ ಮಾಡಿಸಿ ಮೊಳಕಾಲ್ಮೂರು ಪಟ್ಟಣ ಸ್ವಲ್ಪ ಅಂದಚಂದವಾಗಿ ಕಾಣಲು ಮಾಡಿ ಕೊಟ್ಟಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಇವರ ಕೆಲಸಗಳು ಮಾತನಾಡುತ್ತವೆ ಬರೀ ವೆಸ್ಟ್ ಆಗಿ ಮಾತನಾಡುವ ಮಾತುಗಳಲ್ಲ ಎಂದು ಕಂಡು ಬರುತ್ತದೆ ಮೊಳಕಾಲ್ಮೂರು ಸಾರ್ವಜನಿಕರು ಹೇಳುವ ಮಾತುಗಳು ಎನ್ ವೈ ಗೋಪಾಲಕೃಷ್ಣ ಶಾಸಕರು ಒಳ್ಳೆ ಕೆಲಸಗಳು ಮಾಡುತ್ತಿದ್ದಾರೆ ಇವರು ವೇಸ್ಟ್ ಆಗಿ ಯಾವತ್ತು ಮಾತನಾಡುವುದಿಲ್ಲ ಕೆಲಸ ಮಾಡಿ ಜನಗಳಿಗೆ ತೋರಿಸುತ್ತಾರೆ ಅಂತ ನಮಗೆಲ್ಲಾ ಬಹಳ ಖುಷಿ ಅನಿಸುತ್ತದೆ ಎಂದು ಸಾರ್ವಜನಿಕರು ಹೇಳುವಂತ ಮಾತುಗಳು ಇವುಗಳಾಗಿವೆ ಎಂದು ಕಂಡು ಬರುತ್ತದೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button