ಹೂಡೇಂ ಗ್ರಾಮದಲ್ಲಿ ಸಂವಿಧಾನ ಜನ ಜಾಗೃತಿ ಕಾರ್ಯಕ್ರಮ.
ಹೂಡೇಂ ಜನೇವರಿ.29
![](https://i0.wp.com/sknewskannada.in/wp-content/uploads/2024/01/IMG-20240129-WA0033-1024x576.jpg?resize=708%2C398&ssl=1)
75 ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ದಿನಾಚರಣೆ ಪ್ರಯುಕ್ತ ಜಿಲ್ಲಾ ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವಿಜಯನಗರ ಮತ್ತು ಕೂಡ್ಲಿಗಿ ಸಮಾಜ ಕಲ್ಯಾಣ ಇಲಾಖೆ ಇವರ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹೂಡೇಂ ಗ್ರಾಮದಲ್ಲಿ ಸಂವಿಧಾನ ಜನ ಜಾಗೃತಿ ಅಭಿಯಾನದ ಸ್ತಬ್ಧ ಚಿತ್ರದ ವಾಹನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಪ್ಪ ಬಿ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಮಾತನಾಡಿ, ಈ ಸಂವಿಧಾನ ಜಾಗೃತಿ ಅಭಿಯಾನವನ್ನು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ನಮ್ಮ ದೇಶದ ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಅಭೂತ ಪೂರ್ವ ಕಾರ್ಯ ಕ್ರಮ ಹಮ್ಮಿಕೊಂಡಿದೆ. ಭಾರತ ಸಂವಿಧಾನ ಯಾಕೆ ಶ್ರೇಷ್ಠ ಅಂದರೆ, ಸಂವಿದಾನ ಅಂಕಿ ಅಂಶಗಳ ಮದ್ಯೆ ನಲಿದಾಡುವ ಕಾವ್ಯವಲ್ಲ. ಶೋಷಿತ, ಶೋಷಣೆಗೊಳಗಾದವರ ಹಾಗೂ ಒಬ್ಬ ವ್ಯಕ್ತಿ ಸಮಾಜವನ್ನು ಕಾನೂನಾತ್ಮಕವಾಗಿ ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ಸಂವಿಧಾನದ ಮೂಲಕ ತೋರಿಸಿಕೊಟ್ಟಂತಹ ಹಿರಿಮೆ ಅಂಬೇಡ್ಕರ್ ರವರಿಗಿದೆ. ಹಾಗೂ ಅಂಬೇಡ್ಕರ್ ಅವರ ನಡೆದು ಬಂದಂತಹ ಜೀವನದ ಕಥೆಯ ಬಗ್ಗೆ ವಿಸ್ತಾರವಾಗಿ ವಿವರಿಸಿದರು.ಈ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನ ಬಲವರ್ಧನೆಗೆ ಗ್ರಾಮಸ್ಥರು, ವಿದ್ಯಾರ್ಥಿಗಳು, ಅಧಿಕಾರಿಗಳು ಆಶಾಕಾರ್ತೆಯರು, ಶಿಕ್ಷಕಿಯರು ಮಾಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಂವಿಧಾನ ಪ್ರಬಂಧ ಹಾಗೂ ಗ್ರಂಥಾಲಯಕ್ಕೆ ನಿತ್ಯ ಓದುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ-ಪೆನ್ ಜಾಮಿಟ್ರಿ ಬಾಕ್ಸ್ ಬಹುಮಾನ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಬಿಸಿಎಂ ಇಲಾಖೆ ಅಧಿಕಾರಿ ಪಂಪಾಪತಿ, ಎಎಸ್ಐ ಜಿಲ್ಲನ್ ಬಾಷ್, ಗ್ರಾಮ ಪಂಚಾಯಿತಿ ಸದಸ್ಯರಾದ ಅಜ್ಜಣ್ಣ, ಸುಂದರಮ್ಮ ಮಲ್ಲಿಕಾರ್ಜುನ್, ಪಿಡಿಒ ಚಂದ್ರಣ್ಣ, ಡಾ ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೃಷ್ಣಪ್ಪ ಗುಣಸಾಗರ, ಕಂಪಳ ರಂಗ ಸ್ವಾಮಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಜ್ಜಪ್ಪ, ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ನರಸಿಂಹ ರೆಡ್ಡಿ, ಶಿಕ್ಷಕರಾದ ಮಚ್ಚೆಂದ್ರಪ್ಪ, ಜಿಲ್ಲನ್ ಬಾಷ್, ಅಂಗನವಾಡಿ ಮೇಲ್ಚಾವಾರಕಿ ಅನುಪಮ, ಬಿಲ್ ಕಲೆಕ್ಟರ್ ಮಂಜಣ್ಣ, ಗ್ರಂಥಾಲಯ ಮೇಲ್ವಿಚಾರಕ ಟಿ ಗುರುರಾಜ್ ಸೇರಿದಂತೆ ತಾಲೂಕು ಮಟ್ಟದ ಸಿಬ್ಬಂದಿಗಳು, ಗ್ರಾ.ಪಂ ಸರ್ವ ಸದಸ್ಯರು, ವ್ಯಾಪ್ತಿಯ ಎಲ್ಲಾ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ