ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ.ಪಂ ಮುಖ್ಯಾಧಿಕಾರಿ ಆಡಳಿತ ವ್ಯವಸ್ಥೆ ಕುರಿತು ಚರ್ಚೆ.
ಕೊಟ್ಟೂರು ಜನೇವರಿ.18

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ.ನಸಾರುಲ್ಲಾ ರವರ ಜೊತೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆಯ ಕುರಿತು ಗುರುವಾರ ಚರ್ಚೆ ನಡೆಸಿದರು.ಇತ್ತೀಚಿನ ದಿನಗಳಲ್ಲಿ ಕೆಲ ಶಿಕ್ಷಕರು ಕೇವಲ ಸಮಯಕ್ಕೆ ತಕ್ಕಂತೆ ಸಂಬಳಕ್ಕಾಗಿ ಕೆಲಸ ಮಾಡುವವರು ಇದ್ದಾರೆ ಇಂತಹ ಸಂದರ್ಭದಲ್ಲಿ ತಾವು ಮಾಡುವ ವಿಷಯ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಮಕ್ಕಳು ಎಂದು ಅನಿತಾ ವಿವೇಕಾನಂದ ಸಮಾಜ ಶಿಕ್ಷಕಿ ಸ್ಥಳೀಯ ಸರ್ಕಾರ ರಚನೆ ಮತ್ತು ಅಭಿವೃದ್ಧಿಗೆ ಅವುಗಳ ಪಾತ್ರ ಎನ್ನುವ ವಿಷಯದ ಬಗ್ಗೆ ತಿಳಿಯ ಪಡಿಸಲು ಸರ್ಕಾರಿ ಬಾಲಕಿಯರು ಪ್ರೌಢಶಾಲೆ ಕೊಟ್ಟೂರು ಎಸ್ ಎ ಬಸವರಾಜ್ ಮುಖ್ಯ ಶಿಕ್ಷಕರ ಅನುಮತಿ ಪಡೆದು ಕೊಂಡು ಪಟ್ಟಣದ ಪಟ್ಟಣ ಪಂಚಾಯಿತಿಗೆ ಕರೆದು ಕೊಂಡು ಹೋಗಿ ವಿಷಯದ ಬಗ್ಗೆ ಮಕ್ಕಳಿಗೆ ಶಿಕ್ಷಣವೆಂಬ ಶಕ್ತಿಯನ್ನು ತಿಳಿಸಿ ಕೊಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯವರು ಪಂಚಾಯಿತಿಗಳು ಹೇಗೆ ಉಗಮವಾಯಿತು ಇದರ ಉದ್ದೇಶ ಏನು ಇದರಿಂದ ಏನೆಲ್ಲಾ ಪ್ರಯೋಜನ ಇದರ ಮೂಲ ಇತಿಹಾಸದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿನಿಯರಿಗೆ ತಿಳಿಸಲಾಯಿತು .ಪ್ರಸ್ತುತ ಕೊಟ್ಟೂರು ಪಟ್ಟಣವನ್ನು 20 ವಾರ್ಡ್ಗಳಾಗಿ ವಿಂಗಡಿಸಲಾಗಿದ್ದು, ಕೊಟ್ಟೂರು ಟೌನ್ ಪಂಚಾಯತ್ 26,289 ಜನಸಂಖ್ಯೆಯನ್ನು ಹೊಂದಿದೆ ಅದರಲ್ಲಿ 13,190 ಪುರುಷರು ಮತ್ತು 13,099 ಮಹಿಳೆಯರು ಇದು 2011 ರ ಜನ ಗಣತಿಯ ವರದಿಯ ಪ್ರಕಾರವಾಗಿದೆ ಎಂದರು.

ಪಟ್ಟಣ ಪಂಚಾಯಿತಿಯ ಆಡಳಿತ ವ್ಯವಸ್ಥೆಯಲ್ಲಿ ಮನೆಗಳಿಗೆ ಸಂಬಂಧಿಸಿದಂತೆ ಖಾತಾ ನಕಲು, ಅಂಗಡಿಗಳಿಗೆ, ಉದ್ಯಮಿದಾರರಿಗೆ ,ವಾಣಿಜ್ಯ ಪರವಾನಿಗೆ ನೀಡಲಾಗುವುದು, ಜನನ,ಮರಣ ಪ್ರಮಾಣ ಪತ್ರಗಳು,ಕಟ್ಟಡ ಪರವಾನಿಗೆ ನೀಡುವುದು, ನಳ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದು , ಆಸ್ತಿ ಮಾಲಿಕತ್ವದ ಹಕ್ಕು ಬದಲಾವಣೆ, ಈಗೆ ಹಲವಾರು ಒಟ್ಟು 18 ಸೇವೆಗಳನ್ನು ನೀಡಲಾಗಿದೆ ಹಾಗೂ ವಿದ್ಯಾರ್ಥಿಗಳಿಗೆ ಬುಕ್ ಬಿಲ್ ಎಂಬ ಪ್ರೋತ್ಸಾಹ ಧನವಾಗಿ ಪ್ರತಿ ವರ್ಷ ನೀಡಲಾಗುತ್ತಿದೆ ಇದರ ಪ್ರಯೋಜನ ಪಡೆದು ಕೊಳ್ಳಬೇಕು ಎಂದು ಹೇಳಿದರು.ಕಿರಿಯ ಆರೋಗ್ಯ ನಿರೀಕ್ಷಕರಾದ ಅನುಷಾ ರವರು ಮಾತನಾಡಿ ಪ್ಲಾಸ್ಟಿಕ್ ನಿಂದ ಆಗುವ ಅನಾನುಕೂಲಗಳು ಕುರಿತು ಚರ್ಚಿಸಿದರು.ಜನನ ಮತ್ತು ಮರಣ ಪ್ರಮಾಣ ಪತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಹಸಿ ಕಸ ಮತ್ತು ಒಣ ಕಸ ಪ್ರತಿ ಮನೆಯಲ್ಲಿ ವಿಂಗಡಣೆ ಮಾಡಬೇಕು ಪಟ್ಟಣ ಸ್ವಚ್ಛತೆ ಹೊಂದಲು ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಜೊತೆಗೆ ಸಾರ್ವಜನಿಕರು ಸಹ ಕರಿಸುವಂತೆ ನಿಮ್ಮ ನಿಮ್ಮ ಮನೆಯಲ್ಲಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸ ಬೇಕು ಎಂದು ಹೇಳಿದರು.ನಂತರ ವಿದ್ಯಾರ್ಥಿನಿಯರು ಮುಖ್ಯಧಿಕಾರಿಗಳ ಜೊತೆ ಪಟ್ಟಣ ಪಂಚಾಯತ್ ಆಡಳಿತದ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಗಳನ್ನು ಕೇಳುವುದರ ಮೂಲಕ ಪರಿಹಾರ ಕಂಡು ಕೊಂಡರು ಹಾಗೂ ವಿದ್ಯಾರ್ಥಿನಿಯರು ಮುಖ್ಯಧಿಕಾರಿಗಳಿಗೆ ಶಾಲೆಯ ಸಮಸ್ಯೆ ಕುರಿತು ಪರಿ ಹರಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸದಸ್ಯೆ ವೀಣಾ ವಿವೇಕಾನಂದ, ಶಿಕ್ಷಕ ಹೆಚ್. ಮಹಾಂತೇಶ್, ಜಿ. ಕೊಟ್ರಮ್ಮ, ಅನಿತಾ ಮತ್ತು ವಿದ್ಯಾರ್ಥಿನಿಯರು ಇದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು