ರಾಜ್ಯ ಸರ್ಕಾರದ ವಿರುದ್ಧ “ವಕ್ಫ್ ಹಟಾವೋ ದೇಶ ಬಚಾವೋ – ಎಂದು ಆಗ್ರಹ.
ಮಾನ್ವಿ ನ.11

ರಾಜ್ಯಾದ್ಯಂತ ರೈತರ ಜಮೀನು ಮತ್ತು ಮಠ ಮಂದಿರಗಳನ್ನು ರಾಜ್ಯ ಸರಕಾರ ಪಹಣಿಗಳ ಮೂಲಕ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆ ಮುಖಂಡರು ಮಾನ್ವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ತಲ ತಲಾಂತರದಿಂದ ರೈತರು ಹಾಗೂ ಅಮಾಯಕ ರೈತರು ಜಮೀನುಗಳನ್ನು ಉಳುಮೆ ಮಾಡುತ್ತ ಬಂದಿದ್ದಾರೆ. ಆದರೆ ರಾಜ್ಯ ಸರಕಾರ ಜನರನ್ನು ಒಕ್ಕಲೆಬ್ಬಿಸುವ ಸಲುವಾಗಿ ಪಹಣಿ ಕಾಲಂ 11 ರಲ್ಲಿ ವಕ್ಫ್ ಎಂದು ಸೇರಿಸಿದ್ದರಿಂದ ಕೆಲ ಕುಟುಂಬಗಳು ಗಾಬರಿಯಾಗಿ ಬೀದಿಗೆ ಬಂದಂತಾಗಿವೆ ಎಂದು ಕಿಡಿಕಾರಿದರು.
ರಾಜ್ಯ ಸರಕಾರ ನಮ್ಮ ಹೋರಾಟವನ್ನು ಪರಿಗಣಿಸಿ ಕೂಡಲೇ ಎಚ್ಚೆತ್ತು ಕೊಂಡು ನೀಡಿರುವ ಆದೇಶವನ್ನು ಹಿಂಪಡೆದು ವಕ್ಫ್ ಕಾಯಿದೆಯನ್ನು ತಿದ್ದುಪಡಿ ಮಾಡಬೇಕು, ಒಂದು ವೇಳೆ ನಿರ್ಲಕ್ಷ್ಯ ತೋರಿದ್ದೇ ಆದಲ್ಲಿ ನಿರಂತರ ಪ್ರತಿಭಟನೆ ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ