ಇಂಗಳಗಿ ಗ್ರಾಮ ಪಂಚಾಯಿತಿ ಕಳಪೆ ಕಾಮಗಾರಿ ತನಿಖೆಗೆ ಆಗ್ರಹ.
ಇಂಗಳಗಿ ಡಿಸೆಂಬರ್.22

ಇಂಡಿ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿಯಲ್ಲಿ ಕಳಪೆ ಕಾಮಗಾರಿ ಮಾಡಿ ಬೊಗಸ ಬಿಲ್ಲ ತಗೆದಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕಾನುನು ಕ್ರಮ ಕೈಗೊಳ್ಳಲು ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಇಂಡಿ ಇವರಿಗೆ ದೂರು ಕೊಟ್ಟು ತಿಂಗಳುಗಳು ಕಳೆದರು ಯಾವುದೆ ಕ್ರಮ ಕೈಗೊಳದೆ ಅವರಿಗೆ ಸಾತ ನಿಡುತ್ತಿರುವ ಇ.ಓ ಅವರನ್ನು, ಗ್ರಾಮ ಪಂಚಾಯತ ಇಂಗಳಗಿಯಲ್ಲಿ ಕಳಪೆ ಕಾಮಗಾರಿ ಮಾಡಿ ಬೊಗಸ ಬಿಲ್ಲು ತಗೆದಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಅಕ್ರಮ ಮಾಡಿದ್ದಾರೆ ಆದ್ದರಿಂದ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳ ಬೇಕು, ಹಾಗೂ ಒಂದು ಲಕ್ಷಕ್ಕಿಂತ ಮೇಲ್ಪಟ್ಟ ಕಾಮಗಾರಿ ಇದ್ದರೆ, ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವಾಲಯದಿಂದ ಹೊರಡಿಸಿರುವ ಸುತ್ತೋಲೆ ಪ್ರಕಾರ ಇ-ಟೆಂಡರ್ ಕರಿಯಬೇಕು ಮತ್ತು ದಿನ ಪತ್ರಿಕೆಯಲ್ಲಿ ಅಥವಾ ಗ್ರಾಮ ಪಂಚಾಯತ ಅಧಿಕೃತ ಪೆಜ್ ನಲ್ಲಿ ಇ-ಟೆಂಡರ್ ಆದೇಶ ಹೊರಡಿಸ ಬೇಕು ಆದರೆ ಇಲ್ಲಿ ಸರ್ಕಾರದ ಸುತ್ತೋಲೆ ಗಾಳಿಗೆ ತೂರಿ ಅಕ್ರಮ ವೆಸಗಿದ್ದಾರೆ.ಹಾಗೂ ಬೇಕಾ ಬಿಟ್ಟಿಯಾಗಿ ಹಣ ಖರ್ಚು ಮಾಡಿದ್ದಾರೆ ಆದ್ದರಿಂದ ಕಾಮಗಾರಿಯನ್ನು ತನಿಖೆಗೆ ಆದೇಶ ಮಾಡಿ ತಪ್ಪಿತಸ್ಥ ಎಲ್ಲಾ ಅಧಿಕಾರಿಗಳನ್ನು ವಿಚಾರಣೆಗೆ ಬಾಕಿ ಇರಿಸಿ ಕೂಡಲೇ ಅಮಾನತ್ತು ಗೊಳಿಸಬೇಕು ಆನಂತರ ಸರ್ಕಾರಕ್ಕೆ ವಂಚನೆ ಮಾಡಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು, ಒಂದು ವೇಳೆ ತಪ್ಪಿತಸ್ಥರ ಮೇಲೆ ಯಾವುದೆ ಕ್ರಮ ಜರುಗಿಸದೆ ಇದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹೋರಾಟ ಮಾಡಲಾಗುವದು ಎಂದು ರಿಪಬ್ಲಿಕನ ಪಾರ್ಟಿ ಆಪ ಇಂಡಿಯಾ ತಾಲೂಕ ಅಧ್ಯಕ್ಷರಾದ ಚಂದ್ರಶೇಖರ ಮೇಲಿನಮನಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ