ಶ್ರೀ ಶೈಲ ಮಲ್ಲಿಕಾರ್ಜುನ ದೇವರ ದರ್ಶನ ಕೈಗೊಂಡ ಪಾದ ಯಾತ್ರಾರ್ಥಿಗಳಿಗೆ – ಆರೋಗ್ಯ ಇಲಾಖೆಯಿಂದ ಉಪಚಾರ ಕೈಗೊಂಡರು.
ಕಲಕೇರಿ ಮಾರ್ಚ್.28

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ದಿನಾಂಕ 27-03-2024 ರಂದು ಸಮುದಾಯ ಆರೋಗ್ಯ ಕೇಂದ್ರ ಕಲಕೇರಿಯಲ್ಲಿ ಶೀ ವೀರಗಂಟಿ ಮಡಿವಾಳೇಶ್ವರ ದೇವಸ್ಥಾನದ ಆಭರಣದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯಲು ಪಾದಯಾತ್ರೆ ಮಾಡುತ್ತಿರುವ 500 ಕ್ಕಿಂತ ಹೆಚ್ಚು ಭಕ್ತರಿಗೆ ಚಿಕಿತ್ಸೆ ಮಾಡಿ ಔಷಧಿ ಉಪಚಾರ ಮಾಡಲಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಎಸ್ ಬಿ ಜೇವೂರ .ಎಸ್ ಎಸ್ ತಿಮ್ಮಾಪುರ ಜ್ಯೋತಿ ತಳ್ಳೂಳ್ಳಿ ಹಾಗೂ ಎಲ್ಲಾ ಆಶಾ ಕಾರ್ಯಕರ್ತರು. ನಿರ್ಮಲಾ ಕಲಕೇರಿ. ಗೀತಾ ಜಂಗಾಣಿ. ಮೀನಾಕ್ಷಿ ಬೇನಾಳ. ಸುನಂದ ಮೋಪಗಾರ. ವಿಜಯಲಕ್ಷ್ಮಿ ಇಳಕಲ್. ಶಶಿಕಲಾ ಮೋಪಗಾರ. ಆರೋಗ್ಯ ಇಲಾಖೆ ಎಲ್ಲಾ ಸಿಬ್ಬಂದಿ ಆಶಾ ಕಾರ್ಯಕರ್ತರು ಶ್ರೀಶೈಲಿಗೆ ಹೋಗುವಂತ ಭಕ್ತರಿಗೆ ಚಿಕಿತ್ಸೆಯನ್ನು ಮಾಡಿ ಔಷದಗಳನ್ನು ಕೊಟ್ಟು ಅವರ ಆರೋಗ್ಯವನ್ನು ತಪಾಸಣೆ ಮಾಡಿ ಪಾದಯಾತ್ರೆಯಲ್ಲಿ ಹೋಗುವ ಭಕ್ತರಿಗೆ ಎಲ್ಲಾ ಸಿಬ್ಬಂದಿ ವರ್ಗ ಸೇವೆಯನ್ನು ಸಲ್ಲಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ