ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಂಡರೆ ಸಮಾಜದಲ್ಲಿ ಮುಂದಿನ ದಿನಮಾನಗಳಲ್ಲಿ ಸಂಪನ್ಮೂಲ ಪ್ರಜೆಗಳಾಗಲು ಸಾಧ್ಯವಿಲ್ಲ ಎಂದ ಸಿ.ಮಹಾಲಕ್ಷ್ಮಿ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರು.
ಕೂಡ್ಲಿಗಿ ಜೂನ್.12

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹಿರೇಮಠ ವಿದ್ಯಾಪೀಠ ಪ್ರೌಢಶಾಲೆ ಗುಡೆಕೋಟೆ ರಸ್ತೆ ಕೂಡ್ಲಿಗಿಯ ವಿಶ್ವ ಬಾಲಕಾರ್ಮಿಕರ ಪದ್ಧತಿ ನಿಷೇಧ ದಿನಾಚರಣೆ 2023 ಇದನ್ನು ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ,ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ಸಹಾಯವಾಣಿ, ಹಾಗೂ ಹಿರೇಮಠ ವಿದ್ಯಾಪೀಠ ಪ್ರೌಢಶಾಲೆ ಕೂಡ್ಲಿಗಿ ,ಇವರ ಸಹಯೋಗದೊಂದಿಗೆ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು ,ಶಾಲಾ ಮಕ್ಕಳಿಗೆ ಕಾನೂನು ಅರಿವು -ನೆರವು ಜಾಗೃತಿ ಕಾರ್ಯಕ್ರಮವನ್ನು ಸೋಮವಾರದಂದು ಮಧ್ಯಾಹ್ನ 2:30ಕ್ಕೆ ಆಯೋಜಿಸಲಾಗಿದ್ದು ,ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀಮತಿ ಸಿ.ಮಹಾಲಕ್ಷ್ಮಿ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರು ಇವರು ಮಕ್ಕಳನ್ನು ಕುರಿತು ಮಾತನಾಡಿದ ಅವರು “ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ” ಮಾಡಲು ಕಾರಣ ಏನೆಂದರೆ ಇಂದು ನಮ್ಮ ಸುತ್ತ ಮುತ್ತಲಿನ ಲ್ಲಿರುವ ಜನರು ಸಣ್ಣ ಸಣ್ಣ ಮಕ್ಕಳಿಂದ ಕೇಲಸವನ್ನು ಮಾಡಿಸಿಕೊಂಡರೆ ಶಾಲೆಯಲ್ಲಿ ಓದಬೇಕಾದ ಮಕ್ಕಳ ಜೀವನದಲ್ಲಿ ಕಾರ್ಮಿಕರ ಕೆಲಸದ ರೀತಿಗೆ ಮಕ್ಕಳನ್ನು ಬಳಿಸಿಕೊಂಡು 100 ರೂಪಾಯಿ ಹಣ ಕೊಡಬೇಕಾಗಿರುತ್ತದೆ ಅಂತ ಸಮಯದಲ್ಲಿ ಮಕ್ಕಳಿಗೆ 10ರೂಪಾಯಿ ಹಣ ಕೊಟ್ಟು ಮಕ್ಕಳಿಂದ ಕೇಲಸವನ್ನು ಮಾಡಿಸಿಕೊಂಡು ತಮ್ಮ ತಮ್ಮ ಕೆಲಸ ಪೂರೈಸಿ ಕೋಳ್ಳುವಂತವರ ವಿರುದ್ಧ ಅಪ್ರಾಪ್ತ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕಾನೂನು ಜಾರಿಗೆ ಇರುವುದರಿಂದ ಅಂಥವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ.

ಮತ್ತು ನಿಮ್ಮಂತ ಮಕ್ಕಳು ಮುಂದಿನ ದಿನಮಾನಗಳಲ್ಲಿ ದೇಶದಲ್ಲಿ ಮಕ್ಕಳು ಸಮಾಜದ ಒಳತಿಗಾಗಿ ಮಕ್ಕಳು ಉತ್ತಮವಾಗಿ ಶಿಕ್ಷಣವನ್ನು ಪಡೆದು ಸಮಾಜ ಮತ್ತು ದೇಶಕ್ಕಾಗಿ ಮಕ್ಕಳು ಅಭಿವೃದ್ಧಿ ಹೊಂದಬೇಕು ಅಂತ ಮಕ್ಕಳೇ ಇಂದು ಕೂಲಿ ಕಾರ್ಮಿಕರಾಗಿ ಬಾಲ ಕಾರ್ಮಿಕರಾದರೆ ಅಂತ ಮಕ್ಕಳು ಸಮಾಜದಲ್ಲಿ ಉತ್ತಮವಾದ ಪ್ರಜೆಗಳಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಆದ್ದರಿಂದ ಎಲ್ಲಾ ಮಕ್ಕಳು ಈ ಕಾನೂನುನನ್ನು ಅರ್ಥ ಮಾಡಿಕೊಂಡು ಸಮಾಜದ ದೃಷ್ಟಿಯಲ್ಲಿ ಶಿಕ್ಷಣವನ್ನು ಪಡೆಯುವುದರೊಂದಿಗೆ ದೇಶಕ್ಕೆ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಬದಲಾವಣೆ ಹೊಂದಬಹುದು ಆದ್ದರಿಂದ ನೀವುಗಳು ನಿಮ್ಮ ಅಕ್ಕಪಕ್ಕದಲ್ಲಿರುವ ಮನೆಗಳಲ್ಲೂ ಯಾರಾದರೂ ಬಾಲಕಾರ್ಮಿಕರಾಗಿ ಹೊಗಿದ್ದರೆ ಅಂತವರಿಗೆ ಕಾನೂನಿನ ಅರಿವು ತಿಳಿ ಹೇಳುವುದರ ಮೂಲಕ ದೇಶಕ್ಕೆ ಒಳ್ಳೆಯ ಪ್ರಜೆಗಳಾಗಬೇಕಾದರೆ ನಾವುಗಳು ಶಿಕ್ಷಣವಂತರಾಗಬೇಕು ಎಂದು ತಿಳಿಸುವುದರೊಂದಿಗೆ ನಿಮಗೆ ಬಾಲಕಾರ್ಮಿಕರು ಕೆಲಸ ಮಾಡುವವರು ಯಾರಾದರೂ ಬಳಸಿಕೊಳ್ಳುತ್ತಿರುವಂತ ವ್ಯಕ್ತಿಗಳನ್ನು ನೋಡಿದರೆ ನೀವು ಮಕ್ಕಳ ಸಹಾಯವಾಣಿಗೆ ಕರೆ ಮಾಡುವುದರ ಮೂಲಕ ತಿಳಿಸಿ ಬಾಲಕಾರ್ಮಿಕ ಪದ್ಧತಿ ನಿಷೇಧ ಮಾಡಲು ಎಲ್ಲರೂ ಕೈಜೋಡಿಸಿದಂತಾಗುತ್ತದೆ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವೆಗಳ ಸಮಿತಿ ,ಮತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ.ಎಚ್.ಎಂ ಕೊಟ್ರಯ್ಯ ಮುಖ್ಯ ಗುರುಗಳು ಹಿರೇಮಠ ವಿದ್ಯಾಪೀಠ ಪ್ರೌಢಶಾಲೆ, ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸೂರ್ಯಪ್ಪ ಡೊಂಬರ್ ಮತ್ತು ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಹಾಗೂ ಶ್ರೀಮತಿ ಶಿಲ್ಪ .ವೈ ಸಹಾಯಕ ಸರ್ಕಾರಿ ಅಭಿಯೋಜಕರು, ಹಾಗೂ ಎಮ್. ಅಶೋಕ ಕಾರ್ಮಿಕ ನಿರೀಕ್ಷಕರು ಕೂಡ್ಲಿಗಿ, ಈಶ್ವರಯ್ಯ ಕ್ಷೇತ್ರ ಅಧಿಕಾರಿಗಳು ಕಾರ್ಮಿಕ ಇಲಾಖೆ ಕೂಡ್ಲಿಗಿ ,ಮತ್ತು ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಿ. ಕರಿಬಸವರಾಜ್, ಪ್ಯಾನಲ್ ವಕೀಲರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ