ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ – ಹೆಸರಲ್ಲಿ ಲೂಟಿಯ ದಂಧೆ.
ಮಾನ್ವಿ ಫೆ.13

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಡಿ ಅಲ್ಲಸಂಖ್ಯಾತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಹೇಳುತ್ತೆ. ಆದರೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೊರಾರ್ಜಿ ದೇಸಾಯಿ ವಿದ್ಯಾರ್ಥಿಗಳು ಸೌಲಭ್ಯ ಕೊರತೆಗಳ ನಡುವೆ ಜೀವನ ಕಳೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಮಾಡಿದ ತಿಂಡಿ, ಊಟ ಮೂಟೆ ಗಟ್ಟಲೆ ಹಂದಿಗಳ ಪಾಲಾಗುತ್ತಿದೆ.

ಮಾನ್ವಿ ಪಟ್ಟಣದ ಮುಸ್ಟೂರು ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪ್ರಾಂಶುಪಾಲ ವೆಂಕಟೇಶಪ್ಪನ ದುರಾಡಳಿತ ದಿಂದ ವಿದ್ಯಾರ್ಥಿಗಳು ಹಾಸಿಗೆ ಇಲ್ಲದೆ, ಗುಣಮಟ್ಟದ ಊಟದ ವ್ಯವಸ್ಥೆ ಇಲ್ಲದೆ ಜೀವನ ಸಾಗಿಸುತ್ತಿದ್ದ ರಿಂದ ತಯಾರು ಮಾಡಿದ ಅಡುಗೆ ಹಂದಿಗಳ ಪಾಲಾಗುತ್ತಿದೆ.
ಹಾಸ್ಟೇಲ್ ನಲ್ಲಿ ಶೌಚಾಲಯ ಸ್ಥಿತಿ ಕಂಡು ದುರ್ನಾತಕ್ಕೆ ರೋಸಿ ಹೋಗಿ ವಿದ್ಯಾರ್ಥಿಗಳು ಬಯಲು ಶೌಚಾಲಯ ಮಾಡುತ್ತಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳು ರೂಮ್ ಸ್ವಚ್ಛ ಮಾಡಿಕೊಂಡು ಕಸ ಎತ್ತಬೇಕಾದ ಸ್ಥಿತಿ ಇದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಮೇಲೆ ಕಾಳಜಿ ಇಟ್ಟಿದ್ದೀರಾ, ಆದರೆ ಇವರ ಸ್ಥಿತಿ ನೋಡಿ ಯಾದರು ಪ್ರಾಂಶುಪಾಲ ವೆಂಕಟೇಶಪ್ಪ ಕಳೆದ 8 ವರ್ಷ ದಿಂದ ಇಲ್ಲೇ ಉಳಿದು ಕೊಂಡು ಮಕ್ಕಳ ಹೆಸರಲ್ಲಿ ಲೂಟಿ ಮಾಡುವ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸುವಿರಾ ಅಥವಾ ವಿಧಾನ ಸಭೆಯಲ್ಲಿ ಸನ್ಮಾನಿಸುವಿರಾ….?
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ