ಹುನಗುಂದ ಪಟ್ಟಣದ ನೀವೆಶನ ರಹಿತ 855. ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ – ಶಾಸಕ ಕಾಶಪ್ಪನವರ.
ಹುನಗುಂದ ಮಾರ್ಚ್.11

ಪಟ್ಟಣದ ಪುರಸಭೆಯ 24. ಎಕರೆ ಜಮೀನನಲ್ಲಿ 941 ಜನ ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು ಸಧ್ಯ 855 ಫಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರ ನೀಡುತ್ತಿದ್ದು.ಉಳಿದ 86 ಜನ ಫಲಾನುಭವಿಗಳಿಗೂ ಶೀಘ್ರದಲ್ಲಿಯೇ ಹಕ್ಕು ಪತ್ರ ನೀಡೋದರ ಜೊತೆಗೆ 941 ಜನ ಫಲಾನುಭವಿಗಳಿಗೂ ರಾಜೀವ ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ಕಟ್ಟಿಸಿ ಕೊಡಲಾಗುವುದು ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ರವಿವಾರ ಪಟ್ಟಣದ ವಿ,ಮ.ವೃತ್ತದಲ್ಲಿ ಪೌರಾಡಳಿತ ಇಲಾಖೆ, ಜಿಲ್ಲಾ ನಗರಾಭಿವೃದ್ದಿ ಕೋಶ ಬಾಗಲಕೋಟ ಹಾಗೂ ಪುರಸಭೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಟ್ಟಣದ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಮತ್ತು ರಾಜೀವ ಗಾಂಧಿ ವಸತಿ ನಿಗಮದಿಂದ ಆಯ್ಕೆಗೊಂಡ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ಶಾಸಕರಿಗೆ ಪೌರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುನಗುಂದ ಪುರಸಭೆಯ 24 ಎಕರೆ ಜಮೀನನಲ್ಲಿ 941 ಫಲಾನುಭವಿಗಳಿಗೆ ಮತ್ತು ಇಳಕಲ್ಲದ ನಗರಸಭೆ ಜಾಗೆಯಲ್ಲಿ 1560. ಫಲಾನುಭವಿಗಳನ್ನು ಆಯ್ಕೆ ಮಾಡಿ ರಾಜೀವ ಗಾಂಧಿ ವಸತಿ ನಿಗಮ ಮೂಲಕ ಮುಖ್ಯ ಮಂತ್ರಿಗಳಿಂದ ಹಕ್ಕು ಪತ್ರ ವಿತರಣೆ ಮಾಡಿದರೂ ಕೂಡಾ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಉದ್ದೇಶ ಪೂರ್ವಕವಾಗಿ ಫಲಾನುಭವಿಗಳ ಆಯ್ಕೆಯಲ್ಲಿ ಲೋಪದೋಷಗಳಿವೆ ಹಕ್ಕು ಪತ್ರ ಕೊಡಬಾರದು ಎಂದು ಡಿಸಿ ಮೂಲಕ ರಾಜೀವಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದು 2018 ರಿಂದ 2023. ರವರಗೆ ಒಂದು ಹಕ್ಕು ಪತ್ರ ಕೊಡಲಿಲ್ಲ.

ಫಲಾನುಭವಿಗಳು ಇಳಕಲ್ಲ ನಗರಸಭೆಯ ಮುಂದೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದಾಗ ಅದಕ್ಕೆ ನಾನು ಬೆಂಬಲವಾಗಿ ನಿಂತರೇ ನನ್ನನ್ನು ಸೇರಿ 11 ಜನರ ಮೇಲೆ ಕೊವೀಡ್ ಕೇಸ್ ಹಾಕಿಸಿದ್ರು. ಎಂದು ಮಾಜಿ ಶಾಸಕರ ವಿರುದ್ದ ಹರಿಹಾಯ್ದುರು ಇನ್ನೂ . ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಕೊಟ್ಟ ಮೇಲೆ ಅಭಿವೃದ್ದಿ ಮಾಡಲು ರಾಜ್ಯ ಬೊಕ್ಕಸದಲ್ಲಿ ಹಣವಿಲ್ಲ ಎಂದು ಹೇಳುತ್ತಿರುವ ಬಿಜೆಪಿಗರೇ ನಮ್ಮ ಮುಖ್ಯಮಂತ್ರಿಗಳು ಪ್ರತಿಯೊಂದು ಕ್ಷೇತ್ರದ ಅಭಿವೃದ್ದಿಗೆ ಮೊದಲ ಹಂತದಲ್ಲಿ 25 ಕೋಟಿ ರೂ ಬಿಡುಗಡೆ ಮಾಡಿದ್ದು. ಅಭಿವೃದ್ದಿ ಕಾರ್ಯ ನಡೆಯುತ್ತಿವೆ.ಇನ್ನು 40 ಕೋಟಿ ಅನುದಾನಲದಲಿ ಹುನಗುಂದ ಪಟ್ಟಣಕ್ಕೆ 24 x 7 ಕುಡಿಯುವ ನೀರು,18 ಕೋಟಿಯಲ್ಲಿ ಒಳಚರಂಡಿ ಮಂಜೂರಾತಿಯಾಗಿದೆ ಎಂದರು.ರಾಜೀವಗಾಂಧಿ ವಸತಿ ನಿಗಮದಿಂದ ಆಯ್ಕೆಯಾಗಿರುವ 855 ಜನ ಫಲಾನುಭವಿಗಳ ಪೈಕಿ 20 ಜನರಿಗೆ ಸಾಂಕೇತವಾಗಿ ಹಕ್ಕು ಪತ್ರ ನೀಡಲಾಯಿತು.ಮತ್ತು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಪುರಸಭೆ ವತಿಯಿಂದ ಪೌರ ಸನ್ಮಾನ ಮಾಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕ ವಿಜಯಮಹಾಂತೇಶ ಗದ್ದನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗಚ್ಚಿನಮಠದ ಅಮರೇಶ್ವರ ದೇವರು ಸಾನಿಧ್ಯ ವಹಿಸಿಕೊಂಡಿದ್ದರು, ಬಾಗಲಕೋಟ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ನಿಂಗಪ್ಪ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಪುರಸಭೆ ಸದಸ್ಯರಾದ ಶರಣು ಬೆಲ್ಲದ,ಪರವೇಜ ಖಾಜಿ,ಶಾಂತಾ ಮೇಲಿನಮನಿ,ಯಲ್ಲಪ್ಪ ನಡುವಿನಮನಿ,ಮೈನು ಧನ್ನೂರ,ಬಸವರಾಜ ಗೊನ್ನಾಗರ,ಚಂದ್ರು ತಳವಾರ,ಚೇತನ ಮುಕ್ಕಣ್ಣವರ,ಕಮಲಮ್ಮ ಸಂದಿಮನಿ,ಭಾಗ್ಯಶ್ರೀ ರೇವಡಿ,ರಾಜೇಶ್ವರಿ ಬದಾಮಿ,ಕೆಪಿಸಿಸಿ ಸದಸ್ಯ ಅಮರಗುಂಡಪ್ಪ ಮೇಟಿ,ಮುಖಂಡರಾದ ಮಹಾಂತೇಶ ಅವಾರಿ,ಶಿವಾನಂದ ಕಂಠಿ,ಸಂಗಣ್ಣ ಗಂಜೀಹಾಳ,ಯಮನಪ್ಪ ಬೆಣ್ಣಿ,ಮಹಾಂತಪ್ಪ ಪಲ್ಲೇದ,ಶೇಖರಪ್ಪ ಬಾದವಾಡಗಿ,ಮುತ್ತಣ್ಣ ಕಲಗೋಡಿ,ಸಂಗಪ್ಪ ಹೂಲಗೇರಿ,ನೀಲಪ್ಪ ತಪೇಲಿ,ಬಸವರಾಜ ಗದ್ದಿ,ವಿಶ್ವನಾಥ ಬ್ಯಾಳಿ,ಸುರೇಶ ಹಳಪೇಟಿ,ಮಹಾಂತೇಶ ತಾರಿವಾಳ ಸೇರಿದ್ದಂತೆ ಅನೇಕರು ಇದ್ದರು.ಕಾರ್ಯಕ್ರಮವನ್ನು ಶಿಕ್ಷಕಿ ಗೀತಾ ತಾರಿವಾಳ ನಿರೂಪಿಸಿ ವಂದಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ