ಚಿಕಿತ್ಸೆ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ ವೈದ್ಯರು.
ಹೊಸಪೇಟೆ ಸಪ್ಟೆಂಬರ್.27

ವಿಜಯನಗರ ಜಿಲ್ಲೆಯ ಹೊಸಪೇಟೆ 60 ಹಾಸಿಗೆ ಆಸ್ಪತ್ರೆ ಮುಂಭಾಗ ಭಗತ್ ಸಿಂಗ್ ರಕ್ತದಾನಿಗಳ ಸಂಘ ವತಿಯಿಂದ 27/09/2023ರಂದು ಧರಣಿ ನಡೆಸಲಾಯಿತು ದಿನಾಂಕ: 13/09/2023 ರಂದು ರಾತ್ರಿ 1:30 ಸುಮಾರಿಗೆ ಶ್ರೀಮತಿ ಸಿಂಧುರವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣದಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯ (MCH) 60 ಹಾಸಿಗೆಯ ಸರಕಾರಿ ತಾಯಂದಿರಹಾಗೂ ಮಕ್ಕಳ ಆಸ್ಪತೆಗೆ ತೆರಳಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರಾದ ಶ್ರೀಮತಿ ಹೇಮಾವತಿ ರವರು ಹೆರಿಗೆಗೆ ಎಂದು ಬಂದಿದ್ದ ಶ್ರೀಮತಿ ಸಿಂಧುರವರನ್ನು ಪರೀಕ್ಷಿಸಿ ಮಗುವಿನ ಹಾರ್ಟ್ ಬೀಟ್ ಕಡಿಮೆ ಇದೆ ಆದಕಾರಣ ಶಸ್ತ್ರಚಿಕಿತ್ಸೆ ಹೆರಿಗೆ ಮಾಡಿಸಬೇಕು ನಮ್ಮಲ್ಲಿ ಶಸ್ತ್ರಚಿಕಿತ್ಸೆ ಹೆರಿಗೆ ಮಾಡಿಸಿಕೊಳ್ಳಲು ಆಗುವುದಿಲ್ಲ. ಆದಕಾರಣ ತಾವುಗಳು ಕೊಪ್ಪಳ ಅಥವಾ ಬಳ್ಳಾರಿಗೆ ಹೋಗಬೇಕು ಎಂದು ನಮಗೆ ತಿಳಿಸಿದರು. ನಂತರ ನೀವು ಬೇಕಾದರೆ ಹೊಸಪೇಟೆಯ ಖಾಸಗಿ ಆಸ್ಪತ್ರೆಯಾದ ಕೆ ಎಲ್ ಎಸ್ ಆಸ್ಪತ್ರೆಗೆ ಬರುವುದಾದರೆ 38000/- ರೂ. ಶಸ್ತ್ರಚಿಕಿತ್ಸೆ ಹೆರಿಗೆಗೆ ಕೊಡಬೇಕಾಗುತ್ತದೆ ಎಂದು ಸ್ವತಃ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಸರ್ಕಾರಿ ವೈದ್ಯರಾದ ಶ್ರೀಮತಿ ಹೇಮಾವತಿರವರ ಮಾತನ್ನು ಕೇಳಿ ನಂತರ ರಾತ್ರಿ 2:15 ನಿಮಿಷಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ತರಾತುರಿಯಲ್ಲಿ ಹೆರಿಗೆ ಮಾಡಿದ ವೈದ್ಯ ಶ್ರೀಮತಿ ಹೇಮಾವತಿರವರು ಕೇವಲ ಎರಡೇ ದಿನಗಳಲ್ಲಿ ಶಸ್ತ್ರಚಿಕಿತ್ಸೆ ಹೆರಿಗೆಯಾದ ಶ್ರೀಮತಿ ಸಿಂಧುರವರನ್ನು ಡಿಸ್ಚಾರ್ಜ್ ಮಾಡಿರುತ್ತಾರೆ.ಎರಡು ಮೂರು ದಿನಗಳ ನಂತರ ಶ್ರೀಮತಿ ಸಿಂಧು ರವರಿಗೆ ಉಸಿರಾಟದ ತೊಂದರೆ ಹಾಗೂ ಅಧಿಕ ರಕ್ತದೊತ್ತಡ (BP) ಕಾಣಿಸಿಕೊಂಡ ನಂತರ ಮತ್ತೆ ನಾವುಗಳು ವೈದ್ಯರಾದ ಶ್ರೀಮತಿ ಹೇಮಾವತಿ ರವರನ್ನು ಸಂಪರ್ಕಿಸಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸತ್ರೆಗೆ (MCH) ಕರೆದುಕೊಂಡು ಒಂದು ಚಿಕಿತ್ಸೆಗೆಂದು ದಾಖಲಾದ ನಂತರ ವೈದ್ಯರಾದ ಶ್ರೀಮತಿ ಹೇಮಾವತಿ ರವರು ಚಿಕಿತ್ಸೆ ನೀಡಿದರು.ಚಿಕಿತ್ಸೆ ಪಡೆಯುತ್ತಿರುವ ಎರಡನೇ ದಿನಗಳಲ್ಲಿ ರಾತ್ರಿ 3:00 ಗಂಟೆಯ ಹೊತ್ತಿನಲ್ಲಿ ಶ್ರೀಮತಿ ಸಿಂಧೂ ರವರಿಗೆ ನರಗಳ ದೌರ್ಬಲ್ಯ, ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆ ಕಂಡುಬಂದ ಸಂದರ್ಭದಲ್ಲಿ ತಕ್ಷಣವೇ ವೈದ್ಯರಿಗೆ ತಿಳಿಸಿದಾಗ ತಾವುಗಳು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಅಥವಾ ಬಳ್ಳಾರಿಗೆ ಹೋಗಬೇಕು ಎಂದು ತಿಳಿಸಿದರು. ನಂತರ ನಾವುಗಳು ಕೊಪ್ಪಳದ ಖಾಸಗಿ ಆಸ್ಪತ್ರೆಯಾದ ಕೆ.ಎಸ್. ಆಸ್ಪತ್ರೆ ಗೆ ದಾಖಲಿಸಿದವು ಅಲ್ಲಿನ ವೈದ್ಯರು MRI ಸ್ಕ್ಯಾನ್ ಮತ್ತು ಇತರೆ ರಕ್ತ ಪರೀಕ್ಷೆ ಮಾಡಿದ ನಂತರ ಶಸ್ತ್ರಚಿಕಿತ್ಸಾ ಹೆರಿಗೆ ಮಾಡುವ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷದಿಂದ ರೋಗಿಯ ದೇಹದಲ್ಲಿ ರಕ್ತ ಹೆಪ್ಪುಗಟ್ಟುತ್ತಿರುವುದರಿಂದ ಈ ರೀತಿಯಾದ ಆರೋಗ್ಯದಲ್ಲಿ ತೊಂದರೆ ಕಂಡುಬಂದಿರುತ್ತದೆ.

ಕೂಡಲೇ ಮತ್ತೊಂದು ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಇಲ್ಲವಾದಲ್ಲಿ ಶ್ರೀಮತಿ ಸಿಂಧು ರವರ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಬಹುದು ಎಂದು ಕೆಎಸ್ ಆಸ್ಪತ್ರೆಯ ವೈದ್ಯರು ತಿಳಿಸಿದ ಸಂದರ್ಭದಲ್ಲಿ ಕೂಡಲೇ ಕುಟುಂಬದ ಸದಸ್ಯರು ಸೇರಿ ತೀರ್ಮಾನ ಮಾಡಿ ಕೆ. ಎಸ್ ಆಸ್ಪತ್ರೆಯ ವೈದ್ಯರು ತಿಳಿಸಿದ ಹಾಗೆ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾದವು ಈ ಶಸ್ತ್ರಚಿಕಿತ್ಸೆಗೆ ಸರಿಸುಮಾರು 80,000/- ರೂ ಖರ್ಚಾಗಿರುತ್ತದೆ. MCH ನ ವೈದ್ಯರ ನಿರ್ಲಕ್ಷ್ಯದಿಂದ ಖಾಸಗಿಯಾಗಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿರುವ ಶ್ರೀಮತಿ ಸಿಂಧು ರವರ ತಂದೆಯು ಮಗಳ ಜೀವ ಕಾಪಾಡಲು ಸರಿಸುಮಾರು 1.5 ಲಕ್ಷ ಸಾಲ ಮಾಡಿರುತ್ತಾರೆ. ಇನ್ನು ಮೂರ ರಿಂದ ಆರು ತಿಂಗಳ ಕಾಲ ಶ್ರೀಮತಿ ಸಿಂಧು ರವರ ಚಿಕಿತ್ಸೆ ಮುಂದುವರೆಯಲಿದ್ದು ಮುಂದಿನ ಚಿಕಿತ್ಸೆ ವೆಚ್ಚ ಸರಿಸುಮಾರು 1 ಲಕ್ಷದವರೆಗೂ ಬರಬಹುದು ಎಂದು ಅಂದಾಜಿಸಲಾಗಿದೆ. MCH ನ ವೈದ್ಯರ ನಿರ್ಲಕ್ಷ್ಯದಿಂದ ಆಗಿರುವ ಇಂತಹ ಘಟನೆಗೆ ಆರೋಗ್ಯ ಇಲಾಖೆ ಹೊಣೆ ಹೊತ್ತು ರೋಗಿಯ ಸಂಬಂಧಿಕರಿಗೆ ತಕ್ಷಣವೇ 10 ಲಕ್ಷ ಪರಿಹಾರ ನೀಡಬೇಕು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದ ಸಂದರ್ಭದಲ್ಲಿ ಹಣದ ಆಸೆಗೆ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಧರಣಿ ನಡೆಸಲಾಯಿತು ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಈ ವಿಚಾರವಾಗಿ ಕೂಲಂಕುಷವಾಗಿ ತನಿಖೆ ನಡೆಸಿ ಸೂಕ್ತ ಕ್ರಮವಹಿಸುತ್ತೇವೆ ಹಾಗೂ ನಿಮ್ಮ ಬೇಡಿಕೆಗಳ ಬಗ್ಗೆ ಗಮನಹರಿಸುತ್ತೇನೆ ಎಂದು ಹೇಳಿದರು.ಶ್ರೀಮತಿ ಸಿಂಧು ರವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು. ಚಿಕಿತ್ಸೆಯ ಸಂದರ್ಭದಲ್ಲಿ ನಿರ್ಲಕ್ಷ್ಯತೆಯನ್ನು ತೋರಿದ ವೈದ್ಯರಾದ ಡಾ|| ಹೇಮಾವತಿರವರನ್ನು ಕೂಡಲೇ ಅಮಾನತ್ತು ಮಾಡಬೇಕು. MCH ಆಸತ್ರೆಯಲ್ಲಿ ಬೀಗ ಹಾಕಿರುವ ಕೊಠಡಿಗಳನ್ನು ಕೂಡಲೇ ಸಾರ್ವಜನಿಕ ಬಳಕೆಗೆಅವಕಾಶ ಮಾಡಿಕೊಡಬೇಕು. MCH ಆಸ್ಪತ್ರೆಯಲ್ಲಿ ವೈದ್ಯರು (ಹೆರಿಗೆ ತಜ್ಞರು) ಮಕ್ಕಳ ವೈದ್ಯರು, ಸ್ಟಾಫ್ ನರ್ಸ್,ಡಿ ಗ್ರೂಪ್ ಸಿಬ್ಬಂದಿ – ಹೋಂ ಗಾರ್ಡ್ ನೇಮಿಸಬೇಕು. MCH ಆಸ್ಪತ್ರೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಒದಗಿಸಬೇಕು. ರಸ್ತೆ ಕುಡಿಯುವ ನೀರು ರೋಗಿಗಳು ಮತ್ತು ಸಂಬಂಧಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಇತ್ಯಾದಿಆರೋಗ್ಯ ಇಲಾಖೆಯಲ್ಲಿ ತುರ್ತು ಸಂದರ್ಭದಲ್ಲಿ ಅವಶ್ಯಕತೆ ಇರುವ ಸಿಬ್ಬಂದಿಗಳಿಗೆ ವಸತಿ ಕಲ್ಪಿಸಿಕೊಡಬೇಕು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ