ಮಂತ್ರಾಲಯದ 30. ನೆಯ ವರ್ಷದ ಪಾದಯಾತ್ರೆಗೆ – ವೀಣಾ ಕಾಶಪ್ಪನವರ ಚಾಲನೆ.

ಹುನಗುಂದ ಜನೇವರಿ.21

ಮಂತ್ರಾಲಯದ 3೦. ನೆಯ ವರ್ಷದ ಪಾದಯಾತ್ರೆಗೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಚಾಲನೆ ನೀಡಿದರು.ಪಟ್ಟಣದ ಗುರು ಸಾರ್ವಭೌಮ ಮಠದಿಂದ ಗುರು ಸಾರ್ವಭೌಮ ಪಾದಯಾತ್ರಾ ಸಮಿತಿಯು ಕೈಗೊಂಡ ಮಂತ್ರಾಲಯದ 3೦ನೇ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು,ಪ್ರತಿಯೊಂದು ಧರ್ಮ ಮತ್ತು ದೇವರುಗಳಲ್ಲಿ ಎಲ್ಲರೂ ನಂಬಿಕೆ ಇಡುವದು ಅನಿವಾರ್ಯ ಪ್ರತಿ ವರ್ಷದಂತೆ ಪಾದಯಾತ್ರೆ ನಡೆಸುವ ಯುವಕರು ಸಮಯವನ್ನು ವ್ಯರ್ಥ ಮಾಡದೆ ಶಿಕ್ಷಣದಲ್ಲಿ,ಉದ್ಯಮದಲ್ಲಿ ಮತ್ತು ದೇಶಕಟ್ಟುವ ಮಹತ್ವದ ಕಾರ್ಯದಲ್ಲಿ ತೊಡಗಿ ಕೊಳ್ಳಬೇಕು.ಇಂಥ ಧಾರ್ಮಿಕ ಕಾರ್ಯದಿಂದ ಮನಸ್ಸು ಶುದ್ಧವಾಗಿ ಸದಾ ಚೈತನ್ಯದಿಂದ ಇರುತ್ತದೆ. ಯುವಕರ ಆರೋಗ್ಯ ಸಧೃಢವಾಗಿದ್ದರೆ ಸಾಧನೆ ನಮ್ಮ ದಾಗುತ್ತದೆಂದು ತಿಳಿಸುವುದರ ಜೊತೆಗೆ ಪಾದಯಾತ್ರಿಗಳಿಗೆ ಶುಭ ಹಾರೈಸಿದರು. ಇದೆ ವೇಳೆ ತಾಪಂ ಇಒ ಮುರಳೀಧರ ದೇಶಪಾಂಡೆ ಇದ್ದರು.ಹುನಗುಂದ,ಕಟಗೂರ, ಸುತಗುಂಡಾರ, ಸೀಮಿಕೇರಿ ಮತ್ತು ಶಿರೂರ್ ನಗರದ 85.ಕ್ಕೂ ಹೆಚ್ಚು ಭಕ್ತಾಧಿಗಳಿಗೆ ಹಾಲು ಹಣ್ಣು ವಿತರಿಸಿ ಶುಭ ಹಾರೈಸಿದರು. ನ್ಯಾಯವಾದಿ ಮಾಧವ ದೇಶಪಾಂಡೆ ನೇತೃತ್ವದಲ್ಲಿ ಗಿರೀಶ ಗುಡ್ಡದ, ನರಸಿಂಹ ಕಾಳಗಿ, ಸಮೀರ ದೇಶಪಾಂಡೆ,ಕುಶಾಲ ಮುದಕವಿ, ಮಹಾಂತೇಶ ಹಿರೊಳ್ಳಿ, ಈರಣ್ಣ ನಾಯಕ, ಗಿರೀಶ ದೇಸಾಯಿ, ಯಲಗೂರೇಶ ಕೊಲಕಾರ,ಪ್ರಲ್ಹಾದ ಜಹಗೀರದಾರ ಮತ್ತು ಪುಟ್ಟು ಕಮತಗಿ ಸೇರಿದಂತೆ ಹಲವಾರು ಭಕ್ತರು ಪಾಲ್ಗೊಂಡಿದ್ದರು. ಸಮಾಜದ ಅಧ್ಯಕ್ಷ ವಾದಿರಾಜ ಗುಡ್ಡದ, ಭೀಮಸೇನರಾವ್ ದೇಸಾಯಿ,ಗುರುರಾಜ ದೇಶಪಾಂಡೆ, ಮಾಧವಿ ದೇಶಪಾಂಡೆ,ವಿದ್ಯಾ ಗುಡ್ಡದ ಇತರರು ಬೀಳ್ಕೊಟ್ಟರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button