ಜಲ ಜೀವನ ಮಿಷನ್ ಕಳಪೆ ಕಾಮಗಾರಿ – ಜಾಂಬವ ಯುವ ಸೇನಾ ಸಂಘಟನೆಯಿಂದ ಆರೋಪ..!

ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆಯೂ ಒಂದು ಹಳ್ಳಿಗಳಲ್ಲಿ ಹಲವು ಕಡೆಗಳಲ್ಲಿ ಶುದ್ದವಾದ ಕುಡಿಯುವ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಇದೆ .

ವಿಜಯಪುರ, ಜನೇವರಿ.28 :

ಈ ಸಮಸ್ಯೆಯಿಂದ ಜನರನ್ನು ಹೊರ ತರುವ ಸಲುವಾಗಿ ಸರಕಾರ ಜಾರಿಗೆ ತಂದ ಒಳ್ಳೆಯ ಯೋಜನೆ ಜಲ ಜೀವನ್ ಮಿಷನ್ ಯೋಜನೆ,ಪ್ರತಿಯೊಬ್ಬರು ಶುದ್ದ ಕುಡಿಯುವ ನೀರು ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಜಾರಿಗೆ ತಂದ ಈ ಯೋಜನೆ ಗುತ್ತಿಗೆದಾರರ ಕೈಯಲ್ಲಿ ಸಿಕ್ಕು ಹಳ್ಳಿ ಜನರ ಜೀವ ಹಿಂಡುವಂತಾಗಿದೆ.ಸರಕಾರದ ಗುರಿಯನ್ನು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಈ ಯೊಜನೆಯ ಉದ್ದೆಶವನ್ನು ಮಣ್ಣುಪಾಲು ಮಾಡಲು ಹೊರಟಿದ್ದಾರೆ.

ಹೌದು ಈಗ ತಮ್ಮ ಮುಂದೆ ಹೇಳಲು ಹೋರಟಿರುವ ಸುದ್ದಿ.ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ್ದು.ಈ ಗ್ರಾಮದಲ್ಲಿ ಜಲ ಜಿವನ್ ಮಿಷನ್ ಕಾಮಗಾರಿಗೆ ಸುಮಾರು ಲಕ್ಷಾಂತರ ರೂಪಾಯಿ ಅನುದಾನ ಈ ಗ್ರಾಮಕ್ಕೆ ಬಿಡುಗಡೆ ಮಾಡಿದೆ.ಕಾಮಗಾರಿ ನಡೆದು ಸುಮಾರು ದಿನವಾಗಿದೆ.ನೀರು ಬರುವ ಮುನ್ನವೆ ಪೈಪುಗಳು,ಮಿಟರ್ ಬಾಕ್ಷ,ಈ ಯೊಜನೆಗೆ ಬಳಿಸಿರುವ ಸಾಮಗ್ರಿಗಳು ಕಳಪೆಯಿಂದ ಕುಡಿವೆ ಒಟ್ಟಾರೆ ಈ ಯೋಜನೆ ಹಳ್ಳ ಹಿಡಿದು ಹೋಗಿದೆ.ಪ್ರತಿ ಮನೆಗೆ ನೀರು ಕೊಡುವ ಯೋಜನೆ ಇದಾಗಿದೆ.ಪೈಪು ಹಾಕಲು ರಸ್ತೆ ಅಗೆದು ಹಾಳು ಮಾಡಿದ್ದಾರೆ.

SUBSCRIBE OUR CHANNEL..

ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿಲಾಗಿದ್ದು.ಇನ್ನೋಂದೆಡೆ ಕಾಲೋನಿಯ ಸಂದಿಗಳಲ್ಲಿ ಅಗೆದ ರಸ್ತೆಗಳನ್ನು ರಿಪೇರಿ ಮಾಡದೆ ಹಾಗೆ ಬಿಟ್ಟಿದ್ದಾರೆ. ಒಟ್ಟಾರೆ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಜಾಂಭವ ಯುವ ಸೇನಾ ಸಂಘಟನೆ ಪದಾಧಿಕಾರಿಗಳು ತಾಲೂಕು ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿರುತ್ತಾರೆ.ನಮ್ಮ ಹಳ್ಳಿಗೆ ಜೆಜೆಎಂ ಯೋಜನೆ ಬಂತು ನಮ್ಮ ಮನೆ ಮನೆಗೆ ನೀರು ಬರುತ್ತದೆ.ಎಂದು ತುಂಬಾ ಖುಸಿಯಾಗಿದ್ದ. ಹಳ್ಳಿಯ ಜನರು ಮತ್ತೆ ಅದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ.ಗುತ್ತಿಗೆದಾರ ಹಾಗೂ ಅಧಿಕಾರಿಗಳ ಎಡವಟ್ಟಿನಿಂದ. ಈ ಯೋಜನೆ ಯಾಕೆ ಬೇಕು ಇದ್ದ ರಸ್ತೆಗಳು ಹಾಳು ಮಾಡಿ ಬಿಟ್ಟಿದ್ದಾರೆ. ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಗುತ್ತಿಗೆದಾರ ಹಾಗೂ ಅಧಿಕಾರಿಗಳು ಜನರಿಗೆ ನೀರು ತಲುಪಿದರೇನು ಬಿಟ್ಟರೇನು ತಾವು ಮಾಡಿದ್ದೆ ಕಾಮಗಾರಿ ಅಂದು ಬೇಕಾಬಿಟ್ಟಿ ಮಾಡಿದ್ದಾರೆ.ಗುತ್ತಿಗೆದಾರ ಅಧಿಕಾರಿಗಳ ಬೆಂಬಲದಿಂದ ಕಳಪೆ ಕಾಮಗಾರಿ ಮಾಡಿರಬಹುದು .ಗ್ರಾಮದಲ್ಲಿ ಮಾಡಿದ ಜೆಜೆಎಂ ಕಾಮಗಾರಿಯ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಕಾಮಗಾರಿ ಗುಣ ಮಟ್ಟವನ್ನು ಕಾಯ್ದಿರಿಸ ಬೇಕಾದ ಸಂಬಂಧ ಪಟ್ಟ ಇಂಜಿನೀಯರ್ ಹಾಗೂ ಅಧಿಕಾರಿಗಳ ಮೇಲೆ ಕ್ಷೇತ್ರದ ಶಾಸಕರು,ಸಚಿವರು,ಜಿಲ್ಲಾಡಳಿತ ಶಿಸ್ತುಕ್ರಮ ಕೈಗೊಂಡು ಗ್ರಾಮಸ್ಥರಿಗೆ ನೀರಿನ ಅನುಕೂಲ ಮಾಡಿ ಕೊಡಬೆಕೇಂದು ಜಾಂಭವ ಯುವ ಸೇನಾ ಜಿಲ್ಲಾ ಸಂಘಟನೆಯವರು ಆಗ್ರಹಿಸಿದ್ದಾರೆ.

ವರದಿಗಾರರು : ಮಹಾಂತೇಶ. ಹಾದಿಮನಿ. ವಿಜಯಪುರ ಜಿಲ್ಲಾ ಅಧ್ಯಕ್ಷರು. ಜಾಂಭವ ಯುವ ಸೇನಾ ಸಂಘಟನೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button