ಮೂಲ ಸೌಕರ್ಯ ಬೇಕೆಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ.

ಗಂಗನಹಳ್ಳಿ ಮಾರ್ಚ್.19

(ಮೂಲ ಸೌಕರ್ಯ ಒದಗಿಸಿ ಇಲ್ಲ ಜಾಗ ಖಾಲಿ ಮಾಡಿ)

ದೇವರ ಹಿಪ್ಪರಗಿ ತಾಲೂಕಿನ ಗಂಗನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ, ಬಿಸಿ ಊಟ, ಕಂಪ್ಯೂಟರ್ ಶಿಕ್ಷಣ, ಮೂಲ ಸೌಕರ್ಯ ದೊರಕಿಸಿ ಕೊಡಬೇಕು,ಮತ್ತು ಮುಖ್ಯ ಶಿಕ್ಷಕರಾದ ಎಚ್, ಎಮ್, ಸಜ್ಜನ್, ಬೇರೆ ಕಡೆ ವರ್ಗಾಯಿಸ ಬೇಕು ಎಂದು ಪಾಲಕರ ಜೊತೆ ಸೇರಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು, ಸರ್ಕಾರಿ ಪ್ರೌಢಶಾಲೆ ಹಲವು ಮೂಲ ಸೌಕರ್ಯಗಳಿಂದ ಬಳಲುತ್ತಿದ್ದು ಶಾಲೆಯಲ್ಲಿರುವ ಶೌಚಾಲಯ ಕಟ್ಟಡ ಪೂರ್ಣ ಗೊಳಿಸದೆ ಇರುವುದು, ಆಟದ ಮೈದಾನ ಪೂರ್ಣ ಗೊಳಿಸದೆ ಇರುವುದು, ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಬಿಸಿ ಊಟ ಸರಿಯಾಗಿ ನೀಡದೆ ಇರುವುದು ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸದೆ ಇರುವುದು ಪಾಲಕರ ಮತ್ತು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ, ಗ್ರಾಮದ ಮುಖಂಡರಾದ ಚಿದಾನಂದ ಕನ್ನೊಳ್ಳಿ ಮಾತನಾಡಿ ವಿದ್ಯುತ್ ವ್ಯವಸ್ಥೆ, ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಕಂಪ್ಯೂಟರ್ ಶಿಕ್ಷಕರು ಇಲ್ಲದೇ ಇರುವುದು ಶಿಕ್ಷಣ ಮಕ್ಕಳಿಗೆ ಆಗುತ್ತಿಲ್ಲ, ಬಿಸಿ ಊಟ ಮಾಡುವ ಸಿಬ್ಬಂದಿಗೆ ಮುಖ್ಯ ಗುರುಗಳು ತರಕಾರಿ ಸರಿಯಾಗಿ ನೀಡುತ್ತಿಲ್ಲ ಎರಡು ಟೊಮೇಟೊ ಮತ್ತು ಎರಡು ಹಸಿ ಮೆಣಸಿನಕಾಯಿ ನೀಡುತ್ತಾರೆ ಇದರಿಂದ ಹೇಗೆ ಅಡುಗೆ ಮಾಡುವುದು, ಮುಖ್ಯ ಶಿಕ್ಷಕರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಅವಾಚ್ಯ ಪದ ಬಳಸುತ್ತಿದ್ದಾರೆ, ಕೂಡಲೇ ಇಲ್ಲಿರುವ ಮಕ್ಕಳಿಗೆ ಮೂಲಭೂತ ಸೌಲಭ್ಯ ಸಿಗಬೇಕು ಒಳ್ಳೆಯ ಶಿಕ್ಷಣ ದೊರಕಬೇಕು ಮುಖ್ಯ ಶಿಕ್ಷಕರನ್ನು ಕೂಡಲೇ ಬೇರೆ ಕಡೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು, ವಿದ್ಯಾರ್ಥಿಗಳು ಸಹಿತ ಮಾತನಾಡಿ ಕೂಡಲೇ ನಮ್ಮ ಎಚ್ ಎಮ್ ಸಜ್ಜನ್ ಸರ್ ಇವರನ್ನು ಬೇರೆ ಕಡೆ ವರ್ಗಾಯಿಸಬೇಕು ಇಲ್ಲವಾದಲ್ಲಿ ನಾವು ಶಾಲೆಗೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿ ಎಂದು ವಿದ್ಯಾರ್ಥಿನಿಯರಾದ ರಾಜೇಶ್ವರಿ ಈಶ್ವರಪ್ಪ ಗೋಳ, ಭಾಗ್ಯಶ್ರೀ ಹೊಸಮನಿ,ಕಾಂಚನಾ ಹಡಪದ, ರಾಜೇಶ್ವರಿ ಬೇನೂರ, ಸೇರಿದಂತೆ ವಿದ್ಯಾರ್ಥಿಗಳ ಜೊತೆ ಪಾಲಕರು ಆಗ್ರಹಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ರರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button