ಗಾಂಧೀಜಿಯವರ ಸರಳತೆ ಮನುಕುಲಕ್ಕೆ ಆದರ್ಶಪ್ರಾಯ – ಸಂತೋಷ ಬಂಡೆ.
ಇಂಡಿ ಜನೇವರಿ.30

ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ ಪ್ರತಿ ಗಳಿಗೆಯನ್ನೂ ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ ಗಾಂಧೀಜಿ ಎಂಬ ‘ಜಗದ್ಗುರುವಿನ’ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್,ಕೆಜಿಎಸ್,ಯುಬಿಎಸ್ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಅವರ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಂಡ ಹುತಾತ್ಮರ ದಿನವನ್ನು ಉದ್ದೇಶಿಸಿ ಮಾತನಾಡಿದರು.ಸತ್ಯ, ಶಾಂತಿ, ಅಹಿಂಸೆ ಇವು ಗಾಂಧೀಜಿಯವರು ಪಾಲಿಸಿದ ತತ್ವಗಳಷ್ಟೇ ಅಲ್ಲ, ಅವರ ಬದುಕು ಕೂಡ.ತಮ್ಮ ಜೀವನದುದ್ದಕ್ಕೂ ಅವನ್ನು ಅನುಪಾಲಿಸಿದ ಗಾಂಧೀಜಿಯವರು, ಸ್ವಾತಂತ್ರ ನಂತರ ರಾಮರಾಜ್ಯದ ಬಗ್ಗೆ ಕನಸು ಕಂಡಿದ್ದರು. ಅವರ ಮೌಲ್ಯಗಳು ಇಡೀ ಮನುಕುಲಕ್ಕೆ ಸದಾಕಾಲಕ್ಕೂ ಆದರ್ಶಪ್ರಾಯ ಎಂದು ಹೇಳಿದರು.ಶಿಕ್ಷಕಿ ಎಸ್ ಡಿ ಬಿರಾದಾರ ಮಾತನಾಡಿ, ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಅಳವಡಿಸಿಕೊಂಡರೆ ಇಂದಿನ ನಾಗರಿಕ ಸಮಾಜ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳು ದೂರವಾಗಲಿವೆ. ಎಲ್ಲರೊಂದಿಗೆ ಸಹಬಾಳ್ವೆಯ ಜೀವನ ನಡೆಸಬೇಕು ಎಂದು ಹೇಳಿದರು.ಶಿಕ್ಷಕಿ ಸಾವಿತ್ರಿ ಸಂಗಮದ ಮಾತನಾಡಿ,ಗಾಂಧೀಜಿಯವರನ್ನು ಅರ್ಥೈಸಿಕೊಂಡು ನೋಡುವ, ಓದುವ, ಅವರಂತೆ ಸರಳ ಬದುಕನ್ನು ನಡೆಸುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಗಾಂಧೀಜಿಯವರು ತಮಗಾಗಿ, ಸ್ವಾರ್ಥಕ್ಕಾಗಿ ಬದುಕಲಿಲ್ಲ, ಭಾರತೀಯ ಸರ್ವಜನಾಂಗದ ಶ್ರೇಯಸ್ಸಿಗಾಗಿ ಎಲ್ಲವನ್ನೂ ಧಾರೆಯೆರೆದು ಮಹಾತ್ಮರಾದರು ಎಂದು ಹೇಳಿದರು.ಮುಖ್ಯ ಶಿಕ್ಷಕರಾದ ವಿ ವೈ ಪತ್ತಾರ, ಎ ಎಂ ಬೆದ್ರೇಕರ,ಶಿಕ್ಷಕರಾದ ಎಸ್ ಎಸ್ ಅರಬ, ಎಸ್ ಎಂ ಪಂಚಮುಖಿ, ಜೆ ಎಂ ಪತಂಗಿ, ಎಸ್ ಪಿ ಪೂಜಾರಿ, ಎನ್ ಬಿ ಚೌಧರಿ, ಎಸ್ ಎನ್ ಡಂಗಿ, ಜೆ ಸಿ ಗುಣಕಿ, ಶಾಂತೇಶ ಹಳಗುಣಕಿ, ಎಸ್ ವ್ಹಿ ಬೇನೂರ, ಎಫ್ ಎ ಹೊರ್ತಿ, ಆಶಾ ಕೋರಳ್ಳಿ, ಯಲ್ಲಮ್ಮ ಸಾಲೋಟಗಿ, ಸಂತೋಷ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕಿ ಎಸ್ ಬಿ ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕ ಎಸ್ ಆರ್ ಚಾಳೇಕರ ನಿರೂಪಿಸಿದರು. ಎಸ್ ವ್ಹಿ ಬೇನೂರ ವಂದಿಸಿದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ