ಕೋಗಳಿ ಗ್ರಾಮದಲ್ಲಿ ಸರಳ ಸಾಮೂಹಿಕ ವಿವಾಹಗಳು.

ಕೋಗಳಿ ಮಾರ್ಚ್.11

ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ 11 ಮಾರ್ಚ್ 2024 ಸೋಮವಾರ ಶ್ರೀ ನಂದೀಶ್ವರ ಸ್ವಾಮಿಯ ರಥೋತ್ಸವದ ಪ್ರಯುಕ್ತ ಇಂದು ಕೋಗಳಿ ಗ್ರಾಮದಲ್ಲಿ ಶ್ರೀ ನಂದೀಶ್ವರ ಸೇವಾ ಸಮಿತಿ ಮತ್ತು ಸಮಸ್ತ ದೈವಸ್ತರ ಸಹಯೋಗದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿತ್ತು,ಇಂದಿನ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವಲಿ ಮಠದ ಷ. ಬ್ರ. ಶ್ರೀ ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಹಾ ಸ್ವಾಮಿಗಳು, ಹಂಪಸಾಗರ ಇವರು ದಿವ್ಯ ಸಾನಿಧ್ಯವನ್ನು ವಹಿಸಿ, ನೂತನ ದಂಪತಿಗಳ ದಾಂಪತ್ಯ ಜೀವನದಲ್ಲಿ ಅನೇಕ ಕಷ್ಟಗಳು ಬರುತ್ತವೆ.

ಅವುಗಳನ್ನು ದಂಪತಿಗಳಿಬ್ಬರು ಜೊತೆಗೂಡಿ ಎದುರಿಸಿ, ಜೀವನವೆಂಬ ಭವ ಸಾಗರವನ್ನು ದಾಟಬೇಕು, ಸುಖ ಸಂಸಾರದಲ್ಲಿ ಸಂತೋಷ ಕಾಣಬೇಕು ಎಂದು ಹೇಳಿ ಶುಭ ಹಾರೈಸಿ ಆಶೀರ್ವಚನ ನೀಡಿದರು.ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನಪರ ಶಾಸಕರಾದ ಶ್ರೀ ಕೆ ನೇಮಿರಾಜ್ ನಾಯ್ಕ್, ಮಾತನಾಡಿ ಆಧುನಿಕ ಜಗತ್ತಿನಲ್ಲಿ ಸರಳ ಸಾಮೂಹಿಕ ಮದುವೆಗಳ ಅವಶ್ಯಕತೆ ಇದ್ದು, ಕಡು ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕೋಗಳಿ ಗ್ರಾಮದ ಮುಖಂಡರಾದ ಕೆ ಎನ್ ಸಿದ್ದಲಿಂಗನಗೌಡ್ರು, ಜೆಡಿಎಸ್ ತಾಲೂಕು ಅಧ್ಯಕ್ಷ ವೈ ಮಲ್ಲಿಕಾರ್ಜುನ, ಎಂ ಮಹೇಶಪ್ಪ, ಟಿ ಶಿವರುದ್ರಪ್ಪ, ಎಸ್ ಎಂ ಕೊಟ್ರಯ್ಯ, ಮರುಳಸಿದ್ದಯ್ಯ, ಕಂಬಿ ಕೊಟ್ರಪ್ಪ, ಹಾಗೂ ಶ್ರೀ ನಂದೀಶ್ವರ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಪಂಚಾಕ್ಷರಿ ಸಂಗೀತ ಪಾಠಶಾಲಾ ಮಕ್ಕಳ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ನೆಡಸಿಕೊಟ್ಟರು.ಡಿ ಬಸವರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು, ನಂದಿನಿ ಅಕ್ಷತಾ ಸಂಗಡಿಗರು ಪ್ರಾಥನಾ ಗೀತೆ ಹಾಡಿದರು, ಹೆಚ್ ಎಂ ಈಶಣ್ಣ ವಂದನಾರ್ಪಣೆ ಮಾಡಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button