ಜೆ.ಜೆ.ಎಂ ಕಾಮಗಾರಿಗೆ ಭೂಮಿ ಪೂಜೆ – ಅಶೋಕ ಮನಗೂಳಿ.
ಹಚ್ಯಾಳ ಜನೇವರಿ.17

ಸಿಂದಗಿ ಮತಕ್ಷೇತ್ರದ ಹಚ್ಯಾಳ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಿಂದಗಿ ಇವರು ಇಲಾಖೆ ವತಿಯಿಂದ ಮಂಜೂರಾದ ಜಲ ಜೀವನ ಮಿಷನ್ ಕಾಮಗಾರಿಯನ್ನು ಶಾಸಕರಾದ ಅಶೋಕ ಮನಗೂಳಿಯವರು ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು,ಪತ್ರಿ ಮನೆ ಮನೆಗೆ ನಲ್ಲಿ ಸಂಪರ್ಕದ ಮೂಲಕ ಪತ್ರಿ ಮನೆಗೆ ಶುದ್ಧ ಕುಡಿಯುವ ನೀರು ಸದುಪಯೋಗ ಪಡೆದು ಕೊಳ್ಳಬೇಕು, ನಮ್ಮ ತಂದೆಯವರು ಹೆಜ್ಜೆಯ ಮೇಲೆ ನಡೆದು ಹೋಗುತ್ತೇನೆ ಹಾಗೂ ಎಲ್ಲಾ ಗ್ರಾಮಸ್ಥರು ಕೂಡಿ ನನಗೆ ವಿಶೇಷ ಸನ್ಮಾನ ಮಾಡಿದಕ್ಕೆ ಸದಾ ನಿಮ್ಮ ಜೊತೆ ಇರುತ್ತೇನೆ.

ಎಂದು ನಂತರ ಗ್ರಾಮಸ್ಥರು ಕುಂದು ಕೊರತೆಗಳನ್ನು ಆಲ್ಲಿಸಿ ಶೀಘ್ರದಲ್ಲಿಯ ನಿಮ್ಮ ಆಶ್ವಾಸನೆಗಳನ್ನು ಈಡೇರಿಸುತ್ತೇನೆ ಎಂದು ಶಾಸಕರು ಹೇಳಿದರು. ಈ ಕಾರ್ಯಕ್ರಮದಲ್ಲಿ ಶ್ರೀಗಳಾದ ವಿರೂಪಾಕ್ಷ ಹಿರೇಮಠ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಣ್ಣ ಹಳ್ಳಿ ಶರಣಪ್ಪ ಬೂದಿಹಾಳ ನಾಗಪ್ಪ ಡೋಣೂರ ಭೀಮಣ್ಣ ಬಿರಾದಾರ ಎಂ ಡಿ ಹಳ್ಳಿ, ಹಾಗೂ ಅನಿಲ ಹರಿಜನ ಮತ್ತು ಸಂತೋಷ ಹಚ್ಯಾಳ ಬಂಢು ಶಾಂತವೀರಮಠ ಹಾಗೂ ಇಲಾಖೆಯ ಅಧಿಕಾರಗಳು, ಊರಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ