ಬೆಸ್ಕಾಂ ಅಧಿಕಾರಿಗಳಿಗೆ ಕರೆಂಟ್ ಬಗ್ಗೆ ಬಹಳ ಜಾಗೃತೆ ವಹಿಸಬೇಕು ಎಂದ ಶಾಸಕರು.

ಮೊಳಕಾಲ್ಮುರು ಜನೇವರಿ.2

ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಓಬಳಾಪುರ ಗ್ರಾಮದಲ್ಲಿ ರೈತರ ಜಮೀನಿನಲ್ಲಿ ವಿದ್ಯುತ್ ಕಂಬ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಬೆಸ್ಕಾಂ ನೌಕರ ಸಾವನ್ನಪ್ಪಿದ ವಿಷಯ ತಿಳಿದು ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ರಾಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕುಟುಂಬದ ವರಿಗೆ ಸಾಂತ್ವಾನ ತಿಳಿಸಿ ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮತ್ತು ಸಾವನ್ನಪ್ಪಿದ ಬೆಸ್ಕಾಂ ನೌಕರನಿಗೆ ಸರ್ಕಾರದಿಂದ ಪರಿಹಾರವನ್ನು ಸಹ ಕೊಡಿಸಲು ಶಾಸಕರು ಮುಂದಾಗಿದ್ದಾರೆಂದು ತಿಳಿಯಲಾಗುತ್ತದೆ ಮತ್ತೆ ಇಂತಹ ದುರ್ಘಟನೆಗಳು ನಡೆಯದಂತೆ ಬೆಸ್ಕಾಂ ನವರು ಕರೆಂಟಿನ ಬಗ್ಗೆ ಬಹಳ ಎಚ್ಚರ ವಹಿಸಬೇಕು ಇನ್ನು ಇಂತಹ ಘಟನೆ ಯಾರಿಗೂ ಆಗಬಾರದು ಏಕೆಂದರೆ ಅವರ ಮಕ್ಕಳ ಅವರ ಕುಟುಂಬ ಜೀವನ ಹಾಳಾಗುತ್ತದೆ ಅಂತ ಶಾಸಕರ ಒಂದು ನಿರ್ಧಾರ ವಾಗಿರುತ್ತದೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಂತ ಶಾಸಕರು ಈ ಸಂದರ್ಭದಲ್ಲಿ ಕೂಡ್ಲಿಗಿ ಕ್ಷೇತ್ರದ ಡಾಕ್ಟರ್ ಏನ್ ಟಿ ಶ್ರೀನಿವಾಸ್ ಶಾಸಕರು ಎನ್ ವೈ ಗೋಪಾಲಕೃಷ್ಣ ಶಾಸಕರನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯಗಳು ಕೋರಿ ಜೊತೆಯಲ್ಲಿ ನಿಂತು ಫೋಟೋ ಶೂಟ್ ಮಾಡಿ ಕೊಂಡಿರುತ್ತಾರೆ.

ಮತ್ತೆ ಶಾಸಕರ ಅಣ್ಣನಾದ ಎನ್‌ಟಿ ತಮ್ಮಣ್ಣನವರು ಸಹ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಹೊಸ ವರ್ಷದ ಶುಭಾಶಯಗಳು ಕೋರಿ ಕೂಡ್ಲಿಗಿ ತಾಲೂಕಿನ ಸಮಸ್ಯೆಗಳ ಬಗ್ಗೆ ಮಾತನಾಡಿದರು ಸರ್ ನೀವು ನಮ್ಮ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಒಳ್ಳೆ ಕೆಲಸಗಳು ಯೋಜನೆಗಳು ಮಾಡಿರುತ್ತೀರಿ ಈಗ ಸಹ ನಮ್ಮ ತಮ್ಮನಿಗೆ ಎನ್‌ಟಿ ಶ್ರೀನಿವಾಸ್ ಶಾಸಕರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡಲು ನೀವು ಸ್ವಲ್ಪ ಕೈ ಹಾಕಿ ಅಧಿಕಾರಿಗಳ ಹತ್ತಿರ ಚರ್ಚೆ ಮಾಡಿ ನಮ್ಮ ಹಿಂದುಳಿದ ಕೂಡ್ಲಿಗಿ ತಾಲೂಕಿಗೆ ಯೋಜನೆ ರೂಪಿಸಲು ನಮಗೆ ಕೈಜೋಡಿಸಿ ಸರ್ ನೀವು ಎಂದು ಡಾಕ್ಟರ್ ಎನ್ ಟಿ ಶ್ರೀನಿವಾಸ್ ಶಾಸಕರು ಮತ್ತು ಎನ್ ಟಿ ತಮ್ಮಣ್ಣ ಇವರು ಎನ್ ವೈ ಗೋಪಾಲಕೃಷ್ಣ ಶಾಸಕರ ಹತ್ತಿರ ಮಾತುಗಳು ನಡೆದಿರಬಹುದು ನಮಗೆ ಅನುಭೋಗ ಸ್ವಲ್ಪ ಕಡಿಮೆ ನಿಮ್ಮ ಅನುಭವದ ಬಗ್ಗೆ ನಮಗೆ ದಾರಿ ತೋರಿಸಿ ಎಲ್ಲಾ ಸಮುದಾಯದ ಬಡ ವರ್ಗದ ಜನ ಸಾಮಾನ್ಯರ ಮೇಲೆ ಕೆಲಸಗಳು ಆಗ ಬೇಕೆಂದು ನಮ್ಮ ಬಯಕೆ ಆಗಿರುತ್ತಿದೆ ಏಕೆಂದರೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ .1,04,8 98 ಮತಗಳು ಎಲ್ಲಾ ಸಮುದಾಯದವರ ಸಹಾಯದಿಂದ ಬಂದಿರುತ್ತವೆ ಎಂದು ಡಾಕ್ಟರ್ ಎನ್ ಟಿ ಶ್ರೀನಿವಾಸ್ ಶಾಸಕರು ಬಯಕೆ ಯಾಗುತ್ತದೆ ಏಕೆಂದರೆ ನಮ್ಮ ತಂದೆಯವರು ನಿಮಗೆ ಬಹಳ ಹತ್ತಿರದಿಂದ ಸಂಪರ್ಕ ವಿದ್ದವರು ಆದ್ದರಿಂದ ನಿಮ್ಮಿಂದ ನಮಗೆ ಕೂಡ್ಲಿಗಿ ತಾಲೂಕಿನಲ್ಲಿ ಹೆಸರು ಬಂದಿದೆ ಆದಕಾರಣ ನಮ್ಮ ಕೂಡ್ಲಿಗಿ ಹಿಂದುಳಿದ ತಾಲೂಕಿನ ಜನ ಸಾಮಾನ್ಯರ ಕೆಲಸಗಳನ್ನು ಮಾಡಿಸಲು ನಮಗೆ ಶಕ್ತಿ ತುಂಬಿ ಎಂದು ಡಾಕ್ಟರ್ ಏನ್ ಟಿ ಶ್ರೀನಿವಾಸ್ ಶಾಸಕರ ಮನಸ್ಸು ಆಗಿರುತ್ತದೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button