ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸಂತ ಶ್ರೀ ಸೇವಾಲಾಲ್ ಮಹಾರಾಜರ 285.ನೇ ಜಯಂತಿ ಆಚರಣೆ.

ಸಿಂದಗಿ ಫೆಬ್ರುವರಿ.15

ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ 285 ನೆಯ ಶ್ರೀ ಸಂತ ಸೇವಾಲಾಲರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳಾದ ರಾಜಶೇಖರ್ ನರಗೋಧಿ ಮಾತನಾಡಿದರು. ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜಗದಂಬೆಯ ಆರಾಧಕರಾಗಿ ಇಡೀ ಜೀವ ಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲರು, ಇಂದಿಗೂ ಜನ ಮಾನಸದಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ. ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿ ಮಾತು ಹೇಳಿದ್ದರು ಮತ್ತು ಕಾರ್ಯಕ್ರಮದಲ್ಲಿ ಹೀರಿಯದಂತ ವೈದ್ಯಾಧಿಕಾರಿಗಳಾದ ರಮೇಶ್ ರಾಠೋಡ ಮಾತನಾಡಿದರು ನಿರೂಪಣೆ ಶ್ರೀಎಂ.ಪಿ .ಸಾಗರ್ ಮಾಡಿದರು ಕಾರ್ಯಕ್ರಮದಲ್ಲಿ ಶುಶ್ರೂಷಕಿ ಅಧಿಕಾರಿಯಾದ ಶ್ರೀಮತಿ ವಿದ್ಯಾ ಹಿರೇಪಟ್ ಮತ್ತು ಶುಶ್ರೂಷಕಿ ಅಧಿಕಾರಿಯಾದ ಶ್ರೀಮತಿ ದೇವಮ್ಮ ಕೊಣ್ಣೂರ್, ಎಸ್ ಡಿ ಸಿ ಯಾದ ಭೀಮಾಶಂಕರ ಮನಮಿ ಮತ್ತು ಆಯುಷ್ ವೈದ್ಯಾಧಿಕಾರಿಗಳಾದ ಡಾ, ಮಾಂತೇಶ್ ಹಿರೇಮಠ್ ಮತ್ತು ಇನ್ನೋರ್ವ ಆಯುಷ್ ಅಧಿಕಾರಿಗಳಾದ,ಡಾ,ಮೌನೇಶ್ ಬಡಿಗೇರ್ ಮತ್ತು ಶುಶ್ರೂಷಕ ಅಧಿಕಾರಿಯಾದ ರಾಯಣ್ಣ ಸೊನ್ನಳ್ಳಿ ಎಫ್ ಡಿ ಸಿ ಯಾದ ಡಿ.ಡಿ ಮಾಳಸಿದ್ದ ಮತ್ತು ಔಷದ ಸಂಯೋಜಿಕರಾದ ಸುರೇಶ್ ಪಾಟೀಲ್, ಆಪ್ತ ಸಮಾಲೋಚಕರಾದ ಸಾಯ್ಬಣ್ಣ.ಗಣಜಲಿ ಕ್ಷಯ ರೋಗ ವಿಭಾಗದ ಶಶಿದರ ಕೊಡತ್ತಗಿರಿ, ಪ್ರಯೋಗಾಲಯ ಅಧಿಕಾರಿಗಳಾದ ಅಶೋಕ್ ಕಡಲಗೊಂಡ್ ಹಾಗೂ ಪ್ರಯೋಗಾಲಯ ಅಧಿಕಾರಿಯಾದ ದುಂಡಪ್ಪ.ಲ ಕುಂಬಾರ ಎಸ್ ಡಿ ಸಿ ಯಾದ ಶಂಕರಲಿಂಗ ಮಾನೇಗರ ಸುನಿಲ್ ನೇಮ್ ಶೆಟ್ಟಿ ಮಾಂತು ಬೂದಿ.ಹಾಗೂ ತಾಲೂಕ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button