ಧರ್ಮದ ಹಾದಿಯಲ್ಲಿ ನಡೆಯುವಂತ ಶಾಸಕರಿಗೆ ಮಂತ್ರಿಸ್ಥಾನ ದೊರೆಯಬೇಕೆಂದು ಮತದಾರರ ಆಶೋತ್ತರವಾಗಿದೆ.

ಮೊಳಕಾಲ್ಮುರು ಫೆಬ್ರುವರಿ.14

ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ರಾಯದುರ್ಗ ತಾಲೂಕು ಹಡಗಲಿ ಗ್ರಾಮದಲ್ಲಿ ಮನೆ ದೇವರಾದ ಶ್ರೀ ಶ್ರೀ ದೇವಮ್ಮ ದೇವಿಗೆ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಮನೆದೇವರಾದ ದೇವಮ್ಮ ಕರ್ನಾಟಕದಲ್ಲಿ ನ್ಯಾಯ ಧರ್ಮ ನೀತಿ ಕಾಪಾಡಿ ಕೊಂಡು ರಾಜಕೀಯದಲ್ಲಿ ಜನ ಸಾಮಾನ್ಯರಿಗೆ ಬಡವರಿಗೆ ರೈತರಿಗೆ ವ್ಯಕ್ತಿ ಅಂದ್ರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರ ಮಾತ್ರ ಇಂಥ ಒಬ್ಬ ಶಾಸಕರಿಗೆ ದೇವಮ್ಮ ಎಂಬ ಮನೆದೇವರು ಕರುಣೆ ಯಾಕೆ ತೋರಿಸಿಲ್ಲಮ್ಮ ರಾಜ್ಯದ ಮಂತ್ರಿ ಸ್ಥಾನಕ್ಕೆ ಬಡ ಜನರು ಮತ್ತು ಜನ ಸಾಮಾನ್ಯರು ನಿಮಗೆ ಬೇಕಿಲ್ಲವೇ ದೇವಮ್ಮ ಇಂತಹ ಎನ್ ವೈ ಗೋಪಾಲಕೃಷ್ಣ ಶಾಸಕರ ಅಂತರಿಗೆ ಯಾಕೆ, ಆಶೀರ್ವಾದ ಮಾಡಿಲ್ಲ ತಾಯಿ ನ್ಯಾಯವಾದವರಿಗೆ ಕಾಲ ಇಲ್ಲ ಎಂದು ಮಾತಾಡೋವಂತ ಮೊಳಕಾಲ್ಮೂರು ಕ್ಷೇತ್ರದ ಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಆದರೆ ಬೇರೆಯವರಿಗೆಲ್ಲ ಸೀನಿಯರ್ ಜೂನಿಯರ್ ಎಂಬುದೇ ಮಂತ್ರಿ ಪದವಿ ಕೊಟ್ಟಿರುತ್ತಾರೆ ಕಾಂಗ್ರೆಸ್ ಪಕ್ಷದಲ್ಲಿ ಆದರೆ ಎನ್ ವೈ ಗೋಪಾಲಕೃಷ್ಣ ಅಂತ ಶಾಸಕರು ಆರು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದಾರೆ ಒಂದು ಬಾರಿ ಬಿಜೆಪಿ ಪಕ್ಷದಲ್ಲಿ ಶಾಸಕರಾದರು ಒಟ್ಟು ಏಳು ಬಾರಿ ಶಾಸಕರಾಗಿದ್ದಾರೆ ಡೆಫ್ಟಿ ಸ್ಪೀಕರ್ ಸಹ ಆಗಿದ್ದಾರೆ ಕರ್ನಾಟಕದಲ್ಲಿ ನಂಬರ್ ಒನ್ ಶಾಸಕರು ನ್ಯಾಯ ನೀತಿ ಧರ್ಮದಲ್ಲಿ ನಡೆಯುವಂತ ಶಾಸಕರು ಇದನ್ನು ಫಸ್ಟ್ ಆಲೋಚನೆ ಮಾಡಬೇಕು ಕಾಂಗ್ರೆಸ್ ಪಕ್ಷದವರು ಎನ್ ವೈ ಗೋಪಾಲಕೃಷ್ಣ ಮನಸ್ಸಿನಲ್ಲಿ ದೇವರು ಕೊಟ್ಟಿರುವಂತಹ ಶಕ್ತಿ ಅದು ಯಾರಿಗೆ ಕೊಟ್ಟಿಲ್ಲ ಇದನ್ನ ಅರ್ಥ ಮಾಡಿಕೊಂಡು ಕಾಂಗ್ರೆಸ್ ಪಕ್ಷದವರು ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕು ಅಂತ ಮೊಳಕಾಲ್ಮೂರು ಜನ ಮತದಾರರು ಮಾತನಾಡುವ ಮಾತುಗಳಾಗಿವೆ ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಮಾಜಿ ಸಚಿವರಾದ ಕಾಲುವ ಶ್ರೀನಿವಾಸಲು, ಹಿರಿಯ ಮುಖಂಡರಾದ ನಾಗರೆಡ್ಡಿ ,ಸದಾಶಿವ ರೆಡ್ಡಿ, ಮೋಹನ್ ರೆಡ್ಡಿ.ಅಭಿಮಾನಿಗಳು, ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನೆಲ್:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button