ಕಂಪ್ಲಿ ಕೈಗಾರಿಕಾ ಸಂಘದಿಂದ ಗಣರಾಜ್ಯೋತ್ಸವ ಆಚರಣೆ..
ಕಂಪ್ಲಿ, ಜನೇವರಿ. 26 :
ಈದ್ಗಾ ಮೈದಾನದ (ಕಬರ್ ಸ್ಥಾನ ) ಎದುರುಗಡೆ ಹೊಸಪೇಟೆ ಬೈಪಾಸ್ ರೋಡ್ ಪಟ್ಟಣದ 8.ನೇ ವಾರ್ಡಿನ ಮುಖ್ಯ ಕಚೇರಿಯಲ್ಲಿ ಕೈಗಾರಿಕಾ ಸಂಘದಿಂದ 75.ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡುವುದರೊಂದಿಗೆ ಭಾರತ ದೇಶಕ್ಕೆ ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಮ್ಮ ದೇಶಕ್ಕೆ ಉಜ್ವಲ ಭವಿಷ್ಯಕ್ಕೆ ಬೇಕಾಗಿರುವಂತ ಶ್ರೇಷ್ಠ ಸಂವಿಧಾನವನ್ನು ಸಿದ್ಧಪಡಿಸಿ ಭಾರತವನ್ನು ಸಮಾಜವಾದಿ, ಜಾತ್ಯತೀತ ಗಣತಂತ್ರವನ್ನಾಗಿ ನಡೆಯುವುದಕ್ಕೆ ರಚಿಸಿದ ದಿನವಿಂದು.

ಸಂವಿಧಾನದ ಸದಾಶಯಗಳನ್ನು ಪಾಲಿಸುವದರ ಜೊತೆಗೆ ಭಾರತದ ಏಕತೆ, ವೈವಿಧ್ಯತೆ, ಅನನ್ಯತೆಗಳನ್ನು ಎತ್ತಿ ಹಿಡಿಯೋಣ.

ನಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತ ದೇಶದ ಎಲ್ಲಾರೂ ರಕ್ಷಿಸೋಣ. ಮತ್ತು ನಮ್ಮ ದೇಶಕ್ಕಾಗಿ ನಮ್ಮ ನಾಡಿಗಾಗಿ ರಕ್ಷಣೆ ಮಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಸ್ವತಂತ್ರ ಹೋರಾಟಗಾರರಿಗೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸೋಣ ಎಂದು ಗೌರವಾಧ್ಯಕ್ಷರಾದ ಲಕ್ಷ್ಮಣ, ಜೆ ಸಿ ನಾಗರಾಜ್, ಅಧ್ಯಕ್ಷರಾದ ಇಮ್ತಿಯಾಜ್ ಸಾಬ್, ಕಾರ್ಯದರ್ಶಿಯಾದ ರೆಹಮತ್ ಮುಲ್ಲಾ, ಶ್ರೀನಿವಾಸ, ರಾಜಸಾಬ್,ಎಂ ದಾದಾಪೀರ್, ಮೌಲ ಹುಸೇನ್, ಲಕ್ಷ್ಮಣ, ಮತ್ತು ಇತರೆ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತುಉಪಸ್ಥಿತಿಯಲ್ಲಿಜಂಟಿ ಕಾರ್ಯದರ್ಶಿಯಾದ ಟಿ ಹೆಚ್ ಎಂ ರಾಜಕುಮಾರ ಮಾತನಾಡಿದರು.
ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ.
ಕೂಡ್ಲಿಗಿ