ಶಾರದಾಮಾತೆಯವರ ವ್ಯಕ್ತಿತ್ವ ಬಹು ಮುಖವಾದದ್ದು – ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ ಡಿ.12

ಶ್ರೀಮಾತೆ ಶಾರದಾದೇವಿಯವರ ವ್ಯಕ್ತಿತ್ವ ಬಹುಮುಖವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಮಾತೆ ಶಾರದಾದೇವಿಯವರ 173 ನೇ. ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶಾರದಾಮಾತೆಯವರ “ಆಧ್ಯಾತ್ಮಿಕ ಅನುಭವಗಳು” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.

ಶಾರದಾದೇವಿಯವರ ಕರುಣೆ, ಪ್ರೇಮ, ಸೌಜನ್ಯ, ವ್ಯವಹಾರ ಜ್ಞಾನ, ಆಧ್ಯಾತ್ಮಿಕ ಅನುಭವಗಳ ಲೋಕ, ಸಾಧನೆ ತಪಸ್ಸು, ಲೋಕಹಿತ ದೃಷ್ಟಿಗಳು ಅನಂತ ಮುಖ್ಯವಾದವು, ಅವರ ಆದರ್ಶಮಯವಾದ ಆಧ್ಯಾತ್ಮಿಕ ಸಾಧನಾ ಜೀವನ ಮತ್ತು ಅವರು ನೀಡಿದ ಸಂದೇಶಗಳು ಪ್ರಸ್ತುತವಾಗಿದ್ದು ಆಧುನಿಕ ಜನರು ಅನುಸರಿಸುವ ಮೂಲಕ ಸಾರ್ಥಕ ಬದುಕು ಕಟ್ಟಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಯಂತ್ಯುತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ, ಅರ್ಚನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ಹಾಗೂ ವಿಶೇಷ ಅನ್ನಪ್ರಸಾದ ವಿನಿಯೋಗ ನಡೆಯಿತು.
ಶಾರದಾಮಾತೆಯವರ ಜನ್ಮದಿನದ ಪ್ರಯುಕ್ತ ಅವರ ಜಯರಾಂಬಾಟಿಯ ಕುಟೀರವನ್ನು ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ನಿರ್ಮಿಸಲಾಗಿದೆ.
ಸತ್ಸಂಗ ಕಾರ್ಯಕ್ರಮದಲ್ಲಿ ನೇತಾಜಿ ಪ್ರಸನ್ನ, ರಮೇಶ್, ಗಂಗಾಧರಶೆಟ್ಟಿ, ಡಾ, ಬಸವರಾಜಪ್ಪ, ಚೆನ್ನಕೇಶವ, ಯತೀಶ್ ಎಂ ಸಿದ್ದಾಪುರ, ಎಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಎಂ.ಗೀತಾ ನಾಗರಾಜ್, ಋತಿಕ್, ಲತಾ ನಾಗರಾಜ್, ಮಮತಾ, ಅಂಬಿಕಾ ಪರಮೇಶ್ವರ್, ಸುಮನಾ, ವೆಂಕಟಲಕ್ಷ್ಮೀ, ಡಾ, ಭೂಮಿಕಾ, ಸಂತೋಷ್, ಚೇತನ್, ಮಾನ್ಯ, ಸಿ.ಎಸ್ ಭಾರತಿ, ಪಾಲಕ್ಕ, ಮಂಜುಳಾ, ಓಬಕ್ಕ, ಡಿ.ಕಾವೇರಿ ಸುರೇಶ್, ಉಷಾ ಶ್ರೀನಿವಾಸ್, ಭ್ರಮರಂಭಾ, ರಶ್ಮಿ, ವೀರಮ್ಮ, ವಿಜಯಲಕ್ಷ್ಮೀ, ಗಿರಿಜಾ, ಗೀತಾ ವೆಂಕಟೇಶ್, ತಿಪ್ಪಮ್ಮ, ಜಯಮ್ಮ, ನಾಗರತ್ನ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

