ಶಾರದಾಂಬೆ ಶಾಲೆಯಲ್ಲಿ ಪಾಲಕರ ಸಭೆ.
ಇಂಡಿ ಸಪ್ಟೆಂಬರ್.24

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಶ್ರೀ ಶಾರದಾಂಬೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು” ಮಕ್ಕಳ ಕಲಿಕೆಯ ಪ್ರಗತಿ” ಯ ಕುರಿತು ಪಾಲಕರ ಸಭೆ ಕರೆಯಲಾಗಿತ್ತು.ಆದರೆ ಆ ಶಾಲೆಗೆ ಹೊದರೆ ಸಾಕು ಮೊದಲು ನೆನಪಾಗುವುದು ಪರಿಸರ ಮಡಿಲಿನ ಶಿಕ್ಷಣ ಆ ಶಿಕ್ಷಣ ಈ ಶಾರದಾಂಬೆ ಶಾಲೆಯಲ್ಲಿದೆ.ಅದೇ ರೀತಿಯಲ್ಲಿ ಶಿಕ್ಷಕರು ಮತ್ತು ಮಕ್ಕಳು ಅನ್ಯೋನ್ಯತೆಯಿಂದ ಕಲಿಕೆಯಲ್ಲಿ ಪ್ರಗತಿ ಕಾಣಸಿಗುತ್ತದೆ.ಈ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು,

ಪಾಲಕರಿಗೆ ಶಿಕ್ಷಕರು ತಮ್ಮಮಕ್ಕಳಿಗೆ ವಾರಕ್ಕೊಮ್ಮೆ ಘಟಕ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳು ಪಡೆದುಕೊಂಡ ಅಂಕಗಳು,ಅವರ ನೋಟಪುಸ್ತಕಗಳಲ್ಲಿ ಬರೆದ ಬರಹಗಳ ಬಗ್ಗೆ ಅವಲೋಕನ ಮಾಡಲು ತಿಳಿಸುತ್ತಾರೆ.ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಚಿಕ್ಕ -ಪುಟ್ಟ ದೋಷಗಳಿದ್ದರೆ ಅದನ್ನು ವಾರದೊಳಗಾಗಿ ಅಚ್ಚುಕಟ್ಟಾಗಿ ಸರಿಪಡಿಸುವ ವ್ಯವಸ್ಥೆ ಮಾಡಲಾಗಿದೆ.ವಿದ್ಯಾಥಿ೯ಗಳ ಶೈಕ್ಷಣಿಕ ಪ್ರಗತಿಗೆ ಕುಟುಂಬ,ಶಾಲೆಯ ಶಿಕ್ಷಕರು, ಮತ್ತು ಸುತ್ತಮುತ್ತಲಿನ ಪರಿಸರ ಹೀಗೆ ಶಿಕ್ಷಣ ಪಡೆಯಲಿಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಈ ಶಾಲೆಯಲ್ಲಿದ್ದು ಮಕ್ಕಳಿಗೆ ಶಿಕ್ಷಣ ಕೊಡುವ ಉತ್ತಮ ಜ್ಞಾನದ ಭಂಡಾರ ಕೇಂದ್ರವಾಗಿದೆ.ಮತ್ತು ಶಾಲೆಯ ಪ್ರತಿಯೊಂದು ಕೋಣೆಗೂ ಸಿ.ಸಿ.ಕ್ಯಾಮರಾ ಅಳವಡಿಸಿದ್ದು ವಿಶೇಷವಾಗಿದೆ.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ