ಸ್ವಾಮಿ ವಿವೇಕಾನಂದರ ಮೌಲ್ಯಗಳು ಆದರ್ಶಪ್ರಾಯವಾಗಿವೆ.

ಬೇವೂರ ಫೆಬ್ರುವರಿ. 7

ವ್ಯಕ್ತಿಯ ಜೀವನದಲ್ಲಿ ತಾಯಿ ನೀಡುವ ಸಂಸ್ಕಾರ ಪಾಠ ಮೌಲ್ಯಯುತವಾದದ್ದು ಸ್ವಾಮಿ ವಿವೇಕಾನಂದರ ಘನವ್ಯಕ್ತಿತ್ವ ರೂಪು ಗೊಳ್ಳಲು ಅವರ ತಾಯಿ ನೀಡಿದ ಸಂಸ್ಕಾರ ದೀಕ್ಷೆ ಸಹಕಾರಿಯಾಗಿತ್ತು ಎಂದು ಕನ್ನಾಳದ ಸಿ.ಆರ್.ಸಿ. ಸಿದ್ದರಾಮಯ್ಯ ಹೀರೆಮಠ ಹೇಳಿದರು. ದೇಶದ ಯುವಶಕ್ತಿಗೆ ಸ್ವಾಮಿ ವಿವೇಕಾನಂದರ ಮೌಲ್ಯಗಳು ಆದರ್ಶಪ್ರಾಯವಾಗಿವೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅಥ೯ಶಾಸ್ತ್ರ ಉಪನ್ಯಾಸಕರಾದ ಎಸ್.ಎಸ್. ಆದಾಪೂರ ಯಾರು ಇತರರಿಗಾಗಿ ಬದುಕುತ್ತಾರೆ ,ಅವರು ಬದುಕಿನಲ್ಲಿ ಉನ್ನತಿಸಾಧಿಸುತ್ತಾರೆ. ಸ್ವಾಮಿ ವಿವೇಕಾನಂದರ ಬದುಕು ಎಲ್ಲರಿಗೂ ಪ್ರೇರಣೆ ಸ್ಪೂರ್ತಿ ನೀಡುತ್ತದೆ ಎಂದರು. ಬೇವೂರಿನ ಪಿ.ಎಸ್.ಎಸ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜೀವನ ಮೌಲ್ಯಗಳ ಕುರಿತಾಗಿ ಜರುಗಿದ ವಿಶೇಷ ಉಪನ್ಯಾಸ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಜಗದೀಶ ಗು.ಭೈರಮಟ್ಟಿ ವಹಿಸಿಕೊಂಡಿದ್ದರು. ಹಿರಿಯ ಉಪನ್ಯಾಸಕರಾದ ಬಿ.ಬಿ.ಬೇವೂರ ,ಎನ್.ಎಸ್.ಎಸ್.ಕಾಯಕ್ರಮ ಅಧಿಕಾರಿಗಳಾದ ಡಾ.ಸಂಗಮೇಶ ಹಂಚಿನಾಳ, ಶ್ರೀ ಜಿ.ಎಸ್.ಗೌಡರ ಉಪಸ್ಥಿತರಿದ್ದರು. ಬಿಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳು ಕಾರ್ಯಕ್ರಮದ ವಿವಿಧ ಹಂತಗಳನ್ನು ನೆರವೇರಿಸಿಕೊಟ್ಟರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button