ಅಕ್ರಮ ದಂಧೆ ಕೋರರಿಗೆ ನಡುಕ ಹುಟ್ಟಿಸಿದ – ಪಿ.ಎಸ್ಐ ಅಗ್ನಿ, ಸೋಮಶೇಖರ ಕೆಂಚರೆಡ್ಡಿ.
ಮಾನ್ವಿ ಮಾ.21

ಅಕ್ರಮ ಮರಳು ದಂಧೆಕೋರರು ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ತುಂಗಭದ್ರಾ ನದಿಗೆ ಕನ್ನ ಹಾಕಿ ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಟಿಪ್ಪರ್ ಗಳಲ್ಲಿ ಮರಳು ಸಾಗಣೆ ಮಾಡುವುದನ್ನು ಮನಗಂಡು ಮುಂಜಾನೆ ಅಗ್ನಿ ಎಂದೆ ಹೆಸರುವಾಸಿಯಾದ ಪಿಐ ಕೆಂಚಾರೆಡ್ಡಿ ದಾಳಿ ಮಾಡಿ 18 ಟಿಪ್ಪರ್ 1 ಹಿಟಾಚಿಯನ್ನು ಅಂಧರ್ ಹಾಕಿ ಪ್ರಕರಣ ದಾಖಲಿಸಿರುವುದು ಇತಿಹಾಸವಾಗಿದೆ.
ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ ಮರಳು ಖದೀಮರು ನದಿಯಲ್ಲಿಯೇ ದಾರಿ ಮಾಡಿಕೊಂಡು ಹಿಟಾಚಿ ಮೂಲಕ ಮರಳು ಸಾಗಣೆ ಮಾಡುತ್ತಿದ್ದರು. ಆದರೆ ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿ ಸರಕಾರದ ಅಧಿಕಾರಿಗಳಿಗೆ ಮರಳು ಖದೀಮರು ಸವಾಲಾಗಿದ್ದರು.
ಮಾನ್ವಿ ಠಾಣೆಯ ಇತಿಹಾಸದಲ್ಲಿಯೇ ಯಾವೊಬ್ಬ ಅಧಿಕಾರಿಯು ಇಂತಹ ದಾಳಿ ಮಾಡಿ ಕ್ರಮ ಕೈ ಗೊಂಡಿರುವುದು ಇಲ್ಲ. ಮಾನ್ವಿಗೆ ಕೆಂಚಾರೆಡ್ಡಿ ಎಂಬ ಅಧಿಕಾರಿ ಬಂದಿರುವುದು ನೋಡಿದರೆ ಅಗ್ನಿತರ ಕೆಲಸ ಮಾಡಿ ಅಕ್ರಮ ದಂಧೆಕೋರರಿಗೆ ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆಂದು ಮಾನ್ವಿಯ ಜನತೆ ಅಲ್ಲಲ್ಲಿ ಪಿಸು ಪಿಸು ಪಿಸುಮಾತಿನ ಚರ್ಚೆಯ ರೂಪದಲ್ಲಿ ಮಾತನಾಡುತ್ತಿದ್ದಾರೆ ಎಂದು ವರದಿಯಾಗಿದೆ.ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ