ಶ್ರೀ ರಾಮಚಂದ್ರರ ಆದರ್ಶ ವ್ಯಕ್ತಿತ್ವ ಇಂದಿಗೂ ಮಾದರಿಯಾಗಿದೆ – ಮಹಾಂತಯ್ಶ ಗಚ್ಚಿನಮಠ.

ಹುನಗುಂದ ಜನೇವರಿ.23

ಭಾರತ ಸನಾತನ ಹಿಂದು ಧರ್ಮ ಭೂಮಿಯಲ್ಲಿ ಶರಣರು,ಸಂತರು,ದಾರ್ಶನಿಕರು,ಕವಿಗಳು,ಪುಂಗವರು ಅನೇಕರು ತಮ್ಮ ಆದರ್ಶಗಳನ್ನು ಈ ನೆಲೆದಲ್ಲಿ ಬಿಟ್ಟು ಹೋಗಿದ್ದಾರೆ.ಮಹರ್ಷಿ ವಾಲ್ಮೀಕಿಯವರು ಮಾರ್ಯಾದೆ ಪುರುಷ ಶ್ರೀ ರಾಮನ ಬಗ್ಗೆ ತಿಳಿಸಿದ್ದಾರೆ ಎಂದು ಗಚ್ಚಿನಮಠದ ಮಹಾಂತಯ್ಯ ಗಚ್ಚಿನಮಠ ಹೇಳಿದರು.ಪಟ್ಟಣದ ಶಶಿಗುಡಿ ನಗರದಲ್ಲಿ ಮಾರುತೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರೀರಾಮ ಪ್ರಾಣ ಪ್ರತಿಷ್ಠಾಪನ ವಿಶೇಷ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು,೯೦ ಸಾವಿರ ಇತಿಹಾಸವನ್ನು ಹೊಂದಿದ ಧರ್ಮ ಯಾವದಾದರೂ ಇದ್ದರೇ ಅದು ಹಿಂದು ಧರ್ಮವಾಗಿದೆ.ಶ್ರೀರಾಮಚಂದ್ರ ಆದರ್ಶ ವ್ಯಕ್ತಿತ್ವ ಇಂದಿಗೂ ಮಾದರಿಯಾಗಿದೆ.ಲಂಕಾದೀಶ್ವರ ರಾವಣನಿಗೂ ಶೀರಾಮಚಂದ್ರ ಮಧ್ಯೆ ಗಣಗೋರ ಯುದ್ದ ನಡೆದು ರಾವಣನ್ನು ಸೋಲಿಸಿ ಮರಳಿ ಅವನ ರಾಜ್ಯವನ್ನು ಅವನ ತಮ್ಮ ವೀಭೂಷಣನಿಗೆ ಕೊಟ್ಟ ಗಣತೆ ಶ್ರೀರಾಮಚಂದ್ರರದು.ಶಬರಿಯ ಭಕ್ತಿಯನ್ನು ಮೆಚ್ಚಿ ಅವಳ ಕುಟೀರಕ್ಕೆ ಹೋಗಿ ಶಬರಿ ಕೊಟ್ಟ ಹಣ್ಣನ್ನು ತಿಂದು ಸಂತೃಪ್ತಿ ಗೊಂಡ ಕ್ಷಣ ಮರೆಯುವಂತಿಲ್ಲ.ರಾಮನ ಪರಮ ಭಕ್ತ ಹನಮಂತನಾಗಿದ್ದಾನೆ ಎಂದರು.ಈ ಸಂದರ್ಭದಲ್ಲಿ ಮಾರುತೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾನದ ನಿಮಿತ್ಯ ವಿಶೇಷ ಪೂಜೆ ನಡೆಯಿತು.ಮಹಾಂತೇಶ ಚಿತ್ತರಗಿ ಬಂದ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದು ನೂರಾರು ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿದರು.ಮಾರುತೇಶ್ವರ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಲಕ್ಷ್ಮಣ ಧನ್ನೂರ,ಅಧ್ಯಕ್ಷ ಜಕ್ಕಪ್ಪ ಹುನ್ನಳ್ಳಿ,ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಂಡರಗಲ್ಲ,ಮುತ್ತಣ್ಣ ಹವರಡ್ಡಿ,ಮುತ್ತಣ್ಣ ಹೆರೂರ,ಸಂಗಣ್ಣ ಹಡಪದ,ಮಲ್ಲಪ್ಪ ಹಡಪದ,ಮಹೇಶ ಹೊಸೂರ,ಸಂತೋಷ ಮುಕ್ಕಣ್ಣವರ,ಸುಭಾಸ ಮುಕ್ಕಣ್ಣವರ,ಶೇಖಣ್ಣ ಜವಳಗಿ,ಮಹಾಂತೇಶ ಪಲ್ಲೇದ,ಸುರೇಶ ಅರುಹುಣ ಶಿ,ರಾಜು ಬಡಿಗೇರ,ಸುರೇಶ ಹಳಪೇಟಿ ಸೇರಿದ್ದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button