ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ – ಡಿ.ಆರ್.ಪಾಂಡುರಂಗಸ್ವಾಮಿ.
ಕಲಬುರ್ಗಿ ಜನೇವರಿ.25

ನಾಡಿನೂದ್ದಕ್ಕೂ ದಳಿತ ಚಳುವಳಿಯನ್ನು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಚಳುವಳಿಯ ಕಿಚ್ಚನ್ನು ಸಂವಿಧಾನದ ಆಶಯದಡಿಯಲ್ಲಿ ಹಾಗೂ ಬಾಬಾ ಸಾಹೇಬರ ಮಾರ್ಗ ದರ್ಶನ, ತತ್ವ ಸಿದ್ಧಾಂತದಲ್ಲಿ ರಾಜ್ಯ ಕಂಡ ಅಪ್ರತಿಮ ಹೋರಾಟಗಾರ ಮಹಾತ್ಮಾ ಪ್ರೊll ಬಿ, ಕೃಷ್ಣಪ್ಪ ರವರು ಆಗಿನ ಕಾಲಘಟ್ಟದಲ್ಲಿ ಹೋರಾಟದ ಕಿಚ್ಚು ಅಂಬೇಡ್ಕರರು ಭಾವಿಸಿದಂತೆ ಚಳುವಳಿ ರಥವನ್ನು ಎಳೆಯುತ್ತ ಮುಂದಕ್ಕೆ ಸಾಗಿ ಹಿಂದಕ್ಕೆ ಎಳೆಯದಿರಿ ಎಂದು ಮಾರ್ಮಿಕವಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಚಾಲಕರಾದ ಭೀಮಾಶಂಕರ ಕದಂ ಅತಿಥಿ ಭಾಷಣಕಾರರಾಗಿ ಉಪನ್ಯಾಸಕರಾದ ರಮೇಶ ಮಾಡ್ಯಾಳಕರ ಮಾತನಾಡಿ ಇಂದಿನ ಕಾಲಘಟ್ಟದ ಚಳುವಳಿಗಳು ಒಬ್ಬರ ಮೇಲೊಬ್ಬರ ನಾಯಕತ್ವಕ್ಕೆ ಸಿಲುಕಿ ಒಂದೆ ಮರದ ಹಲವಾರು ಪಂಗಡಗಳಾಗಿವೆ ಸತ್ಯಕ್ಕೆ ಸುಳ್ಳಿನ ಬೆಂಕಿಯನ್ನು ಹಚ್ಚಿ ನಮ್ಮ ಕಿಸೆಯನ್ನು ನಾವೇ ಸುಟ್ಟು ಕೊಳ್ಳುವ ಸತ್ಯದ ರಾಜಕೀಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ವಾಸ್ಥವ ಹಕ್ಕಿನಲ್ಲಿ ನ್ಯಾಯ ಸಿಕ್ಕಿದ್ದು ಮಂದಿರದಿಂದಲ್ಲ ಬಾಬಾ ಸಾಹೇಬರು ಕೊಟ್ಟ ಸಂವಿಧಾನದಿಂದ ಇಂದಿನ ವಿಚಾರ ಧಾರೆಯಲ್ಲಿ ನಾವು ಅನೇಕ ಜೀವನ ಸವಾಲುಗಳನ್ನು ನಿತ್ಯ ಎದುರಿಸುತ್ತಿದ್ದೇವೆ, ಎದುರಿಸ ಬೇಕಾಗಿದೆ ಸಂವಿಧಾನವನ್ನು ಮರೆಮಾಚಿ ನಮ್ಮ ಹಕ್ಕನ್ನು ತೀಕ್ಷ್ಣವಾಗಿ ಕಸಿದುಕೊಳ್ಳುವ ಕೆಲಸವನ್ನು ನಮ್ಮನ್ನಾಳುವ ಮನುವಾದಿಗಳು ಮಾಡುತ್ತಿದ್ದಾರೆ ಆಳುವವರು ಆಳುವ ವರ್ಗದಿಂದಲೆ ಬರುತ್ತಾರೆ ಆಳಿಸಿ ಕೊಳ್ಳುವವರು ಆಳಿಸಿ ಕೊಳ್ಳುತ್ತಲೇ ಇದ್ದಾರೆ ಅಕ್ಷರ್ ಅರಿವಿನ ಜೊತೆಗೆ ಸಂವಿಧಾನ ಕಡೆಗಣಿಸಿ ಅವಮಾನಿಸುವ ಮನುವಾದಿಗಳನ್ನು ದೂರವಿಟ್ಟು ನಾವೆಲ್ಲರೂ ಒಟ್ಟಾಗಿ ಸವಾಲುಗಳನ್ನು ಎದುರಿಸ ಬೇಕಾಗಿದೆ ಹಣ ಜಾತಿ ರಾಜಕೀಯ ಇವು ನಮ್ಮನ್ನು ಕಾಡುತ್ತಿವೆ, ಆಳುತ್ತಿವೆ ಹೊಲೆಮಾದಿಗ,ಎಡಗೈ ಬಲಗೈ ನೀತಿಗಳನ್ನು ಸೃಷ್ಟಿಸಿ ರಾಜಕೀಯ ಮಾಡುವ ಈ ಮೂರು ವಿಚಾರಗಳನ್ನು ಮೊದಲು ಎದುರಿಸಲು ಸಿದ್ದರಾಗಬೇಕಾಗಿದೆ ದೇವನೂರು ಮಹಾದೇವ ಅವರು ಹೇಳಿದ ಹಾಗೆ ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಫಲ ಕೊಡದೆ ಇರದು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ನಮ್ಮ ಹಕ್ಕಿನ ಫಲವನ್ನು ನಾವು ಉತ್ತಿ, ಬಿತ್ತಿ,ಪಡೆಯ ಬೇಕಾಗಿದೆ ಅದರಲ್ಲಿ ನಾವೆಲ್ಲರೂ ಸಂಘಟನಾತ್ಮಕವಾಗಿ ಒಗ್ಗೂಡೋಣ ಎಂದು ಕರೆ ನೀಡಿದರು. ಇನ್ನೋರ್ವ ಅತಿಥಿಗಳಾದ ರಾಜ್ಯ ಸಂಘಟನಾ ಸಂಚಾಲಕರಾದ ಕೊಡಗಲ್ ರಮೇಶ ಕ್ರಾಂತಿಗೀತೆಯೊಂದಿಗೆ, ಮಾತನಾಡಿ ಶಿಕ್ಷಣವೆಂಬುದು ಹುಲಿಯ ಹಾಲು ಇದ್ದಂಗೆ ಅದನ್ನು ಕುಡಿದ ಪ್ರತಿಯೊಬ್ಬರು ಘರ್ಜಸಲೇ ಬೇಕು ಇತಿಹಾಸ ತಿಳಿಯದವರು ಇತಿಹಾಸ ಹೇಳುತ್ತಾರೆ ಇತಿಹಾಸ ಸೃಷ್ಟಿಸುತ್ತಾರೆ 1818 ರಲ್ಲಿ ರಾಮನ ಬೃಹ್ಮ ಚತುರ್ಭುಜ ಸಿದ್ದನಾಕನ 500 ಸೈನ್ಯದ ಬಲದಿಂದ ಕೊಂಬಿನ ಮೂಲಕ 28.000 ಪೇಶ್ವೆಗಳನ್ನು ಹತ್ಯೆಗೈದು ಇತಿಹಾಸ ಸೃಷ್ಟಿಸಿದ್ದಾರೆ ಈಗ ನಮ್ಮ ಬಾಬಾ ಸಾಹೇಬರ್ ಶಿಕ್ಷಣದ ಮೂಲಕ ಗುರಾಣಿ ಇಲ್ಲದೆ ಸಂವಿಧಾನದ ಅಡಿಯಲ್ಲಿ ಸಂಘಟಿತರಾಗಿ ಬಹುಜನ ಕೂಗನ್ನು ಪಾರ್ಲಿಮೆಂಟ್ ವರೆಗೆ ಕೇಳುವ ಹಾಗೆ ಮಾಡೋಣ ಎಂದರು.

ಇನ್ನೋರ್ವ ಅತಿಥಿಗಳಾದ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಮೇ 5. ಶಿಕ್ಷಕರ ದಿನಾಚರಣೆಯನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರಿನಲ್ಲಿ ಆಚರಣೆ ಮಾಡುತ್ತಾರೆ ಸತಿ ಸಹಗಮನ ಪದ್ದತಿಯಲ್ಲೇ ಹೆಣ್ಣುಮಕ್ಕಳು ಮನೆ ಬಿಟ್ಟು ಹೊರಗಡೆ ಬರದ ಪರಿಸ್ಥಿತಿಯಲ್ಲಿ ಮಹಿಳೆಯರನ್ನು ಒಟ್ಟುಗೂಡಿಸಿ ಶಿಕ್ಷಣ ಜ್ಞಾನಗೈದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಮಾಡದಿರುವುದು ವಿಪರ್ಯಾಸ ಸರಿ. ತೊಟ್ಟಿಲು ತೂಗುವ ಕೈ ಜಗವನ್ನಾಳುವುದು ಎಂಬಂತೆ ಇಂದಿನ ದಿನದಲ್ಲಿ ಒಬ್ಬ ಹೆಣ್ಣುಮಗಳು ಗ್ರಾಮ ಪಂಚಾಯತ್ ದಿಂದ ಪಾರ್ಲಿಮೆಂಟ್ ನಲ್ಲಿ ಗಜ ಗಾಂಭೀರ್ಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆಂದರೆ ಅದಕ್ಕೆ ಸಾಕ್ಷೀ ಬಾಬಾ ಸಾಹೇಬರು ಕೊಟ್ಟ ಸಂವಿಧಾನ ಅದರ ಮಾರ್ಗವಾಗಿ ಪ್ರೊll ಬಿ. ಕೃಷ್ಣಪ್ಪನವರು ಸತಿ ಸಹಗಮನ ಪದ್ದತಿ ನಿರ್ಮೂಲನೆ ಹೆಣ್ಣುಮಕ್ಕಳಿಗೆ ಓಟಿನ ಹಕ್ಕು, ದೇವದಾಸಿ ಪದ್ಧತಿ ನಿರ್ಮೂಲನೆ, ಉಳ್ಳುವವನೆ ಭೂಮಿಯ ಒಡೆಯ ಮುಂತಾದ ಸಾಂವಿಧಾನಿಕ ಹೋರಾಟಗಳನ್ನು ರೂಪಿಸಿ ಕೊಟ್ಟಿದ್ದಾರೆಂದರು. ಮುಖ್ಯ ಅತಿಥಿಗಳಾದ ರಾಜ್ಯ ಸಂಚಾಲಕರಾದ ಡಿ.ಆರ್. ಪಾಂಡುರಂಗಸ್ವಾಮಿ ದೇಶದ ತುಂಬೆಲ್ಲ ಮುಕ್ಕೋಟಿ ದೇವತೆಗಳ ದೇವಸ್ಥಾನ ಇದ್ದರು ದೇವರೆನಿಸಿಕೊಂಡವ ಎದ್ದು ಕಾಣಲಿಲ್ಲ ಮಾತನಾಡಲಿಲ್ಲ ಒಳಗೆ ಹೊರಗೆ ಕಾಣುವುದು ಏನೆಂದರೆ ಅರ್ಚಕ ಹಾಲೆರೆದು ಕೀರಿಟ ಇಟ್ಟ ಮನುವಾದಿಗಳ ಮುಖವಾಡ ಮಾತ್ರ ದೇವಸ್ಥಾನ ಕೀರಿಟ, ಅರ್ಚಕ ಇವರೆಲ್ಲರನ್ನು ರಕ್ಷಿಸುತ್ತಿರುವುದು ಸಂವಿಧಾನ ಚೌಕಟ್ಟಿನಲ್ಲಿ ಕೆಲಸ ಮಾಡುವ ಪೋಲಿಸ್, ಸೈನಿಕ, ಸೆಕ್ಯೂರಿಟಿ, ಮುಂತಾದ ಕಾನೂನು ಸೇವಕರೆ ಹೊರತು ಗುಡಿಯಲ್ಲಿದ್ದ ದೇವರಲ್ಲ ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ ಹಾಕಬ್ಯಾಡರಿ ಕೋಮುವಾದಿಗಳಿಗೆ ಮಣೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ರಾಜ್ಯ ಸಂಘಟನಾ ಸಂಚಾಲಕರಾದ ಶಿವಾನಂದ ಎಂ ಸಾವಳಗಿ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲಬುರ್ಗಿ,ಮಾರುತಿ ಬಿ ಹೊಸಮನಿ.ರಾಜ್ಯ ಸಂಘಟನಾ ಸಂಚಾಲಕರು ಬಾಗಲಕೋಟ,ಟಿ.ಎಂ.ಆಂಜನೇಯ. ರಾಜ್ಯ ಸಂಘಟನಾ ಸಂಚಾಲಕರು ತುಮಕೂರು, ಶ್ರೀ ಮತಿ ಜಗದೇವಿ ಆರ್ ಹೆಗಡೆ. ರಾಜ್ಯ ಅಧ್ಯಕ್ಷರು ಕ.ಮ.ಪ.ಜ. ಜಾಗೃತಿ ಸಮಿತಿ ಕಲಬುರ್ಗಿ, ಶ್ರೀ ಮತಿ ನವ್ಯ ಶ್ರೀ ಎಂ.ಆರ್. ರಾಜ್ಯ ಸಂಚಾಲಕಿ. ದ.ಸಂ.ಸ.ಮಹಿಳಾ.ಒಕ್ಕೂಟ. ಗೌರಿಬಿದನೂರು, ಶ್ರೀ ಮತಿ ಭವಾನಿ ಎಂ ವಿ. ರಾಜ್ಯ ಸಂಘಟನಾ.ಸಂಚಾಲಕಿ ಮಹಿಳಾ ಒಕ್ಕೂಟ ಚಿಕ್ಕ ಮಂಗಳೂರು, ಶ್ರೀ ಮತಿ ಗುರುಬಾಯಿ ಎನ್. ಕಟ್ಟಿಮನಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮ.ಪ.ಜ ಜಾಗೃತಿ ಸಮಿತಿ ಕಲಬುರ್ಗಿ, ದುರ್ಗಾದಾಸ್.ಪಿ ಅಧ್ಯಕ್ಷರು ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ಆನಂದ ಕೋಳೂರು.ವಿಘ್ನೇಶ್.ಕಲಬುರ್ಗಿ ಕಾರ್ಯಕ್ರಮದಲ್ಲಿ ಮುಂತಾದವರು ಭಾಗವಹಿಸಿದ್ದರು.
ರಾಜ್ಯ ವಿಶೇಷ ವರದಿಗಾರರು:ವಾಯ್.ಸಿ.ಹಲಗಿ.ಶಿರೂರು