ಮುನಿದದವರ ಮುನಿಸು ತನಿಸಲು ಕೈ – ಕಮಲ ನಾಯಕರ ಹರಾಸಾಹಸ ಬಾಗಲಕೋಟೆ.
ಬಾಗಲಕೋಟೆ ಏಪ್ರಿಲ್.11

ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಸಲು ಕ್ಷಣಗಣನೆ ಆರಂಭಕ್ಕೆ ಮುನ್ನವೇ ರಾಷ್ಟ್ರೀಯ ಪಕ್ಷಗಳಲ್ಲಿನ ಬೇಗುದಿ ಇನ್ನೂ ಶಮನವಾದಂತೆ ಅನಿಸುತ್ತಿಲ್ಲ, ಬಾದಾಮಿ ಮತ ಕ್ಷೇತ್ರದ ಮಾಜಿ ಶಾಸಕರಾದ ಎಂ ಕೆ ಪಟ್ಟಣಶೆಟ್ಟಿ ಪೀಕಾರ್ಡ್ ಬ್ಯಾಂಕಿನ ಅಧ್ಯಕ್ಷರು ಯುವ ಮುಖಂಡರಾದ ಮಹಾಂತೇಶ್ ಮಮದಾಪುರ ಹಾಗೂ ಡಿ ಸಿ ಸಿ ಬ್ಯಾಂಕ್ ನಿರ್ದೇಶರಾದ ಕುಮಾರ್ ಜನಾಲಿ ಅವರು ತಮ್ಮದೆ ಪಡೆ ಕಟ್ಟಿಕೊಂಡು ರಾಜ್ಯ ನಾಯಕರ ಮೇಲೆ ಮೌನ ಗುಮ್ಮ ಮನದಲ್ಲಿ ಇಟ್ಟುಕೊಂಡು ಸ್ವ ಪಕ್ಷದ ಅಭ್ಯರ್ಥಿಯಾದ ಪಿ ಸಿ ಗದ್ದಿಗೌಡರ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಜಿಲ್ಲೆಯ ನಾಯಕರಲ್ಲಿ ಅಸಮಾಧಾನವಾಗಿದ್ದು.

ಪಕ್ಷದಲ್ಲಿ ನಮ್ಮನ್ನು ಕಳೆದ ವಿಧಾನಸಭೆ ಚುನಾವಣೆಯಿಂದ ನಿರ್ಲಕ್ಷ್ಯ ಭಾವಣೆಯಲ್ಲಿ ನೋಡುತ್ತಿರುವದು ಬೇಸರತರುತ್ತಿದೆ ಎನ್ನುವ ಬಾದಾಮಿ ನಾಯಕರ ಸಿಟ್ಟು ದಮನಿಸಲು ಕಮಲ ನಾಯಕರ ಸಾಹಸವಾಗಿದ್ದರೆ, ಇತ್ತ ಕಾಂಗ್ರೆಸ್ ಬೇಗೂದಿಗೇನು ಕಡಿಮೆ ಇಲ್ಲ ಸ್ಪಷ್ಟ ನೀಲುವು ತಾಳದೇ ಮೀನಾಮೇಷ ಎನಿಸುತ್ತಿರುವ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೀಣಾ ಕಾಶಾಪ್ಪನವರ ನಡೆ ಸದ್ಯ ಗಮನಿಸಿದರೆ ಅಡ ಕೋತಿನಲ್ಲಿ ಅಡಿಕೆ ಇರುವಂತೆ ವೀಣಾ ಅವರ ಗಮನ ಸ್ವತಂತ್ರವೋ ಅತಂತ್ರವೋ ಅಥವಾ ಯಾವುದೋ ಪಕ್ಷಕ್ಕೆ ಹಾರುವ ತಂತ್ರಗಾರಿಕೆಯೋ ಒಂದು ತಿಳಿದಂತಾಗಿದೆ.

ವೀಣಾ ಕಾಶಾಪ್ಪನವರ ಅಸಮಾಧಾನಕ್ಕೆ ಮೊದ ಮೊದಲು ಸಾತ್ ಕೊಟ್ಟ ಪತಿ ವಿಜಯಾನಂದ ಕಾಶಪ್ಪನವರ ಪಕ್ಷದ ನಿರ್ಧಾರಕ್ಕೆ ಕಟಿಬಿದ್ದು ಅಭ್ಯರ್ಥಿ ಪರ ಪ್ರಚಾರದಲ್ಲಿ ಕಾಣಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಯುಗಾದಿಯ ಸಿಹಿ ಕಹಿ ಹೂರಣವನ್ನು ಪಕ್ಷದ ಪರವಾಗಿ ಸಿಹಿ ಮಾಡುತ್ತಾರೊ ಅಥವಾ ಬೇರೆ ರೀತಿಯ ನಿರ್ಧಾರ ತೆಗೆದು ಕೊಂಡು ಕಹಿ ಹೂರಣ ಕೊಡುತ್ತಾರೊ ಕಾದು ನೋಡುತ್ತಿರುವ ಭಕ್ ಪಕ್ಷಿ ನಾಯಕರು.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.