ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವಕ್ಕೆ ದೇವಸ್ಥಾನದ ಸ್ವಾಮಿಗಳು ಅಧಿಕಾರಿಗಳು ಚಾಲನೆ ನೀಡಿದರು.
ಕೊಟ್ಟೂರು ಡಿಸೆಂಬರ್.26

ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು.ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪಣತಿಯಲ್ಲಿ ಸಂಜೆ ೬ ಗಂಟೆ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.ನಂತರದಲ್ಲಿ ಸ್ವಾಮಿಯ ಭಕ್ತರು ಪಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು.

ಹರಕೆ ರೂಪದಲ್ಲಿ ಭಕ್ತರು ಕೊಬ್ಬರಿ ಸುಟ್ಟರು. ಕಾರ್ತಿಕೋತ್ಸವಕ್ಕೆ ಕ್ರಿಯಾ ಮೂರ್ತಿಗಳಾದ ಶ್ರೀ ಶಂಕರಸ್ವಾಮಿ, ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು, ಧರ್ಮಕರ್ತ ಸಿಎಚ್ಎಂ ಗಂಗಾಧರ, ಧಾರ್ಮಿಕ ಇಲಾಖೆ ಎಸಿ ಪ್ರಕಾಶರಾವ್, ದೇವಸ್ಥಾನ ಇ.ಒ ಎಂ.ಡಿ.ಕೃಷ್ಣಪ್ಪ, ಹಾಗೂ ಮುಖಂಡರು, ದೇವಸ್ಥಾನದ ಸಿಬ್ಬಂದಿಯವರು ಇದ್ದರು.ಕಾರ್ತಿಕೋತ್ಸವ ಪ್ರಯುಕ್ತ ಬೆಳಗಿನಿಂದಲೇ ಸ್ಥಳೀಯ ಹಾಗೂ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿ ದರ್ಶನ ಪಡೆದರು. ದೂರದ ಊರುಗಳಿಂದ ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಸ್ವಾಮಿಯ ತೊಟ್ಟಿಲುಮಠ, ಗಚ್ಚಿನಮಠಗಳಲ್ಲಿಯೂ ಭಕ್ತರು ಸ್ವಾಮಿ ಆರ್ಶೀವಾದ ಪಡೆದು ಕೊಂಡರು.ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿ ದರ್ಶನ ಪಡೆದ ಭಕ್ತಾಧಿಗಳಿಗೆ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಭಾರೀ ಬಂದೋಬಸ್ತು ಮಾಡಲಾಗಿತ್ತು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು