ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವದ ಪೂರ್ವ ಸಿದ್ಧತೆ ಸಭೆ.

ಕೊಟ್ಟೂರು ಫೆಬ್ರುವರಿ.15

ಪಟ್ಟಣದ ಆರಾಧ್ಯ ದೈವ ಪವಾಡ ಪುರುಷ ಕರ್ನಾಟಕದಲ್ಲಿ ಪ್ರಕ್ಯತಿ ಪಡೆದಿರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಬಾಗಿಲಿನ ಬೆಳ್ಳಿ ಕವಚ ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದರಿಂದ ಈಗ ಇದರ ಕವಚಗಳನ್ನು ಪರಿಶೀಲಿಸಿ ಅನುಮೋದನೆ ಕಳಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ ಎಸ್ ದಿವಾಕರ್ ಹೇಳಿದರು.ಕೊಟ್ಟೂರು, ಮೈಲಾರ,ಕುರುವತ್ತಿ, ಹಂಪಿ, ದೇವಸ್ಥಾನಗಳು ನಮ್ಮ ಜಿಲ್ಲೆಯ ಕಳಸ ಪ್ರಾಯಗಳು, ದೇವಸ್ಥಾನದ ಜಾತ್ರೆ,ಅಮಾವಾಸ್ಯೆ, ಹುಣ್ಣಿಮೆ ದಿನದಂದು ಕೊಟ್ಟೂರು ಪಟ್ಟಣಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಜಿಲ್ಲಾಧಿಕಾರಿಯಾಗಿ ನನ್ನ ಆದ್ಯ ಕರ್ತವ್ಯವಾಗಿದೆ. ಕೊಟ್ಟೂರು ಪಟ್ಟಣದ ನಾಲ್ಕು ದಿಕ್ಕಿನಲ್ಲಿ ಭಕ್ತರಿಗೆ ಯಾತ್ರ ನಿವಾಸ ಕಟ್ಟಬೇಕು ಎಂಬುದು ನನ್ನ ಹಂಬಲ, ನನ್ನ ಮಡದಿಯ ತವರು ಮನೆ ಮನೆದೇವರು ಕೂಡ ಕೊಟ್ಟೂರೇಶ್ವರ ಸ್ವಾಮಿಯೇ ಆಗಿದ್ದಾರೆ, ಮಠಕ್ಕೆ ಯಾವುದೇ ಸೌಲಭ್ಯ ಬೇಕಾದರೂ ಮಾಡಿ ಕೊಡುವೆ, ಹಣದ ಕೊರತೆ ಇಲ್ಲಾ, ಯೋಜನೆಗಳಿಗೆ ಶಾಸಕರು, ಹಾಗೂ ಸ್ಥಳೀಯರು ಸೇರಿ, ಭಕ್ತಾದಿಗಳಿಗೆ ಅವಶ್ಯಕತೆ ಇರುವ ಸೌಲಭ್ಯಗಳ ಪಟ್ಟಿಮಾಡಿ ಯೋಜನೆ ರೂಪಿಸಿ ಎಂದರು.ಧಾರ್ಮಿಕ ದತ್ತಿ ಇಲಾಖೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಕೃಷ್ಣಪ್ಪ ಬಿ.ಎಂ. ವೇದಿಕೆ ಗಣ್ಯರಿಗೆ, ಸಾರ್ವಜನಿಕರಿಗೆ, ಕಟ್ಟಿಮನಿ ದೈವದವರಿಗೆ, ದೇವಸ್ಥಾನದ ಆಯಾಗಾರರಿಗೆ,ಪೊಲೀಸ್ ಇಲಾಖೆಯವರಿಗೆ ಸ್ವಾಗತ ಕೋರಿದರು ನಂತರ ಮಾತನಾಡಿ ಮಾನ್ಯ ಜಿಲ್ಲಾಧಿಕಾರಿ ಆಸಕ್ತಿವಹಿಸಿ ನೆನೆಗುದಿಗೆ ಬಿದ್ದಿದ್ದ ಬೆಳ್ಳಿ ಬಾಗಿಲು ಮಾಡಿಸುವ ಯೋಜನೆ ಕಡತಕ್ಕೆ ಚಾಲನೆ ನೀಡಿದ್ದಾರೆ ಆ ಪ್ರಕಾರ ಬೆಳ್ಳಿ ಸಹ ಖರೀದಿಸಲಾಗಿದೆ ಎಂದರು.

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಮಾರ್ಚ 04 ರಂದು ಜರುಗುತ್ತಿರುವ ಹಿನ್ನೆಲೆಯಲ್ಲಿ ಇಂದು ಶ್ರೀ ಸ್ವಾಮಿ ದೇವಸ್ಥಾನದ ಮುಂದಿನ ಅವರಣದಲ್ಲಿ ಸಭೆ ಸೇರಲಾಗಿತ್ತು.ರಥೋತ್ಸವ ಪೂರ್ವ ಸಿದ್ದತೆ ಸಭೆ ಅಧ್ಯಕ್ಷತೆ ಶಾಸಕರಾದ ನೇಮರಾಜ್ ನಾಯ್ಕ್ ವಹಿಸಿಕೊಂಡಿದ್ದರು. ಶ್ರೀ ಮನ್ನಿರಂಜನ ಜಗದ್ಗುರು ಶ್ರೀ ಶಂಕರ ಮಹಾಸ್ವಾಮಿಗಳು, ಕ್ರಿಯಾ ಮೂರ್ತಿಗಳು, ಹಾಗೂ ಶ್ರೀ ಮ.ನಿ.ಪ್ರ. ಶ್ರೀ ಶಿವಪ್ರಕಾಶ ಸ್ವಾಮಿಗಳು, ಕೊಟ್ಟೂರು ದೇವರು ಕ್ರಿಯಾ ಮೂರ್ತಿಗಳು, ಸಹಾಯಕ ಆಯುಕ್ತರಾದ ಪ್ರಕಾಶ್, ,ಡಿವೈಎಸ್ಪಿ ಕೂಡ್ಲಿಗಿ ಮಲ್ಲಪ್ಪ ಮಲ್ಲಾಪರ, ಅಮರೇಶ್ ತಾಲೂಕು ದಂಡಾಧಿಕಾರಿಗಳು ಮತ್ತು ಪ.ಪಂ ಮುಖ್ಯಾಧಿಕಾರಿ ಎ.ನಸರುಲ್ಲಾ, ರಾಜಕೀಯ ಮುಖಂಡರಾದ ಎಂ.ಎಂ.ಜೆ. ಹರ್ಷವರ್ಧನ್ ಹಾಗೂ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಬದ್ದಿ ಮರಿಸ್ವಾಮಿ ಮತ್ತು ತಗ್ಗಿನಕೇರಿ ಕೊಟ್ರೇಶ್ ಹಾಗೂ ಹನುಮಂತಪ್ಪ ವಕೀಲರು,ಬಿಎಸ್ಆರ್ ಮುಗಣ್ಣ ಮತ್ತು ಎಲ್ಲಾ ತಾಲೂಕು ಅಧಿಕಾರಿ ವರ್ಗ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಕೊಟ್ರೇಶ್ ಮರಬದ, ರಾಮಣ್ಣ ಟಿ. ವಿದ್ಯಾಶ್ರೀ ಮೇಘರಾಜ್, ಸಿದ್ದಯ್ಯ ಜಿ. ಕೆಂಗಪ್ಪ ಸಿ. ಶ್ರೀಮತಿ ವೀಣಾ ವಿವೇಕಾನಂದ,ಮುಂತಾದವರು ಹಾಗೂ ಪಟ್ಟಣದ ಸಾರ್ವಜನಿಕರು ಭಾಗವಹಿಸಿದ್ದರು. ಉಮಾಪತಿಗೌಡ, ಹಾಗೂ ಮಠ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.ಪ್ರಾರ್ಥನೆ : ಕೊಟ್ಟೂರೇಶ್ವರಿ ಹಾಡಿದರು, ನಿರೂಪಣೆ ಅರವಿಂದ ಬಸಾಪುರ ನಿರ್ವಹಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button