ಸಡಗರ ದೊಂದಿಗೆ ಜರುಗಿದ ಜೋಡಿ ರಥೋತ್ಸವ.

ಕೊಟ್ಟೂರು ಮಾರ್ಚ್.22

ಪಟ್ಟಣದ ಕೋಟೆ ಭಾಗದ ಪೂರ್ವದ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ರೇಣುಕಾಚಾರ್ಯರ ಸ್ವಾಮಿ ಮೂರ್ತಿಗಳ ಜೋಡಿ’ ರಥೋತ್ಸವ ಶುಕ್ರವಾರ ಸಂಜೆ 5.45 ರ ಸುಮಾರಿನ ಬ್ರಾಹ್ಮ ಮುಹೂರ್ತದಲ್ಲಿ ಭಕ್ತರ ಸಡಗರ ಸಂಭ್ರಮಗಳೊಂದಿಗೆ ಜರುಗಿದವು.ರಥೋತ್ಸವ ಚಾಲನೆ ಪಡೆಯುವುದಕ್ಕಿಂತ ಮುಂಚಿತವಾಗಿ ಉಭಯ ದೇವರುಗಳ ಮೂರ್ತಿಗಳನ್ನು ಆಯಾಗಾರ ಬಳಗದವರು ದೇವಸ್ಥಾನ ದಿಂದ ಸಕಲ ಬಿರುದಾವಳಿ ಗಳೊಂದಿಗೆ ಮೆರವಣಿಗೆ ಕೈಗೊಂಡು ಹೊರ ತಂದು ರಥಗಳ ಬಳಿಗೆ ತೆರಳಿದರು. ನಂತರ ಉತ್ಸವ ಮೂರ್ತಿಗಳನ್ನು ರಥದ ಸುತ್ತ ಮೂರು ಪ್ರದಕ್ಷಿಣೆಗಳನ್ನು ಹಾಕಿದರು. ವೀರಭದ್ರೇಶ್ವರದ ರಥದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಕ್ರಿಯಾ ಮೂರ್ತಿ ಆರ್, ಎಂ, ಶಿವಪ್ರಕಾಶ ಕೊಟ್ಟೂರು ದೇವರು, ರೇಣುಕ ಮೂರ್ತಿ ರಥದಲ್ಲಿ ಆಸೀನರಾಗಿದ್ದರು.ನಂತರ ಶ್ರೀಸ್ವಾಮಿ ಪಟಾಕ್ಷಿ ಹರಾಜು ಪ್ರಕ್ರಿಯೆ ನಡೆದು 1,50.000 ರೂ ಗಳಿಗೆ ಕೂಗಿ, ಹಳ್ಳಿ ಗಂಗಮ್ಮ ತನ್ನ ದಾಗಿಸಿಕೊಂಡರು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜೋಡಿ ರಥೋತ್ಸವಗಳು ಆರಂಭಗೊಂಡಿತು. ರಥೋತ್ಸವಗಳು ಗೌಡರ ಬೀದಿ, ಹಿರೇಮಠ, ಮುಖ್ಯ ರಸ್ತೆ ಮೂಲಕ ಸಾಗಿ ನಂತರ ದೇವಸ್ಥಾನದ ಬಳಿ ಬಂದು ನೆಲೆ ನಿಂತಿತು. ಆಯಗಾರ ಬಳಗದ ಆರ್,ಎಂ,ಗುರು, ಬಸವಸ್ವಾಮಿ, ಮಂಜುನಾಥಗೌಡ, ಕನ್ನಳ್ಳಿ ರಾಜಪ್ಪ, ಶಿವಕುಮಾರ ಗೌಡ, ರಾಜುಗೌಡ, ಸೋಮು, ಆರ್. ಎಂ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button