“ಲಕ್ಕವಳ್ಳಿ ವಿಜಯಲಕ್ಷ್ಮಿಗೆ ಪಿ.ಎಚ್.ಡಿ ಪದವಿ ಪ್ರಧಾನ”.
ತರೀಕೆರೆ. 09

ಕುವೆಂಪು ವಿಶ್ವವಿದ್ಯಾನಿಲಯದ ಉಪನ್ಯಾಸಕರಾದ ಕುಮಾರಿ ವಿಜಯಲಕ್ಷ್ಮಿ ರವರು ಡಾ.ಮಂಜುನಾಥ್ ಪ್ರೊಫೆಸರ್ ಬಯೋ ಕೆಮಿಸ್ಟ್ರಿ ಬೆಂಗಳೂರು ವಿಶ್ವ ವಿದ್ಯಾನಿಲಯ ಇವರ ಮಾರ್ಗ ದರ್ಶನದಲ್ಲಿ, ಸಿಸ್ಟಮ್ಸ್ ಬಯಾಲಜಿ ಪ್ರೊಟೆಕ್ಷನ್ ಅಂಡ್ ವ್ಯಾಲಿಡೇಶನ್ ಆಫ್ ಆಂಟಿ ಕ್ಯಾನ್ಸರ್ ಪ್ರಾಪರ್ಟಿ ಆಫ್ ಎ.ಐ..ಟಿ.ಸಿ ಎಂಬ ಕುರಿತಾದ ಸಂಶೋಧನೆಗೆ ಕುವೆಂಪು ವಿಶ್ವ ವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ. V ವಿಜಯಲಕ್ಷ್ಮಿ ಲಕ್ಕವಳ್ಳಿಯ ಬಿಜೆಪಿ ಮುಖಂಡರಾದ ಬಿ. ಓ. ಚಂದ್ರಕಲಾ ಇವರ ಮಗಳಾಗಿರುತ್ತಾರೆ. ಹೈದರಾಬಾದ್ ನ, ಎನ್.ಐ.ಎನ್ ಸಂಸ್ಥೆಯ ವಿಜ್ಞಾನಿ ಡಾ. ದೇವರಾಜ್ ರವರು ಮುಖ್ಯ ಪರೀಕ್ಷೆಕರಾಗಿ ಭಾಗವಹಿಸಿದ್ದರು ಎಂದು ಪತ್ರಿಕೆಗೆ ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್. ತರೀಕೆರೆ. ಚಿಕ್ಕ ಮಗಳೂರು.