ಕೂಡ್ಲಿಗಿ:ಸಿಲಿಂಡರ್ ಗೆ 100₹ ಹೆಚ್ಚು ಹಣ ವಸೂಲಿ ತಹಶೀಲ್ದಾರರಿಗೆ ದೂರು.
ಕೂಡ್ಲಿಗಿ ಜನೇವರಿ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ನೆಲ್ಲೆಡೆಗಳಲ್ಲಿ, ಅಡಿಗೆ ಅನಿಲ ಸಿಲಿಂಡರ್ ವಿತರಕರು ಹಾಗೂ ಏಜೆಂಟರು. ಅಡಿಗೆ ಅನಿಲ ಸಿಲಿಂಡರ್ ಗ್ರಾಹಕರಿಂದ ವಿತರಣೆ ಸಂದರ್ಭದಲ್ಲಿ, ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ 100₹ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ಅಂತಹ ವಿತರಕರ ವಿರುದ್ಧ ಹಾಗೂ ಏಜೆಂನ್ಸಿಯವರ ವಿರುದ್ಧ, ಕಾನೂನು ರೀತ್ಯ ಅಗತ್ಯ ಶಿಸ್ತು ಕ್ರಮ ಜರುಗಿಸಬೇಕೆಂದು. ರಾಷ್ಟ್ರೀಯ ಮಾನವ ಹಕ್ಕುಗಳು, ಮತ್ತು ಸಾಮಾಜಿಕ ನ್ಯಾಯ ಆಯೋಗ ಜಿಲ್ಲಾ ಘಟಕ ದೂರಿದೆ. ಆಯೋಗದ ಜಿಲ್ಲಾ ಘಟಕದ ಉಪಾಧ್ಯಕ್ಷ ಗುನ್ನಳ್ಳಿ ಶ್ರೀಧರವರ ನೇತೃತ್ವದಲ್ಲಿ, ಆಯೋಗದ ಪದಾಧಿಕಾರಿಗಳು ತಹಶೀಲ್ದಾರರಾದ ಎಮ್.ರೇಣುಕಮ್ಮರವರಿಗೆ. ತಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕಾಗಿ ಒತ್ತಾಯಿಸಿ, ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. ಈ ಸಂದರ್ಭದಲ್ಲಿ ಗುಡ್ಡದ ರಾಜು, ಮಂಜು, ಸುರೇಂದ್ರ, ರಾಘವೇಂದ್ರ ಸೇರಿದಂತೆ ಮತ್ತಿತರರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ