ನ. ನಾಗಲಿಂಗ ಸ್ವಾಮಿ ಅವರ ಸ್ಮರಣೆ ಮಾಡಿದ – ಕರ್ನಾಟಕ ಯುವ ಘರ್ಜನೆ ವೇದಿಕೆ.

ಸೌವದತ್ತಿ ಡಿ.01

ರಾಜ್ಯ ಪ್ರಶಸ್ತಿ ಪುರಸ್ಕೃತರು, ಕನ್ನಡ ಕ್ರಾಂತಿ ದಳದ ಸಂಸ್ಥಾಪಕರಾದ ಕನ್ನಡ ಯೋಧ ದಿ ನ. ನಾಗಲಿಂಗಸ್ವಾಮಿ ಯವರ‌ ಜಯಂತಿಯನ್ನು ಕರ್ನಾಟಕ ಯುವ ಘರ್ಜನೆ. ನಜರಬಾದ್ ನಲ್ಲಿರುವ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ದಿ. ನ.ನಾಗಲಿಂಗಸ್ವಾಮಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿ ಜಯಂತಿಯನ್ನು ಆಚರಣೆ‌ ಮಾಡಲಾಯಿತು. ಕರ್ನಾಟಕ ಯುವ ಘರ್ಜನೆ ವೇದಿಕೆಯ ರಾಜ್ಯಾಧ್ಯಕ್ಷ ಉಮೇಶ್ ಅವರು ಮಾತನಾಡಿ, ನ. ನಾಗಲಿಂಗ ಸ್ವಾಮಿಯವರು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ವಿಚಾರದಲ್ಲಿ ವಿಶೇಷವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರವಾದದ್ದು ಎಂದು ಬಣ್ಣಿಸಿದರು.

ನಾವೆಲ್ಲ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇವೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ. ನಾಗಲಿಂಗಸ್ವಾಮಿ ಅವರ ಪುತ್ರ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ‌ಅವರಿಗೆ ಉಮೇಶ್ ಅವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ನಮ್ಮ ತಂದೆ ನಾಗಲಿಂಗ ಸ್ವಾಮಿ ಅವರನ್ನು ಸ್ಮರಿಸಿ ಕರ್ನಾಟಕ ಯುವ ಘರ್ಜನೆ ವೇದಿಕೆಯವರು ಜನ್ಮ ದಿನ ಆಚರಿಸಿರುವುದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ನಾ ನಾಗಲಿಂಗ ಸ್ವಾಮಿಯವರು ನಾಡಿನ ನೆಲ ಜಲ ಭಾಷೆ ಇತಿಹಾಸ ಸಂಸ್ಕೃತಿ ಸಾಹಿತ್ಯಕ್ಕೆ ಅಪಾರ ಕೊಡಿಗೆ ನೀಡಿದ್ದಾರೆ. ಇದು ನನಗೆ ಹೆಮ್ಮೆಯ ವಿಷಯ. ನಾವೆಲ್ಲ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುತ್ತೇವೆ ಎಂದು ತಿಳಿಸಿದರು. ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷರಾದ ವೈ.ಎನ್‌.ಮಹೇಶ್, ಕಿರಣ್ ಸೋಮಣ್ಣ, ರಾಘವೇಂದ್ರ, ಅರುಣ್, ಕಾಳೆಗೌಡ, ಮೋಹನ್ ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button