ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾ ಮಠ ಸಿದ್ದಯ್ಯನ ಕೋಟೆ 15 ರಿಂದ 20.ನೇ ತಾರೀಖಿನ ವರೆಗೆ ಜಾತ್ರೆ ಮಹೋತ್ಸವ.
ಸಿದ್ದಯ್ಯನ ಕೋಟೆ ಫೆಬ್ರುವರಿ.19
![](https://i0.wp.com/sknewskannada.in/wp-content/uploads/2024/02/IMG-20240219-WA0010-1024x768.jpg?resize=708%2C531&ssl=1)
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನ ಕೋಟೆ ಗ್ರಾಮದಲ್ಲಿ ಇಳಕಲ್ ವಿಜಯ ಮಾಂತೇಶ್ವರ ಸಂಸ್ಥಾನ ಶಾಖಾ ಮಠವಿದ್ದು ವರ್ಷಕ್ಕೊಮ್ಮೆ ಜಾತ್ರೆ ಆರಂಭಿಸಿ ಕೊಳ್ಳುತ್ತಾರೆ ಈ ಜಾತ್ರೆಯಲ್ಲಿ ಭಜನೆ ನಾಟಕ ನೃತ್ಯ ಕಲಾ ನೃತ್ಯಗಳು ಕಬಡ್ಡಿ ಕೋಲಾಟ ಇನ್ನೂ ಅನೇಕ ಕಲಾ ನೃತ್ಯಗಳನ್ನು ಬಸವಲಿಂಗ ಸ್ವಾಮೀಜಿಗಳು ಜಾತ್ರೆಯಲ್ಲಿ ನಾಲ್ಕೈದು ದಿವಸ ಜಾತ್ರೆಯನ್ನು ಮಾಡುತ್ತಾರೆ ಈ ಮಠದ ಉಸ್ತುವಾರಿ ಕಾಂತರಾಜ್ ಮಾಜಿ ಸಚಿವ ಎಚ್ ಆಂಜನೇಯ ಈ ಮಠಕ್ಕೆ ಭೇಟಿ ಕೊಡುತ್ತಾರೆ ಮತ್ತೆ ಮೊಳಕಾಲ್ಮೂರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಸಹ ಬಂದು ಹೋಗುತ್ತಾರೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಬಂದು ಸಿದ್ದಗಂಗಾ ಮಠದ ಸ್ವಾಮೀಜಿಗಳು ಮುರುಗ ಮಠದ ಸ್ವಾಮೀಜಿಗಳು ಇಳಕಲ್ ಸ್ವಾಮೀಜಿಗಳು ಗವಿಮಠದ ಸ್ವಾಮೀಜಿಗಳು ಈ ಸ್ವಾಮೀಜಿಗಳಿಗೆ ಭಕ್ತಾದಿಗಳು ಆಶೀರ್ವಾದ ಪಡೆಯುತ್ತಾರೆ ಈ ಜಾತ್ರೆಗೆ ಆಗಮಿಸುತ್ತಾರೆ ಮತ್ತು ಈ ಜಾತ್ರೆಗೆ ರಾಜಕೀಯವರು ಸಹ ಆಗಮಿಸುತ್ತಾರೆ ಈ ಜಾತ್ರೆಯಲ್ಲಿ ಸಿದ್ದನಕೋಟೆ ಓಣಿ ಓಣಿಗಳಲ್ಲಿ ಪಲ್ಲಕ್ಕಿಯೊಂದಿಗೆ ತಮಟೆ ವಾದ್ಯಗಳೊಂದಿಗೆ ಗೊಂಬೆ ನಂದಿಕೋಲು ಮೆರವಣಿಗೆ ಮುಖಾಂತರ ಪಲ್ಲಕ್ಕಿ ಸಾಗುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ತಿಪ್ಪೆಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು