ಮೇಲ್ವರ್ಗದ ಜನರಿಗೂ ಕಾನೂನು ಸಲಹೆ ನೀಡಬೇಕು-ದಲಿತ ಮುಖಂಡ ಬದ್ದಿ ಮರಿಸ್ವಾಮಿ

ಕೊಟ್ಟೂರು ಫೆಬ್ರುವರಿ.11

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಪ್ರತಿ ಎರಡನೇ ಭಾನುವಾರ ರಂದು ಸಿಪಿಐ ಟಿ. ವೆಂಕಟಸ್ವಾಮಿ ಹಾಗೂ ಸಬ್ ಇನ್ಸ್ಪೆಕ್ಟರ್ ಗೀತಾಂಜಲಿ ಶಿಂದೆ ರವರ ನೇತೃತ್ವದಲ್ಲಿ ದಲಿತರ ಕುಂದು ಕೊರತೆ ಕುರಿತು ಸಭೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡ ಬದ್ದಿ ಮರಿಸ್ವಾಮಿಯವರು ಮಾತನಾಡಿ ಹಳ್ಳಿಗಳಲ್ಲಿ ಕ್ಷೌರ ಮಾಡಲು ನಿರಾಕರಿಸುವುದು, ದೇವಸ್ಥಾನಗಲ್ಲಿ ಪ್ರವೇಶ ಮಾಡಲು ನಿರಾಕರಿಸುವುದು, ಹೋಟೆಲ್ ಗಳಲ್ಲಿ ತಾರತಮ್ಯ ಮಾಡುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ದಲಿತರಿಗೆ ಅಪಮಾನ ಮಾಡುವ ಉದ್ದೇಶದಿಂದ ಕೆಲ ಕಾಲೇಜ್ ವಿದ್ಯಾರ್ಥಿಗಳು ಕೆಟ್ಟ ವಿಡಿಯೋಗಳನ್ನು ಮಾಡಿ ಬಿಡುವುದು ಇಂತಹ ಅನೇಕ ಘಟನೆಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈಗಲೂ ನಡೆಯುತ್ತಿದೆ. ಇದರಿಂದಾಗಿ ಪೊಲೀಸ್ ಇಲಾಖೆಯು ಈ ತರಹದ ಘಟನೆಗಳು ನಡೆಯದಂತೆ ಮೇಲ್ವರ್ಗದ ಜನರಿಗೆ ಸಹ ಕಾನೂನು ಅರಿವನ್ನು ಮೂಡಿಸುವ ಸಭೆಯನ್ನು ನಡೆಸಬೇಕು ಎಂದು ಸಲಹೆಯನ್ನು ನೀಡಲಾಯಿತು.

ಈ ವಿಷಯವಾಗಿ ಮಾತನಾಡಿದ ಸಿಪಿಐ ಟಿ. ವೆಂಕಟಸ್ವಾಮಿ ಯವರು ಈ ತರಹದ ಘಟನೆಗಳು ಕಂಡು ಬಂದಲ್ಲಿ ನಮ್ಮ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ತಕ್ಷಣ ಅಂಥವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು, ಈ ಎಲ್ಲಾ ಘಟನೆಗಳು ನಮಗೆ ಖಚಿತ ಮಾಹಿತಿ ಮೇರೆಗೆ ಕಂಡು ಬಂದಿದ್ದೆ ಆದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ವಹಿಸಲಾಗುವುದು ಎಂದು ಹೇಳಿದರು.ಮುಂಬರುವ ಚುನಾವಣೆಯಲ್ಲಿ ನೀತಿ ಸಂಹಿತೆ ಇರುತ್ತದೆ. ಯಾವುದೇ ಅಹಿತಕರ ಘಟನೆಗಳ ನಡೆದಂತೆ ಎಲ್ಲಾ ಯುವಕರು ಎಚ್ಚರ ವಹಿಸಬೇಕು ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ರವರು ಹೇಳಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕೆ. ಶಿವರಾಜ್, ಎಲ್. ವಿಷ್ಣು, ರೋಹಿತ್, ಮಾರೇಶ್, ಮಣಿಕಂಠ, ಮಲ್ಲಿಕಾರ್ಜುನ, ಸ್ವಾಮಿ, ಶೇಖರ್, ಮುಂತಾದ ಯುವಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button