ವಿಕಲ ಚೇತನರನ್ನು ಗೌರವಿಸುವದು ನಮ್ಮ ಕರ್ತವ್ಯ – ಯಶವಂತರಾಯಗೌಡ.
ಖೇಡ ಡಿಸೆಂಬರ್.27

ವಿಕಲ ಚೇತನರನ್ನು ಗೌರವಿಸ ಬೇಕಾದದ್ದು ನಾಗರೀಕ ಸಮಾಜದ ಕರ್ತವ್ಯ. ಅವರಿಗೆ ಸರಕಾರ ಮತ್ತು ಜನ ಸಮುದಾಯ ಅವರ ಬಗ್ಗೆ ಮಾನವೀಯತೆ ಯಿಂದ ಮತ್ತು ಹೃದಯವಂತಿಕೆ ಯಿಂದ ಪ್ರೀತಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು. ಪಟ್ಟಣದ ಖೇಡ ಮಹಾ ವಿದ್ಯಾಲಯದ ಆವರಣದಲ್ಲಿ ವಿಶ್ವ ವಿಕಲ ಚೇತನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರು ಅವರನ್ನು ಒಂದು ಕಡೆ ನ್ಯೂನತೆ ಮಾಡಿರುತ್ತಾನೆ. ಆದರೆ ಅವರಲ್ಲಿ ಸೂಕ್ಷತೆ ಹೆಚ್ಚಿರುತ್ತದೆ. ಅವರನ್ನು ಸಂರಕ್ಷಿಸುವ ಕುಟುಂಬದವರನ್ನು ನಾವು ಋಣಿಯಾಗಿರ ಬೇಕಾಗುತ್ತದೆ ಅಭಿನಂದಿಸ ಬೇಕಾಗುತ್ತದೆ ಎಂದರು. ಅನೇಕ ವಿಕಲ ಚೇತನರು ದೊಡ್ಡ ಸಾಧನೆ ಮಾಡಿದ್ದಾರೆ. ವಿಕಲ ಚೇತರಿಗೆ ಮಾದರಿ ಯಾಗಿದ್ದಾರೆ ಎಂದರು. ವಿಕಲ ಚೇತನರಿಗೆ ಸರಕಾರದಿಂದ ೭೫ ತ್ರಿಚಕ್ರ ವಾಹನ ಸೈಕಲ್ ಗಳನ್ನು ವಿತರಿಸಿದರು.ವಿಕಲ ಚೇತನರಿಗೆ ಭವನ ನಿರ್ಮಾಣಕ್ಕಾ ಜಾಗ ನೀಡುವುದಾಗಿ ವಾಗ್ದಾನ ಮಾಡಿದರು. ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು, ಅಧ್ಯಕ್ಷತೆ ಜಿಲ್ಲಾ ವಿಕಲ ಚೇತನರ ಅಧ್ಯಕ್ಷ ವಿನೋದ ಖೇಡ, ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣದ ಅಧಿಕಾರಿ ರಾಜಶೇಖರ ದೈವಾಡ ಮಾತನಾಡಿದರು. ಇ.ಒ ಬಾಬು ರಾಠೋಡ,ಪ್ರಾಚಾರ್ಯ ಶಿವರಾಜ ಹೊನಕಟ್ಟಿ, ಪ್ರಭು ಹೊಸಮನಿ, ಮಲ್ಲಿಕಾರ್ಜುನ ಉಮರಾಣಿ, ಪರಶುರಾಮ ಭೋಸಲೆ,ಚನ್ನಯ್ಯ ಹಜೇರಿ, ಮಲ್ಲು ಬಡಿಗೇರ, ಮೌನೇಶ ಬಡಿಗೇರ, ಪರಮೇಶ್ವರ ಕುಂಬಾರ, ಭೀಮಣ್ಣ ಕವಲಗಿ,ಪ್ರಶಾಂತ ಕಾಳೆ, ಜಾವೇದ ಮೋಮಿನ್, ಪರಶುರಾಮ ಬಾವಿಕಟ್ಟಿ, ಲಿಂಗರಾಜ ಬಿಸನಾಳ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ