ಮಾಲವಿ ಗ್ರಾಮದಲ್ಲಿ ಮದ್ಯದ ಅಂಗಡಿ ಇಡಲು ಆದೇಶವನ್ನು ರದ್ದುಪಡಿಸಿ – ಡಿ.ಸಿ ಯವರಿಗೆ ಮನವಿ.

ಹೊಸಪೇಟೆ ಜನೇವರಿ.11

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾಲವಿ ಗ್ರಾಮದಲ್ಲಿ ಎಂ.ಎಸ್.ಐ.ಎಲ್ ಮದ್ಯದ ಅಂಗಡಿಯನ್ನು ತೆಗೆಯಲು ಮುದಾಗಿದ್ದು ನಮ್ಮ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ತೆಗೆಯಲು ಗ್ರಾಮದ ಎಲ್ಲಾ ಸಮುದಾಯದ ಮುಖಂಡರುಗಳು ಮಹಿಳೆಯರು ಒಟ್ಟಾಗಿ ಸೇರಿ ಮದ್ಯದ ಅಂಗಡಿ ಮಂಜೂರಾತಿಯನ್ನು ರದ್ದು ಪಡಿಸುವಂತೆ ಗ್ರಾಮದಲ್ಲಿ ತಾಲೂಕಾ ಕಚೇರಿ ಮುಂದೆ ಈಗೆ ಅನೇಕ ವಿಧ ವಿಧಗಳಲ್ಲಿ ಹೋರಾಟ ಮಾಡಿದರು ಸಹ ಕ್ರಮ ಕೈಗೊಳದೆ ಇರುವುದು ಶೋಚನೀಯ ಸಂಗತಿಯಾಗಿದೆ. ಆದ್ದರಿಂದ ಗುರುವಾರ ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ನೂರಾರು ಮಾಲವಿ ಗ್ರಾಮದ ಮುಖಂಡರುಗಳು ಮಹಿಳೆಯರು ಮದ್ಯಪಾನದ ಅಂಗಡಿ ತೆರೆದರೆ ಹೆಂಡತಿ ಮಕ್ಕಳು ಉಪವಾಸ ಎಂಬ ಘೋಷಣಗಳನ್ನು ಕೂಗುತ್ತಾ, ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಕೊಡುವುದರ ಮೂಲಕ ನೆರೆದಂತ ಗ್ರಾಮಸ್ಥರ ಹೋರಾಟದ ಉದ್ದೇಶವನ್ನು ತಮ್ಮ ಅಳಲನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸುವುದರೊಂದಿಗೆ ಗ್ರಾಮಸ್ಥರ ಬೇಡಿಕೆಯನ್ನು ಮನಗಂಡು ನಮ್ಮ ಗ್ರಾಮದಲ್ಲಿ ಮದ್ಯಪಾನ ಸೇವಕರಿಗೆ ಇನ್ನೂ ಹೆಚ್ಚಾಗಿ ಸೇವೆನೆ ಮಾಡಲು ಅವಕಾಶ ಮಾಡಿ ಕೊಟ್ಟಂತಾಗುತ್ತದೆ,

ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹೋರಾಟಗಾರರು ಮನವಿ ಮೂಲಕ ತಿಳಿಸಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಸುಧಾಕರ್ ರವರು ಮನವಿಯನ್ನು ಸ್ವೀಕರಿಸಿ ಮುಂದಿನ ಕ್ರಮಕ್ಕಾಗಿ ಹೋರಾಟಗಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಒಕ್ಕೂಟ ಕಾರ್ಯಕರ್ತರು ತ್ರಿವೇಣಿ, ನೀಲಮ್ಮ, ಗ್ರಾಕುಸ್ ತಾಲೂಕ್ ಕಾರ್ಯ ಕರ್ತರು ಕೊಟ್ರಮ್ಮ್, ಶೈನಾಜ್, ಸುಧಾ,ಸುಮ, ಹ್ಯಾಳ್ಯ ಚಂಬಸಪ್ಪ,ಚಿಲುಗೋಡು ಸುರೇಶ್, ಮಂಜುನಾಥ್, ಈಶಪ್ಪ ರೆಡ್ಡಿ,ಸುರೇಶ್, ಬoಡ್ರಿ ಕೊಟ್ರಪ್ಪ, ಕೋಟಾಗಿ ನಾಗರಾಜ್, ಗಾಣಿಗರ ನಾಗರಾಜ್, ತಳವಾರ ನಾಗಮ್ಮ, ಮಣಿಗಾರ್ ನಾಗಮ್ಮ, ಬಸಮ್ಮ, ಶಿಲ್ಪಾ ಹ್ಯಾಳ್ಯ ಸಣ್ಣಕ್ಕ,ಮಣಿಗಾರ್ ಸಾಕವ್ವಾ,ಮಂಜುಳ್, ನೀಲಮ್ಮ, ಶಾಮಲಾ, ಹುಲಿಗೆಮ್ಮ,ನಾಗಮ್ಮ, ಸಾಕಮ್ಮ್,ಪಾರ್ವತಿ, ನೀತ್ರಾವತಿ, ಅಂಜಿನಮ್ಮ, ರೇಣುಕಮ್ಮ,ಪ್ರಕಾಶ್, ರುದ್ರಮ್ಮ ,ನೀಲಮ್ಮ, ಮಾಲಾವಿ ಗ್ರಾಮ ಪಂಚಾಂಯಿತಿ ಅಧ್ಯಕ್ಷರು ದುರುಗಪ್ಪ,ಕೊಂಬಲಿ ಹುಲುಗಪ್ಪ,ಗೊರಪ್ಪ, ಬುಡೆನ್ಸಾಬ್, ಅಂಜಿನಪ್ಪ, ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button