ಕೊಟ್ಟೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಪ್ರಕರಣ ದಾಖಲು.
ಉಜ್ಜನಿ ಮಾರ್ಚ್.26

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ಉಜ್ಜಿನಿ ಸರ್ಕಲ್ ಹತ್ತಿರ ವಾಲ್ ಕಟ್ಟೆಯ ಬಳಿ ದಿನಾಂಕ 25 ಮಾರ್ಚ್ 2024 ರಂದು ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿಯ ಮೇರೆಗೆ ಶ್ರೀ ಹರಿಬಾಬು ಮಾನ್ಯ ಎಸ್ ಪಿ ಸಾಹೇಬರು ವಿಜಯನಗರ ಜಿಲ್ಲೆಯ ಶ್ರೀ ಮಲ್ಲೇಶಪ್ಪ ಮಲ್ಲಾಪುರ ಮಾನ್ಯ ಡಿ ವೈ ಎಸ್ ಪಿ ಸಾಹೇಬರು ಕೂಡ್ಲಿಗಿ ವಿಭಾಗ ಸ್ತ್ರೀ ವಿಕಾಸ್ ಸಿಪಿಐ ಹೆಚ್ಬಿಹಳ್ಳಿ ಇವರುಗಳ ಮಾರ್ಗದರ್ಶನದ ಮೇರೆಗೆ ಶ್ರೀಮತಿ ಗೀತಾಂಜಲಿ ಸಿಂಧೆ ಪಿಎಸ್ಐ ರವರು ಪಂಚರ ಸಮಕ್ಷಮ ಪಿ ಸಿ 211 ಯರ್ರಿಸ್ವಾಮಿ ಪಿ ಸಿ166 ವೀರೇಶ್ಪಿ ಸಿ 494 ಶಶಿಧರ್ ರವರೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಆಟ ನಡೆಯುತ್ತಿದ್ದ ಗೌರಳ್ಳಿ ಬಸವರಾಜ್ ತಂದೆ ಲೇಟ್ ಷಣ್ಮುಖಪ್ಪ 50 ವರ್ಷ ಮುದುಕನಕಟ್ಟಿ ಏರಿಯಾ ಕೊಟ್ಟೂರು ಪಟ್ಟಣ ಇವರು ಹಾಗೂ ಸಂಗಡಿಗರು ಮೇಲೆ ದಾಳಿ ಮಾಡಿ ಇವರಿಗೆ ವಶಕ್ಕೆ ಪಡೆದುಕೊಂಡು, ಈತನಿಂದ ಕ್ರಿಕೆಟ್ ಬೆಟ್ಟಿಂಗ್ಗೆ ಸಂಬಂಧಿಸಿದ 1) 1,500 ನಗದು ಹಣ 2) ಒಂದು ನೋಟ್ ಪುಸ್ತಕ 3)ಒಂದು ಬಾಲ್ ಪೆನ್ 4)20,000 ಬೆಲೆ ಬಾಳುವ ಒಂದು ಸ್ಕ್ರೀನ್ ಟಚ್ ಮೊಬೈಲ್ ಫೋನ್ ಇವುಗಳನ್ನು ಜಪ್ತಿಪಡಿಸಿ ಕೊಳ್ಳಲಾಗಿದ್ದು ಈ ಬಗ್ಗೆ ಕೊಟ್ಟೂರು ಠಾಣೆ ಗುನ್ನೆ ನಂಬರ್: 53/2024 ಕಲಂ. 78 (1) (ಎ)(6) ಕೆ ಪಿ ಯಾಕ್ಟ್ ರಿತ್ಯ ಪ್ರಕರಣ ದಾಖಲಾಗಿರುತ್ತದೆ.ಅದಲ್ಲದೆ ಅದೇ ದಿನ ಇನ್ನೊಂದು ಕ್ರಿಕೆಟ್ ಬೆಟ್ಟಿಂಗ್ ಕೇಸ್ ದಾಖಲು ಮಾಡಿದ್ದು ಆರೋಪಿದಾರ ವಿ ಕೊಟ್ರೇಶ್ ಮತ್ತು ಸಂಗಡಿಗರ ಮೇಲೆ ದಾಳಿ ಮಾಡಿ ಇವರುಗಳಿಂದ 1) ಒಂದು ನೋಟ್ ಪುಸ್ತಕ 2) ಒಂದು ಬಾಲ್ ಪೆನ್ 3) 21,000 ಬೆಲೆಬಾಳುವ ಸ್ಕ್ರೀನ್ ಟಚ್ ಮೊಬೈಲ್ ಫೋನ್ ಇವುಗಳನ್ನು ಜಪ್ತಿಪಡಿಸಿ ಕೊಳ್ಳಲಾಗಿದ್ದು ಈ ಬಗ್ಗೆ ನಂಬರ್ 54/2024 ಕಾಲಂ 78 (1) (ಎ)(6) ಕೆಪಿ ಯಾಕ್ಟ್ ರಿತ್ಯ ಪ್ರಕರಣ ದಾಖಲಾಗಿರುತ್ತದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು