ಮಾಜಿ ದೇವದಾಸಿಯರ ಸರ್ಕಾರದ ಸರ್ವೇ ಪಟ್ಟಿಯಲ್ಲಿ ಸೇರಿಸುವಂತೆ ಹಾಗೂ ವಿವಿಧ ಮೂಲಭೂತ ಸೌಕರ್ಯಗಳು ಕಲ್ಪಿಸುವಂತೆ ಶಾಸಕರಿಗೆ ಮನವಿ.

ಕೂಡ್ಲಿಗಿ ಜನೇವರಿ.4

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ 14ನೇ ವಾರ್ಡಿನ ಡಾ. ಬಿ.ಆರ್ ಅಂಬೇಡ್ಕರ್ ನಗರದಲ್ಲಿ ಜನವರಿ 1 ಮಂಗಳವಾರ ರಂದು ಮಾನ್ಯ ಜನಪ್ರಿಯ ಶಾಸಕರಾದ ಡಾಕ್ಟರ್. ಎನ್‌.ಟಿ ಶ್ರೀನಿವಾಸ್ ರವರು ಹೊಸ ವರ್ಷದ ಸಂಭ್ರಮಾಚರಣೆಯನ್ನು ಜಗತ್ತಿನೆಲ್ಲಡೆ ಹೊಸ ವರ್ಷದ ಆಚರಣೆಯನ್ನು ಉನ್ನತ ಸ್ಥಿತಿವಂತರು ಎಲ್ಲರೂ ತಮಗಿಷ್ಟ ಬಂದಂತೆ ವಿಧವಿಧವಾದ ರೀತಿಯಲ್ಲಿ ಬಹಳ ವಿಜೃಂಭಣೆಯಿಂದ ಸಂತೋಷವಾಗಿ ಮೋಜು ಮಸ್ತಿನೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಯನ್ನು ಈ ದಿನಗಳಲ್ಲಿ ಮಾಡುತ್ತಾರೆ. ಆದರೆ 2024.ನೇ ಸಾಲಿನಲ್ಲಿ ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಎನ್ ಟಿ ಶ್ರೀನಿವಾಸ್ ರವರು ದಲಿತರ ಕೇರಿಯಲ್ಲಿ ವಿಮುಕ್ತ ದೇವದಾಸಿ ಮಹಿಳೆಯರೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಯನ್ನು ಮಹಿಳೆಯರಿಗೆ ಸಿಹಿ ತಿನಿಸುವುದರ ಮೂಲಕ ಆಚರಣೆ ಮಾಡಿದರು ಯಾವ ಕಾಲಕ್ಕೂ ಹೊಸ ವರ್ಷ ಯಾವ ಶಾಸಕರು ನಮ್ಮ ಜೊತೆಗೆ ಹೊಸ ವರ್ಷದ ಸಂಭ್ರಮವನ್ನು ನಾವು ಆಚರಣೆ ಮಾಡಿರಲಿಲ್ಲ ಎಂದು ದೇವದಾಸಿ ಮಹಿಳೆಯರು ಹಾಗೂ ಕಾಲೋನಿಯ ಎಲ್ಲಾ ಯುವಕರು ಮುಂಖಂಡರುಗಳು ಸಂತೋಷ ವ್ಯಕ್ತಪಡಿಸಿದರು,

ಹಾಗೆ ಶಾಸಕರು ಮಾತನಾಡುತ್ತ ಸರ್ಕಾರದ ಕೆಲವು ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವಂತೆ ಭರವಸೆ ನೀಡಿದರು.ಈ ಇಂದೇ ಚುನಾವಣೆ ಸಂರ್ಭದಲ್ಲಿ ಕೊಟ್ಟ ಮಾತಿನಂತೆ ಅಂಬೇಡ್ಕರ್ ನಗರದಲ್ಲಿ ನಿಜವಾದ ಕುಟುಂಬಗಳಿಗೆ ಮನೆ ಯಾರಿಗಿಲ್ಲಹೋ! ಅಂತವರನ್ನು ಗುರುತಿಸಿ ಮುಂದಿನ ದಿನಗಲ್ಲಿ ಮನೆಗಳನ್ನು ಕೊಡುವುದಾಗಿ ಭರವಸೆ ನೀಡಿದರು.ಈ ಸಂರ್ಭದಲ್ಲಿ ದಲಿತ ಮುಖಂಡರಾದ ಮಾಜಿ ಸೈನಿಕರಾದ ರಮೇಶ ಪೌರ ಕಾರ್ಮಿಕ ರಾಜ್ಯಾಧ್ಯಕ್ಷರಾದ ಕೆ ಪ್ರಭಾಕರ್, ಕೆ. ಮಹೇಶ್ ಹೆಗ್ಡಳ್, ಡಿ. ಹೆಚ್. ದುರುಗೇಶ್ ವಕೀಲರು, ಸಂತೋಷ್, ಡಿ. ಹೆಚ್. ಮರಿಸ್ವಾಮಿ, ಜೆ. ರವಿಕುಮಾರ್, ದೇವದಾಸಿ ಮಹಿಳೆಯರು ಇದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button